ಪುಟ:ಮಿತ್ರ ದುಖಃ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೩೮ ---

ರೂ ಎಷ್ಟೊತ್ತಿನವರೆಗೆ ಪರಸ್ಪರರ ಸನ್ನಿಧಿಯಲ್ಲಿ (ಪರಸ್ಪರರ ಸಹವಾ ಸದಲ್ಲಿ) ರತಕ್ಕದ್ದು ಹಾಗು ಎಷ್ಟೊತ್ತಾದನಂತರ ನಾವು ನಮ್ಮ ಯತಿಯಿಂದ ವಿಭಕ್ತರಾಗಿ ಬೇರೆ ಬೇರೆ ಮಾರ್ಗಗಳಿಂದ ಹ್ಯಾಗೆ ದಾಲಕ್ರವಿಸತಕ್ಕದ್ದು ಎಂಬದನ್ನು ಕೂಡ ಅವರು ನಿಶ್ಚಯಿ ಸಿದ್ದಾರೆ. ಇಷ್ಟೇ ಅಲ್ಲ, ಅವರು ಗೊತ್ತುಪಡಿಸಿದ ನಮ್ಮ ಇಂದಿನ ಸಂಯೋಗಕಾಲವು ಈಗ ತೀರ ಸಮೀಪಿಸಿದಂತಾಗಿದೆ. ಯಾಕಂದರೆ, ಗಣಕರು ಈ ದಿವಸ ಅಮಾವಾಸ್ಯೆಯನ್ನು ಬಹಳ ಸ್ವಲ್ಪ ಗಳಿಗೆ ಇಟ್ಟಿದ್ದಾರೆ; ಹಾಗು ಅವರು ಇಂದೇ ಪ್ರತಿಪದೆಯನ್ನು ಗಣಿಸಿರುವದುಂದ, ಇಂದು ಸಾಯಂಕಾಲ ದಲ್ಲಿ ಭೂಮಿಯ ಮೇಲಿನ ಜನರಿಗೆ ಪ್ರತಿಪದೆಯ ಚಂದ್ರ ದರ್ಶ ನವು ಆಗಿಯೇ ತೀರಬೇಕೆಂಬ ಅವರ ಸಕ್ತ ಹುಕುಂ ನನಗಾ ಗಿದೆ. ಜ್ಯೋತಿಷಿಗಳ ಈ ಹುಕುಮಿನ ಸಂಗತಿಯು ಭೂಮಂ ಡಲದಲ್ಲಿ ಈ ಪೂರ್ವದಲ್ಲಿಯೇ ಪ್ರಕಟವಾಗಿರುವದರಿಂದ ಪೃಥ್ವಿತಲದ ಮೇಲಿನ ಜನರು ನನ್ನನ್ನು ನೋಡುವಕ್ಕಾಗಿ ಪಶ್ಚಿಮ ದಿಕ್ಕಿನ ಅಕಾಶದ ಕಡೆಗೆ ಉತ್ಸುಕತೆಯಿಂದ ಎವೆಯಿ ಇದೆ ನೋಡತೊಡಗಿದ್ದಾರೆ; ಮತ್ತು ಭಾವೀ ಸುವರ್ಣ ಲಾಭದ ಭ್ರಮೆಯಿಂದ ಅವರು ತಂತಮ್ಮ ಸದ್ಯದ ದೋತರ-ಪಂಜೆಗಳ ನೂಲುಗಳನ್ನು ಪರಿಹರಿದು ನನಗೇರಿಸಲಿಕ್ಕೆ ಸಿದ್ಧರಾಗಿರು ತ್ತಾರೆ. ಇತ್ತ ನೋಡು, ಈ ನೈದಿಲೆಗಳು (ಚಂದ್ರನನ್ನು ನೋಡಿ ಅರಳುವ ಕಮಲಗಳು) ಕೂಡ ನನ್ನ ದರ್ಶನದ ಆಪೇ ಕ್ಷೆಯಿಂದ ತಮ್ಮ ಮುಖಗಳನ್ನು ಮಂದ ಮಂದವಾಗಿ ಅರಳಿಸುತ್ತಿವೆ; " ಮತ್ತು ಈ ಚಕ್ರವಾಕ ಪಕ್ಷಿಗಳು ನನ್ನ ಒಂದೆರಡು ದಿನಗಳ ಅದರ್ಶನದಿಂದ ನೀರಡಿಸಿ, ಅಮೃತಬಿಂದು ಗಳನ್ನು ಕುಡಿಯಲಿಕ್ಕೆಂದು ಮೇಲೆ ಮೋರೆಮಾಡಿಕೊಂಡು, ಇನ್ನೂ ಬಿಸಿಲಿರುವದಾದರೂ ಆಕಾಶದಲ್ಲಿ ವಿಹರಿಸತೊಡಗಿವೆ. ಸಾರಾಂಶ, ಈ ಜ್ಯೋತಿಷಿಗಳು ತಮ್ಮ ಕಠಿಣವಾದ ನಿಯಮ