ರಂಗಮ್ಮನ ವಠಾರ
9
ರಂಗಮ್ಮನ ವಠಾರ
“ಏನಪಾ, ದುಡ್ದುಗಿಡ್ದು ಏನಾದರೂ ಇಟ್ಟಿದೀಯಾ?"
ಆತ ಮುಖ ತಿರುಗಿಸಿಕೊಂಡು ಮತ್ತೊಮ್ಮೆ ಗಟ್ಟಿಯಾಗಿ ರೋದಿಸತೊಡಗಿದ.
ಸುಬ್ಬಕೃಷ್ಣಯ್ಯನೇನೋ ಅಂದ
ಏನಾದರೂ ಮಾಡೋಣ, ಏನಾದರೂ ಮಾಡೋಣ."
ಆದರೆ ಏನು ಮಾಡಬೇಕೆಂಬುದು ಮಾತ್ರ ಆತನಿಗೆ ಹೊಳೆಯಲಿಲ್ಲ. ತಿಂಗಳ
ಕೊನೆ...ಕಷ್ಟ ಕಾಲ...
ಬಾಪ್ಪ." ಎ೦ದೂ ಸುಬ್ಬುಕೃಷ್ಣಯ್ಯನಿಗೆ ಸನ್ನೆ ಮಾಡುತ್ತ ರಂಗಮ್ಮ ತಮ್ಮ
ಮನೆಯತ್ತ ನಡೆದರು. ನಡೆಯುತ್ತ ಅವರು ಇಳಿದನಿಯಲ್ಲಿ ಗೊಣಗಿದರು:
ಮೂರು ತಿಂಗಳಿಂದ ಬಾಡಿಗೇನೇ ಕೊಟ್ಟಿಲ್ಲ, ಬಡೀಗಂಡ, ಐವತ್ತೊಂದು
ರೂಪಾಯಿ!... ಈಗ ಹೆಣ ಎಥಾಕೋ ಕೆಲಸಾನೂ ನಾವೇ ಮಾಡ್ಬೇಕು..ಹುಂ.."
ರಂಗಮ್ಮನವರೇ ತಮ್ಮ ಕತ್ತಲು ಮನೆಯನ್ನು ಹೊಕ್ಕು, ತಮ್ಮ ಕೊರಳಿನಲ್ಲಿದ್ದ
ಬೀಗದ ಕೈ ತಿರುವಿ, ಹಳೆಯ ಕಬ್ಬಿಣದ ಪೆಟ್ತಿಗೆಯ ಬಾಗಿಲು ತೆರದು, ಐದು ರೂಪಾಯಿ ಯಿಯ ಒಂದು ನೋಟನ್ನು ಎತ್ತಿಕೊಂಡರು. ಬಾಗಿಲಲ್ಲೆ ನಿಲ್ಲಿಸಿ ಬಂದಿದ್ದ ಸುಬ್ಬ ಕೃಷ್ಣಯ್ಯನಿಗೆ ಅದನ್ನು ಒಯ್ದುಕೊತ್ತರು. ಕೊಡುತ್ತ ಅವರೆಂದರು:
"ಪಾಪ!ಕಷ್ಟ್ದಲ್ಲಿದ್ದಾನೆ, ಏಳೇಳು ಜನ್ಮದ ವೈರಿಗೂ ಬೇಡ ಅ ಶಿಕ್ಷೆ"
ಸುಬ್ಬುಕೃಷ್ಣಯ್ಯ ತಲೆತುರಿಸುತ್ತ ನಿಂತ. ಎಲ್ಲಿಗೆ ಸಾಕು ಆ ಐದು ರೂಪಾಯಿ?
"ಇಷ್ಟಿತ್ಲಿ ನನ್ನ ಲೆಕ್ಕಕ್ಕೆ. ಉಳಿದಿರೋದು ನೀವೆಲ್ಲ ಸೇರ್ಕೊಂಡು ಏನಾದರೂ ಮಾಡಿ."
ಆ ಏರ್ಪಾಟಿಗೆ ಮಹಾ ಯಶಸ್ಸು ದೊರೆಯದೇ ಹೋದರೂ ಅದು ಪೂರ್ತಿ
ವಿಫಲವಾಗಲಿಲ್ಲ. ಕೆಲ ಮನೆಯವರು ಗಂಡಸರು ಬರಲೆಂದರು. ಉಳಿದವರು ಕೆಲವರು ಗಂಟೆಗೆ ಗಂಟುಹಾಕಿ ಕೂಡಿಟ್ಟಿದ್ದ ಚಿಲ್ಲರೆ ಹಣವನ್ನು ತೆಗೆದು ಕೊಟ್ಟರು.
ರಂಗಮ್ಮ ಹೆಬ್ಬಾಗಿಲ ಬಳಿಯಲ್ಲಿ ನಿಂತು ತಮ್ಮ ವಠಾರಕ್ಕೆಲ್ಲ ಕೇಳಿಸುವ ಹಾಗೆ
ನುಡಿದರು"
"ಕೊಡಿಯಪ್ಪಾ ಕೊಡಿ ಕಷ್ಟ ಕಾಲದಲ್ಲಿ ಮನುಪ್ನಿಗೆ ಮನುಷ್ನೇ ಆಗ್ಬೇಕಲ್ವೆ
ಮರ ನೆರವಾಗುತ್ಯೆ?"
ಅಷ್ಟರಲ್ಲ್ಲೆ ಗುಂಡಣ್ಣ ಬಂದ, "ಹೆಆಆನ ಹೊರೋಕೆ ಆದೀಯಾ ನೀನು" ಎಂಬ
ಬೈಗಳನ್ನು ಎಷ್ಟೋ ಸಾರಿ ತಾಯಿಯ ಕೈಯಲ್ಲಿ ಆತ ಕೇಳಿದ್ದ. ಆದರೆ ಅದು ನಿಜ ವಾಗಿರಲಿಲ್ಲ. ಸ್ವಂತಕ್ಕೆ ಕಾಸಿನ ಪ್ರಯೋಜನವಾಗದೆ ಹೋದರೂ ಪರೋಪಕಾರ ಮಾಡುವುದರಲ್ಲಿ ಆತನದು ಎತ್ತಿದ ಕೈ. ಈಗ, ಮುಟ್ಟಿದರೆ ನುರಿದು ಬೀಳುವಂತಹ ಸೈಕಲೊಂದನ್ನು ದೊರಕಿಸಿಕೊಂಡು, ನಗರದ ಬೇರೆ ಬೇರೆ ಭಾಗಗಳಲ್ಲಿ ಮಡಿಯುತ್ತಿದ್ದ ವಠಾರದ ನಾಲ್ಕಾರು ಜನ ಗಂಡಸರಿಗೆ ಸಾವಿನ ಸುದ್ದಿ ತಿಳಿಸಲು ಆತ ಧಾವಿಸಿದ.
ನಾರಯಣಿಯನ್ನು ಬೀಲ್ಕೊಡದೆ ಆ ವಠಾರದ ಜನರಿಗೆ ಊಟವಿಲ್ಲ. ಪ್ರತಿ