ಪುಟ:ಮಿತ್ರ ದುಖಃ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೪೧ ---

ತು, ನಿನ್ನ ಇಂಥ ಮರಣೋನ್ಮುಖವಾದ ಅವಸ್ಥೆಯಲ್ಲಿ ಯ ನಿನ್ನೊ ಬ್ಬನನ್ನೇ ಬಿಟ್ಟು ಕೊಟ್ಟು, ನಾನು ನನ್ನ ಕೆಲಸದ ಮೇಲೆ ಹಾಜರಾಗಲಿಕ್ಕೇ ಬೇಕಾಗಿರುತ್ತದೆ. ಪರಾಧೀನ ತೆಯ ಬಗ್ಗೆ ಉಪಾಯವೇ ಇಲ್ಲ! ಈ ದುಃಸ್ಥಿತಿಯಲ್ಲಿ ನಾನು ನಿನ್ನ ಬಳಿಯಿಂದ ಹೋಗುವಂತೆಯಇಲ್ಲ; ನಿಲ್ಲುವಂತೆಯೂ ಇಲ್ಲ.

ಹೊರಟು ಹೋಗಲಿಕ್ಕೆ ಕೈಸನ್ನೆ ಯನ್ನು ಮಾಡುತ್ತ

ಸೂರ್ಯನು ಚಂದ್ರನನ್ನು ಕುರಿತು-ಹೋಗು, ಹೋಗು; ಚಂದ್ರಾ, ನೀನು ಹೊರಟು ಹೋಗು. ಚಂದಾ, ನೀನು ನಿಂತರೂ ನನ್ನ ಸಂತಾಪವು ಸ್ವಲ್ಪವೆ ನಿಲ್ಲುವಂತಿದೆ. ಅದು ನನ್ನ ಜೀವಿತದೊಡನೆಯೇ ಲಯವಾಗತಕ್ಕದ್ದು; ಅದ್ದರಿಂದ ನಿನಗೆ ನನ್ನ ಕಡೆಗೆ ಲಕ್ಷ ಗೊಡದೆ ಹೊರಟುಹೋಗೆಂ ದು ಹೇಳುತ್ತೇನೆ. ನಿನ್ನಂತೆ ನನಗಾದರೂ ಇಂಥ ಈ ಕುಣ ಸ್ಥಿತಿಯಲ್ಲಿಯೂ ಸ್ವೀಕೃತ ಕಾರ್ಯಕ್ಕಾಗಿ ನನ್ನ ದಾರಿ ಯ ಹಿಡಿಯಬೇಕಾಗಿದೆ. ನಮೀ ರ್ವರ ಈ ಕ್ಷಣಿಕ ಸುಖಕರ ವಾದ ಬಂಧ:-ಸಮಾಗಮದ ಅವಧಿಯು ತೀರಿತು. ಇಗೋ ಇತ್ರ ನೋಡು, ನನ್ನ ರಥವೂ ಬೇರೆ ದಿಕ್ಕಿನ ಮಾರ್ಗವನ್ನು ಹಿಡಿಯಿತು. ನಾವು ಹೀಗೆ ಪರಸ್ಪರರ ಕಡೆಯ, ಭಟ್ಟಿಯನ್ನು ತಕೊಳ್ಳ ಹತ್ತಿರುವಷ್ಟರಲ್ಲಿ, ಇದು ನೋಡು, ನಮ್ಮಿರ್ವರ ರಧಗಳ ನಡುವೆ ಎಷ್ಟೊಂದು ಅಂತರವಾಯಿತು!ಅರುಣಾ, ನಮ್ಮಿಬ್ಬರು ಬಂಧುಗಳ ಈ ಕಡೆಯ ಬೆಟ್ಟಿಗೆ ಸ್ವಲ್ಪಾದರೂ ಹೆಚ್ಚು ವೇಳೆ ಸಿಗಲೆಂದು ನೀನು ನನ್ನ ಕುದುರೆಗಳ ಕಡಿವಾಣಗ ಳನ್ನು ಬಹು ನಿಷ್ಟುರತೆಯಿಂದ ಜಗ್ಗಿ ಹಿಡಿಯುತ್ತಿರುವೆ; ಆದರೆ ಇದರಿಂದೆಷ್ಟು ವೇಳೆ ಸಿಕ್ಕಿತು? ನಾನೂ ಹೊರಡಲೇಬೇಕು!-- ಚಂದ್ರಾ, ಹೋಗು, ನೀನು ಇನ್ನು ಹೊರಟುಹೋಗು... ಅರುಣಾ, ಕುದುರೆಗಳ ಲಗಾಮುಗಳನ್ನು ಜಗ್ಗ ಬೇಡ, ಬಿಡು. ನನ್ನ ಸಲುವಾಗಿ ಪಾಪ! ಆ ಬಡ ಪ್ರಾಣಿಗಳಿಗಾಗುವ ಕಷ.