ಪುಟ:ಮಿತ್ರ ದುಖಃ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೩೭ ---

ಅಣ್ಣನ ಈ ಮರಣೇಚ್ಛೆಯ ವಾರ್ತೆಯನ್ನು ಕೇಳಿ ಸದ್ಗ

ದಿತ ಅಂತಃಕರಣದ ಚಂದ್ರನು ಗದ್ದ ದಸ್ವರದಿಂದ ಮಿತ್ರನನ್ನು ಕುರಿತು-ಎಲೈ ಸೂರ್ಯನಾರಾಯಣಾ, ಹೀಗೇಕೆ ಅಭದ್ರ ವಾಗಿ ನುಡಿಯುತ್ತೀ? ಹೀಗೆ ಅಶುಭವನ್ನು ಎಂದೂ ಮಾತಾಡ ಬಾರದು. ಒಬ್ಬಾನೊಬ್ಬ ದುಷ್ಟಜೋಯಿಸನು ನಿನ್ನ ವಿಷಯದ ಈ ಅನಿಷ್ಟ ಭವಿಷ್ಯವನ್ನು ತೆಗೆದಿರಬಹುದು; ಆದರೆ ಅವನ ಆ ನಿಂದ ಭವಿಷ್ಯವು ಎಲ್ಲಕ್ಕೂ ಮೊದಲು ಸುಳ್ಳಾಗಲೆಂದು ನಾ ನೊಬ್ಬನೇ ಇಚ್ಛಿಸುತ್ತಿರುವನಂತು, ಈ ತ್ರಿಭುವನ ವಾಸಿಗಳ ದ ಸಕಲ ಚರಾಚರ ಪ್ರಾಣಿಗಳ ಹಾಗೆ ಬಯಸುತ್ತವೆ. ಮತ್ತು ಇಂಧ ಮಹತ್ವದ ವಿಷಯದ, ಜನ್ಮ ಕಾಲವು ಗೊತ್ತಾ ಗದೆ ತೆಗೆದ ಮರಣಕಾಲದ ಭವಿಷ್ಯವು ನಿಜವಾದೀತೆಂಬದು ನನಗೆ ಸ್ವಲ್ಪವೂ ಶಕ್ಯವಾಗಿ ತೋರುವದಿಲ್ಲ. ಕೆಲವು ಸಣ್ಣ ಪ್ರಟ್ಟ ಬಾಬುಗಳಲ್ಲಿ ಈ ಗಣಕರ ಭವಿಷಗಳು ನಿಜವಾಗುವ ದು ಸತ್ಯವಿದೆ. ನಾವು ನವಗ್ರಹಗಳೆಲ್ಲರೂ ಸೈರ (ಮನಸಿಗೆ ಬಂದಹಾಗೆ ಸಂಚುಸುವವರು) ಸಂಚಾರಿಗಳೆಂದು ತಿಳಿದಿರು ತೇವೆ. ಆದರೆ ಈ ಜ್ಯೋತಿಷಶಾಸ್ತ್ರ ನಿಪುಣರು ನಮ್ಮ ಕೈ " ಕಾಲುಗಳನ್ನು ಕಟ್ಟಿ ಬಿಟ್ಟಿದ್ದಾರೆ; ಅವರು ಗೊತ್ತುಪಡಿಸಿದ ಕಾ ಲಕ್ಕಿಂತ ತುಸು ಮಟ್ಟಿಗೆ ಸಹ ನಾವು ಹೆಚ್ಚು-ಕಡಿಮೆ ಹಿಂದೆಮುಂದೆ ಆಗುವಂತಿರುವದಿಲ್ಲ. ಈ ದಿವಸ ಸೂರ್ಯನು ಇಂಥ ಸ್ಥಳದಲ್ಲಿರತಕ್ಕದ್ದು ಎಂದು ಅವರು ಹೇಳಿದರೆಂದರೆ ನೀನು ಸತ್ತು ಕೆಟ್ಟಾದರೂ ಆ ಸ್ಪಳವನ್ನು ಮುಟ್ಟಿಯೇ ತೀರಬೇಕಾ ಗುತ್ತದೆ. ಬಹಳ ಮಾತಾಡುವದರಿಂದೇನು ಪ್ರಯೋಜನ? ಹೇ ಸೂರ್ಯನಾರಾಯಣಾ, ನಾವೀಗ ನಮ್ಮ ಸುಖ-ದುಃಖಗಳನ್ನು ಪರಸ್ಪರರಿಗೆ ಹೇಳುತ್ತ ನಡೆದಿರುವೆನಷ್ಟೇ? ಇವನ್ನಾದರೂ ಬಾಳ ಹೊತ್ತಿನವರೆಗೆ ಒಟ್ಟಿಗೆ ಕುಳಿತು “ ತೋಡಿಕೊಳ್ಳಬೇಕೆಂದರೆ ಅದಕ್ಕೆ ಆ ಜೋಯಿಸರ ಸಮ್ಮತಿಯಲ್ಲಿರುವದು? ನಾವಿಬ್ಬ