ಪುಟ:ಯಶೋಧರ ಚರಿತೆ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ಯಶೋಧರ ಚರಿತೆ

ಅಭಯರಚಿಯಭಯಮತಿಯೆಂ
ಬಭಿಧಾನದೆ ಚಂದ್ರಮತಿ ಯಶೋಧರರಮಳ್ಗಳ್
ಶುಭಲಕ್ಷಣಮಪ್ಪುತ್ತಿರೆ
ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ೪೦


ನುಣ್ಗುರುಳ ಪೊಳೆವ ಕಪ್ಪುಂ
ಕಣ್ಗಗ್ಗಳಮಾದ ಮೆಯ್ಯ ಬೆಳಗೆಸೆವಿನಮಾ
ಪೆಣ್ಗಂಡು ರಾಜ್ಯಲಕ್ಷ್ಮಿಯ
ಕಣ್ಗಳ ದೊರೆಯಾಗಿ ಸುಮನೆ ಬಳೆವಿನಮಿತ್ತಲ್೪೧


ಬೇಂಟೆಗೆ ನಡೆಯೆ ಯಶೋಮತಿ
ಗೆಂಟರೊಳಾರಣ್ಯವಾಸಿಗಳ್ ನಿಲೆ ಕಂಡಾ-
ಬೇಂಟೆ ಪರಿಯದೊಡೆ ಬಿನದದ
ಕಂಟಕನೀ ಸವಣನೆನುತೆ ಬರುತಂ ಮುನಿದಂ೪೨




೪೦. ಅಭಯರುಚಿ ಅಭಯಮತಿ ಎಂಬ ಹೆಸರಿನಿಂದ ಹೀಗೆ ಯಶೋಧರ
ಚಂದ್ರಮತಿಯರು ಹುಟ್ಟಿದರು. ಈ ಮಕ್ಕಳು ಒಳ್ಳೆಯ ಲಕ್ಷಣವುಳ್ಳವರಾಗಿ ಸ್ವಾಭಾವಿಕ
ರೀತಿಯಲ್ಲಿ ಬೆಳೆಯತೊಡಗಿದರು. ೪೧. ಚೆಲುವಾದ ಕೂದಲ ಕಪ್ಪು ಕಾಂತಿಯೂ
ಕಣ್ಣಿಗೆ ಮೆಚ್ಚಿನ ದೇಹದ ಬಿಳುಪೂ ಆ ಹೆಣ್ಣು ಗಂಡು ಮಕ್ಕಳಲ್ಲಿ
ಶೋಭಾವಹವಾಗಿದ್ದು, ರಾಜ್ಯಲಕ್ಷ್ಮಿಯ ಕಣ್ಣುಗಳಂತೆ ಅವರು ಬೆಳೆಯುತ್ತಿದ್ದರು.
೪೨. ಒಂದು ದಿನ ಯಶೋಮತಿ ಮೃಗಯಾ ವಿಹಾರಕ್ಕೆ ತೆರಳಿದನು. ದೂರದಲ್ಲಿ
ಕಾಡಿನಲ್ಲಿ ವಾಸಿಸುವ ತಪಸ್ವಿಗಳೊಬ್ಬರಿದ್ದರು. ಅವರನ್ನು ನೋಡಿದ ಬಳಿಕ
ಒಂದೇ ಒಂದು ಪ್ರಾಣಿಯೂ ಬೇಟೆಗೆ ದೊರೆಯಲಿಲ್ಲ. ಈ ಬೇಟೆಯ ವಿನೋದಕ್ಕೆ
ಕಂಟಕಪ್ರಾಯರಾದವರೇ ಈ ಸವಣರು ಎಂದು ಅರಸನಿಗೆ ಬಹಳ ಸಿಟ್ಟು