ಪುಟ:ಬೃಹತ್ಕಥಾ ಮಂಜರಿ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಬ ಹ ಥಾ ನ ೦ ಜಿ ರಿ . ಆತ್ಮನಾಶ ಲಭಿಸುವದ೦ದೊರೆಯುವ ಮಂತ್ರಿಯ ಮಾತಂ ಕೇಳುತಾ ಕೋಪಾ ರೂಢನಾಗಿ, ಛ ದುರತ್ನ ಕನೇ ? ನನಗೆ ಪ್ರತಿಯಂ ಹೇಳುವಿಯಾ ಎಂದು ಗರ್ಜಿ ಸಲು ಪರಾಧೀನವೃತ್ತಿಯೇ ನೀಚತರವೆಂದರಿತು, ಆಜ್ಞಾನುಸಾರ ನೆರವೇರಿಸು ವೆನೆಂರೊರದು, ಕಾಯನಂ ಬೀಳೆಬೈ ವನಾಗಿ ರಾಜ ಪುರೋಹಿತನೊಡಗೊಂಡು ಬಂದು ಅಜ್ಞಾನುಸಾರವಾಗಿ ಸಕಲ ಸಾಮಗ್ರಿಗಳಂ ಸಿದ್ದಗೊಳಿಸಿಕೊಂಡು ಕಾದಿರ್ದ೦, ದೊರೆಯು ತನ್ನ ಮಗಳಾದ ನಂದಿನಿಯಂ ಕರೆಯಿಸಿ, ಅಮ್ಮಸುಕುಮಾರಿಯೇ? ನಿಮ್ಮ ಅತ್ತೆಮಾವಂದಿರು ಬಂದು ಪುರೋ ದ್ಯಾನದೊಳಿಳಿದಿಹರು, ನಿನ್ನ ನೋಡಬೇ ಕೆಂದು ಬಯಸುವರಂತೆ ಅವರಿಲ್ಲಿ ಬರಲೊಲ್ಲರು, ದುಃಖಿತರಾದವರಂ ಸಮಾಧಾನ ಗೊಳಿಸುವದು ಲೇಸು, ಆದ್ದರಿಂದ ನೀ೦ ಪೋಗಿ ಅವರಂ ಕಂಡು ನಾಲ್ಕು ಮಾತ ನಾಡಿ, ಆ ಕೂಡ್ಡೆ ಹಿ ತಿರಿಗಿ ಬಾ ನಿನ್ನ ಬಿಟ್ಟು, ನಾನರಗಳಿಗೆಯೂ ಇರಲಾರ ನಂದು ಕಪಟೆಕ್ಕಿಗಳಂ ನುಡಿಯೆ, ನಿಜವೆಂದರಿ ತಾ ನಂದಿನಿಯು ತಾತಂಗರಗಿ, ತಾಯಿಯ ಬಳಿಯ ಸಾರೆ, ಮಂಗಳ ಮುಚ್ಚಿ ನಾಲ೦ಕಾರ ದಿವ್ಯಾನ್ನ ಭೋಜನಂ ಗಳಂ ಮಾಡಿಸಿ, ಮನದೊಳು ಅಯ್ಯೋ ಇಂದಿಗಿವಳ ಋಣಾನುಬಂಧವು ತೀರಿದುದೇ? ಎಂದು ದುಃಖಿಸುತ, ಭಾವವಂ ಹೊರಸೂಸದೆ ಮಾರ್ಗಕ್ಕೆ ಬುತ್ತಿಯಂ ಕಲಿ ಸಿ ಕೊಟ್ಟು ಆಲಿಂಗಿಸಿಕೊಂಡು ಗಟ್ಟಿಯಾಗಿ ಅತ್ತು ಬೀಳ್ಕೊಡಲು, ಅಲ್ಲಿಂ ಬಂದು ಅಂದಳವನ್ನೇರಿ ಕುಳಿತುಕೊಳ್ಳಲು, ತಕ್ಕ ಪರಿವಾರದೊಡನೆ ಮಂತ್ರಿಯು ಆ ಪಲ್ಲ ಕ್ಕಿಯನ್ನೆರಿದ ನಂದಿನಿಯೊಡನೆ ಹೊರಟು ಬಹುದೂರಂ ಆಕೆಗೆ ಅರುಹದಂತೆ ಕರೆ ದೊಯು , ಸೂರಾ ಸಮಾನಮಾಗೆ ಘೋರಾರಣ್ಯ ಮಾರ್ಗವಾಗಿ ಸಾರಿ ಹೋಗು ತ್ಯ ಕತ್ತಲೆಯಾಗೆ ಆನಂದಿನಿಗೆ ನಿದ್ರಾದೇಶಂ ಬಂದು ಮೈಮರೆದೊಗಲು, ಅದಂ ಕಂಡು ಪರಿವಾರವೆಲ್ಲಮಂ ಹಿ೦ಗಳುಹಿ ತಾಂ ಕೆಲಹೊತ್ತಲ್ಲಿರ್ದು ಸದ್ದು ಗೈಯ್ಯದ ಹಿಂದಕ್ಕೆ ಬಂದು, ಎಲ್ಲ ರೊಳು ಸೇರಿ, ಆ ರಾತ್ರಿಯೇ ಪುರವಂ ಸಾರಿ, ಈ ಕ ಮ೦ ರಾಯಂಗರುಹಿ, ತನ್ನ ಮನೆಯಂ ಹೊಂದಿ, ತಾ ಮಾಡಿದ ನೀ ಚಕಾರಮಂ ಚಿಂತಿ ಸುತ ಮಲಗಿದfo. ಇತ್ರಲಾ ನಂದಿನಿಯು ನಿದ್ದೆಯಂ ತೊರೆದು, ತನ್ನ ಗೌಡಿಯರಂ ಪೆಸರಿಟ್ಟು ಕೂಗಲು, ಪ್ರತಿಧ್ವನಿ ಬಾರದಿರೆ ಮಂತ್ರಿಯಂ ಕರೆಯಲು, ಆತನು ಪ್ರತ್ಯುತ್ತರಾ ಹೈದ ಪೋಗಲು, ಕೆಲಕಾಲಂ ಸುಮ್ಮನಿದು ಮರಳಿ ಕೂಗಲು ಅಂತೆಯೇ ನಿಶ್ಯಬ್ದವಾಗಿರಲು ಕಿವಿಗೊಟ್ಟು ಆಲಿಸಲು, ಕ್ರೂರ ಮೃಗ ಪಕ್ಷಿಗಳ ಘೋರ ಧ್ವನಿಯು ಕೇಳಿಬರಲು, ಇದು ಘೋರಾರಣ್ಯವಾಗಿರಬಹುದೆಂದು ಯೋಚಿಸುತ್ತಾ ಹೊರಗೆ ಬಂದು ನೋಡೆ, ತನ್ನ ಮನೋಗತಮೇ ನಿಜಮಾಗೆ ಭಯಾಕ್ರಾಂತಳಾಗಿ ಪಲ್ಲಕ್ಕಿಯಂ ಸಾರಿ ಬಾಗಿಲ್ಗಳಂ ಮುಚ್ಚಿಕೊಂಡು, ಹಾ ? ಹೀಗಾಗುವದಕ್ಕೆ ಕಾರ ಣವೇನು, ಇದೇ೦ ಕನಸೇ ಅಲ್ಲದೇ ಭ್ರಾಂತಿಯೋ ಅಲ್ಲ ದೊಡೆ ನಿಜವಾಗಿ