ಪುಟ:ಬೃಹತ್ಕಥಾ ಮಂಜರಿ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಬ ಹ ಥಾ ನ ೦ ಜ . ಗರ್ಭವತಿಯಾಗಿರುವಳು, ಕಾರಣವಂ ವಿಚಾರಿಸಲು ಯತ್ನಿಸಿದೊಡೆ, ಲೋಕದ ಪ್ರಖ್ಯಾ ತಿಯು ಹರಡಿಕೊಳ್ಳುವದು ಇದಕ್ಕೆ ಮುನ್ನವೇ ಈ ನನ್ನ ಕುವರಿಯಂ ಅತ್ತೆ ಮಾ ವಂದಿರಂ ನೋಡಿ ಬರುವದೆಂದು ಪ್ರಯಾಣಮಂ ಮಾಡಿ ಕಳುಹಿಸಿಕೊಡುವನು. ಮನೋವೃತ್ತಿಯಂ ಹೊರಪಡಿಸದೆ ನೀವಿರರೂ ಜೊತೆಯೊಳು ಹೊರಟು ಹೋಗಿ ನಮ್ಮ ದೇಶದ ಸರಹದ್ದಿನ ಕೊನೆಯೋಳು, ಮಹದಾರಣ್ಯ ಮಂ ನೋಡಿಸುತ್ತ ಎರಡು ಗಾವುದ ಜನ ಸಂಚಾರವಿಲ್ಲದೆಡೆಯೊಳು ಕಾರ್ಗತ್ತಲೆಯೊರಗಿದಾಗ ಆ ಬಳಿಯೊಳಾ ನಂದಿನಿಗೆ ತೋರದಂತೆ ಬಿಟ್ಟು ಬರಬೇಕೆಂದು ನುಡಿಯೆ ಅಜಂ ಕೇಳುತಾ ಮ೦ತ್ರಿ ಶೇ ಖರನು ಎಲೈ ಮಹಾರಾಜನೇ ಲಾಲಿಸು ! ಯಾವ ಕಾರಣನಾದರೂ ತಾ೦ ಕಣ್ಣಾರ ಕಂಡ ಹೊರತು ಪರಿಕಿಸಿದ ಹೊರೆತು ಮುಂದಾಲೋಚಿಸಲಾಗದು, ತತಾ; ಇಂಥಾ ಸಂದರ್ಭಗಳೊಳು ಬಹುತರಮಾಗಿ ಪಾಲೋಚಿಸಿದರೇ ನೇ ವಿನಾ ದುಡುಕಬಾ ರದು, ಇಂಥಾ ಸಂದರ್ಭ ಗರ್ಭಿತವಾದಂದಿತಿಹಾಸವಿಫ೯ದು ಅದನೆರವೇ೦ ಲಾಲಸೆಂದು ಪೇಳತೊಡಗಿದ. ಮಂತ್ರಿಯು ಸಂದರ್ಭಾನುಸಾರವಾಗೊರೆಯುವ ಕಡೆ.

"# 17 : ಈ ಧರಾಮಂಡಲದೊಳು ಭೋಗವತಿಯೆಂದು ಪ್ರಸಿದ್ಧವಾದುದೊಂದು ಪದ ಭೇದನವಿರ್ದುದು, ಚಂದ್ರ ಚಡನೆಂಬೊರ್ವ ತಿರೆಯರಸನದಂ ಪಾಲಿಸುತ್ತಿದ೯೦, ವಂದಯಾನೆಯೆಂಬ ಹೆಸರುಳ್ಳ ಚಂದಿರಾಸ್ಥಿವ೯೮ ಕುವರಿಯಾಗಿದ೯೮ಆಕೆ ಯು ವಿನೋದಾರ್ಥವಾಗಿ ಒಂದು ಲೀಲಾಕರವೆಂಬ ಹೆಸರುಳ್ಳ ಅರಗಿಳಿಯು ಪೊರೆ ಯುತ್ತಾ, ಸಕಲ ಭಾಷೆಗಳಂ ಅಭ್ಯಾಸಗೊಳಿಸಿದ, ಆ ಗಿಳಿಯು ಸಮಸ್ಯ ಭಾಷಾರಚಿತವಾದುದಾಗಿ ಚಿತ್ರರಂಗಳಾದ ಇತಿಹಾಸಗಳಂ ಮುಖ್ಯವಾಗಿ ಪತಿ ವ್ರತಾ ಧರ್ಮಗಳನ್ನೇ ಬೋಧಿಸುತ್ತಾ ಬರಲು ಅದರೊಳತ್ಯಂತ ಆನುರಾಗ ಪರ ಳಾಗಿ ಅದರ ಆಹಾರಾರ್ಥವಾಗಿ ದಿವ್ಯ ಸಂಪಕ್ರಫಲಂಗಳಂ ತರಿಸಿ ತಿನ್ನಿಸುತ್ತಾ ಕಾಲ ಕಾಲಕ್ಕೆ ಕ್ಷೀರಾನ್ನಾದ್ಯಾಹಾರಂಗಳಂ ಕೊಡುತ್ತಾ ಪರವಾನುರಾಗದಿಂ ಪೋಷಿ ಸುತ್ತಾ ರಾತ್ರಿ ಕಾಲ೦ಗಳೊಳು ಆಶುಕವಿಯಾಲಾಪಂಗಳಂ ಕಲಿಸುತ್ತಾ, ಅದಂ ಸಜಾತೀಯ ಸಮುದಾಯದೊಂದಿಗೆ ಸಂಚರಿಸಲೆಳಸಿಲೆ ಬಿಟ್ಟು ಕಳುಹುತ್ತಾ ಹೀಗೆಯೇ ಕಾಲಿವಂ ಸುಖವಾಗಿ ಕಳೆಯುತ್ತಿರಲು, ಆ ಶುಕಂ ಪ್ರಾತಃ ಕಾಲ ಮಾಗೆ ತನ್ನ ಸ್ವಜಾತಿ ಸಮುದಾಯದೊಂದಿಗೆ ಸೇರಿ ವನಾರಾನಂಗಳಂ ಚರಿಸಿ * ವಿನೋದವಾಗಿ ಕ್ರೀಡಿಸುತ್ತಿರ್ದು ಸೂರಾ ಸಮಯಕ್ಕೆ ಮುನ್ನವೇ ರಾಜಕುಮಾ ದಿಯ ಅಂತಃಪುರವಂ ಸಾರಿ, ಆ ರಾತ್ರೆಯೊಳು ತಾಂ ಕಂಡುಬಂದತಿಶಯಂಗಳನೆ ಲ್ಯಮ ನಾಕೆಯೊಳುಸುರುತ್ತಾ ಹೀಗೆಯೇ ಇರಲೊಂದಾನೊಂದುದಿನ ಮಾತುಕಂ