ಪುಟ:ಮಿತ್ರ ದುಖಃ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈಗೆಷ್ಟೋ ವರ್ಷಗಳಿಂದ ಈ ವಿಶ್ವವಲಯದ ಸುತ್ತಲೂ ನಾನು ಭ್ರಮಣಮಾಡುತ್ತಲಿದ್ದೇನೆ. ಇಂದಿಗೂ ನನಗೆ ಅವನ ದರ್ಶನವಾಗಿರುವದಿಲ್ಲ. ಆದರೆ ಆ ವಿಶ್ವೇಶ್ವರನನ್ನು ಇನ್ನು ಹುಡುಕದೆ ಬಿಡುವಹಾಗಿಲ್ಲ. ಎಂಬ ದೃಢನಿಶ್ಚಯದಿಂದ ನಾನು ನನ್ನಿ ಸಂಕ್ರಮಣವನ್ನು ಪ್ರಾರಂಭಿಸುತ್ತೆನೆ ಅವನು ಎಲ್ಲಿಯಾದರೂ ಕತ್ತಲೆಯಲ್ಲಿ ಅಡಗಿಕೊಂಡು ಕೂತಿರದಿದ್ದರೆ; ನಾನು ಅವನನ್ನು ಶೋಧಿಸದೆ ಬಿಡಲಿಲ್ಲ. ಯಾವನು ಬಾನೊಬ್ಬ ಅಜ್ಞಾನಾಂಧ ಡೋಂಗಿಗೆ ಕೂಡ ಕಾಣುತ್ತಾ ನೆಂದು ಅನ್ನುತ್ತಾರೆಯೋ, ಅವನು ಜಗಜರು ರ್ಭೂತನಾದ ಈ ಸೂರ್ಯನಿಗೆ ಕಾಣಬಾರದೆಂಬದು ಬಹಳ ಸೋಜಿಗದ ಸಂಗತಿಯಾಗಿರುತ್ತದೆ.

ಹೀಗೆ ಸೂರ್ಯನು ನುಡಿದನು, ಆದರೆ ಈ ಭಾಷಣದ

ಕಡೆಕಡೆಯ ಭಾಗವು ಚಂದ್ರನಿಗೆ ಕೇಳಿಸಲೇ ಇಲ್ಲ. ಆಗ ಆ ಇಬ್ಬರ ರಥಗಳ ನಡುವೆ ಬಸತಿ ಆಂತರವಾಯಿತು. ನೂ ರ್ಯನ ರಥವು ಬಹು ಒತ್ತರದಿಂದ ನಡೆಯತೊಡಗಿತ.. ಹಾಗು ಚಂದ್ರನು ಕ್ರವು ಕ್ರಮವಾಗಿ ಹಿಂದೆ ಬೀ'ನರ ದನು. ಈ ಪ್ರಕಾರವಾಗಿ ಆ ಸೂರ್ಯ-ಚಂದ್ರರ ರರಗಲ್ ನಡುವಿನ ಅಂತರವು ಕ್ರಮೇಣ ಹೆಚ್ಚಾಗುತ್ತ ನಡೆದದ ರಿಂದ ಅವರೀರ್ವರ ಭಾಷಣವು ಸಹಜವಾಗಿಯೇ ಅಶಕ್ಯ ವಾಗಿ ಅದು ಕಟ್ಟಾಗಿಹೋಯಿತು.