ಪುಟ:ಯಶೋಧರ ಚರಿತೆ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೧೨

ಯಶೋಧರ ಚರಿತೆ

ಸಂಕಲ್ಪಹಿಂಸೆಯೊಂದರೊ-
ಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ
ಶಂಕತೆಯಿನಿನಿತು ದೇಹಿಗ-
ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್ ೭೦

ಎಂದನುಡಿ ನೆರೆದ ಜೀವಕ-
ದಂಬಂಗಳ್ಗಭಯವೆಂಬ ಡಂಗುರದವೊಲೊ-
ಪ್ಪಂಬಡೆಯೆ ಮಾರಿದತ್ತನೃ-
ಪಂ ಬಿಲ್ಲುಂ ಬೆರಗುಮಾದನುದ್ವೇಗಪರಂ೭೧

ಆ ಚಂಡಮಾರಿ ಲೋಚನ
ಗೋ ಚರತನುವಾಗಿ ಕುವರನಂ ಬಂದಿಸಿ ನೀ-
ನಾಚಾರ್ಯನೆಯೆಂದಿಂತಿರೆ
ಸೂಚಿಸಿದಳ್ ನೆರೆದ ಜಾತ್ರೆ ನೆರೆ ಕೇಳ್ವಿನೆಗಂ೭೨




೭೦. ಸಂಕಲ್ಪ ಹಿಂಸೆಯೊಂದರಿಂದಲೇ ನಾನು ಜನ್ಮ ಜನ್ಮಾಂತರಗಳ ಈ
ದುಃಖಗಳನ್ನೆಲ್ಲ ಅನುಭವಿಸಿದೆ. ನೀನು ನಿಶ್ಚಿಂತೆಯಿಂದ ಇಷ್ಟು ಜೀವಿಗಳನ್ನು
ಕೊಲ್ಲುತ್ತಾ ಇದ್ದೀಯಲ್ಲ! ನಿನಗೆ ನರಕದಿಂದ ವಿಮೋಚನೆಯುಂಟೆ?” ೭೧.
ಅಭಯರುಚಿ ಆಡಿದ ಈ ಮಾತು ಅಲ್ಲಿ ಸೇರಿದ ಜೀವಸಮುದಾಯಕ್ಕೆಲ್ಲ
ಅಭಯವೀಯುವ ಡಂಗುರದಂತೆ ಗಂಭೀರವಾಗಿ ಕೇಳಿತು. ಮಾರಿದತ್ತ
ರಾಜನಂತೂ ಉದ್ವೇಗಕ್ಕೆ ಗುರಿಯಾಗಿ ಬಹಳ ಬೆರಗಿನಿಂದಿದ್ದನು. ೭೨. ಅದೇ
ಸಮಯಕ್ಕೆ ಚಂಡಮಾರಿ ದೇವತೆಯೂ ಪ್ರತ್ಯಕ್ಷಳಾದಳು. ಅವಳು ಅಭಯರುಚಿಗೆ
ವಂದಿಸಿ ಅವನೇ ಆಚಾರ್ಯನೆಂದು ತೋರಿಸಿಕೊಟ್ಟಳು. ಜಾತ್ರೆ ಸೇರಿದ ಜನರೆಲ್ಲ