ಪುಟ:ಯಶೋಧರ ಚರಿತೆ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೯೭

ತೀವಿದ ತಿದಿಯಂ ತೂಗಿಯು-
ಮಾ ವಾಯುವನಿರೆಪಿ ತೂಗಿಯುಂ ಸರಿ ತಿದಿಯಿಂ-
ದಾ ವಾಯು ಬೇರೆ ತನುವಿಂ
ಜೀವಂ ಬೇರೆಂದು ಮಗನೆ ಭಾವಿಸಿ ನೋಡಾ೨೫


ಏದೊರೆಯನಾತ್ಮನೆಂದೊಡ-
ನಾದಿಯನಂತಂ ನಿರತ್ಯಯಂ ಚಿನ್ಮಯ ನಿಃ
ಪ್ರಾದೇಶಿಕನೆಂದಾತನು-
ಪಾದೇಯಂ ಮುಕ್ತಿಮುಕ್ತನುಂ ಪರಮಾತ್ಮಂ೨೬


ಕಲ್ಲೊಳ್ ಪೊನ್ ಪಾಲೊಳ್ ಘೃತ-
ಮಿಲ್ಲೆನವೇಡುಂಟು ದೇಹದೊರಗಾತ್ಮನದೇ-
ಕಿಲ್ಲ ಕುರುಡಂಗೆ ತೋರದೊ-
ಡಿಲ್ಲಪ್ಪುದೆ ವಸ್ತು ಭೇದಿಪಂಗಾತ್ಮನೊಳಂ೨೭



೨೫. ತಿದಿಯೊಳಗೆ ಗಾಳಿ ತುಂಬಿಸಿ ತೂಗಿ ನೋಡಿದರೂ, ಅದರೊಳಗಿನ
ಗಾಳಿ ತೆಗೆದು ತೂಕ ಮಾಡಿದರೂ ತೂಕದಲ್ಲಿ ಏನೂ ವ್ಯತ್ಯಾಸವಿರುವುದಿಲ್ಲ.
ಗಾಳಿ ಬೇರೆ, ತಿದಿ ಬೇರೆ ಎಂಬುದು ಖಂಡಿತವಷ್ಟೆ. ಹಾಗೆಯೇ ದೇಹವೇ
ಬೇರೆ ಎಂಬುದನ್ನು ಚೆನ್ನಾಗಿ ಯೋಚಿಸಿ ನೋಡು, ಮಗನೆ!
೨೬. ಇನ್ನು ಆತ್ಮನ ಸ್ವರೂಪವೇನು ಬಲ್ಲೆಯಾ? ಅವನಿಗೆ ಆದಿಯಿಲ್ಲ ಅಂತ್ಯವಿಲ್ಲ.
ನಾಶವಿಲ್ಲದ ಚಿನ್ಮಯನಾಗಿದ್ದಾನೆ ಅವನು. ಯಾವ ಒಂದು ಪ್ರದೇಶಕ್ಕೂ
ಸೇರಿದವನಲ್ಲ; ಸರ್ವತ್ರ ಉಪಾದೇಯನಾಗಿದ್ದಾನೆ. ಮುಕ್ತಿಯಿಂದ ಮುಕ್ತನಾದಾಗ
ಅವನು ಪರಮಾತ್ಮನಾಗುತ್ತಾನೆ.೨೭. ಕಲ್ಲಿನಲ್ಲಿ ಹೊನ್ನಿಲ್ಲ, ಹಾಲಿನಲ್ಲಿ ತುಪ್ಪವಿಲ್ಲ
ಎನ್ನುವುದು ಸಲ್ಲ; ಅವು ಇವೆ. ಹಾಗೆಯೇ ದೇಹದಲ್ಲಿ ಆತ್ಮನಿಲ್ಲ ಎಂದು
ಹೇಳುವುದೇಕೆ? ಕುರುಡನಿಗೆ ಯಾವ ವಸ್ತುವೂ ಕಾಣದಿದ್ದಲ್ಲಿ ಆ ವಸ್ತುವೇ
ಇಲ್ಲವೆಂದು ಹೇಳಲಾದೀತೆ ? ಈ ವ್ಯತ್ಯಾಸವನ್ನು ಭೇದಿಸಿಕೊಳ್ಳಬಲ್ಲವನಿಗೆ