ಪುಟ:ಯಶೋಧರ ಚರಿತೆ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೧೦೧

ಕಳಲೆ ನಿಜಹರ್ಷಬಾಷ್ಪದ
ಮರೆವನಿ ಧರ್ಮಾನುರಾಗ ಮೇಘಧ್ವನಿವೊಲ್
ಮೊಳಗುವಿನುರಂಕೆಯ ಪೊಯಿಲ್
ಫಳಿಲನೆ‌ ಕೂಗಿದುವು ಕೇಳ್ದನಿತ್ತ ನೃಪಾಲಂ೩೭


ಸ್ವರವೇದವಿದ್ಯೆಯಂ ತ-
ನ್ನರಸಿಗೆ ಮೆರೆಯಲ್ಕೆ ದೇವಿ ನೋಡೆನುತೆಚ್ಚಂ
ಸರಲೆಯ್ದಿಸೆ ಕಡೆದುವವಂ-
ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್೩೮


ದೊರೆಕೊಳೆ ಸಮಾಧಿಮರಣಂ
ಚರಣಾಯುಧಯುಗಳಮಳಿದು ಕುಸುಮಾವಳಿಯೆಂ
ಬರಸಿಯ ಬಸಿರೊಳ್ ಬಂದವು
ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್೩೯


೩೭. ತಮಗುಂಟಾದ ಆನಂದಬಾಷ್ಪವು ಮಳೆಹನಿಯಾಗಿ ಕೆಳಕ್ಕುದುರಿತು. ಆಗ
ಧರ್ಮಾನುರಾಗವೆಂಬ ಮೋಡಗಳು ಗುಡುಗಿದುವೋ ಎಂಬಂತೆ ಆ
ಕೋಳಿಗಳೆರಡರ ರೆಕ್ಕೆಗಳು ಶಬ್ದ ಮಾಡಿದುವು ಮತ್ತು ಸಂತೋಷಾಧಿಕ್ಯದಿಂದ
ಕಲೆದುವು. ಈ ಕೂಗು ರಾಜನ ಕಿವಿಗೆ ಬಿದ್ದಿತು. ೩೮. ಅವನು ತನ್ನ ಸ್ವರವೇದ
(ಶಬ್ದವೇದಿ) ವಿದ್ಯೆಯನ್ನು ತನ್ನ ರಾಣಿಗೆ ತೋರಿಸಿ ಮೆರೆಯಲು ಮನಸ್ಸು
ಮಾಡಿದನು. 'ದೇವಿ ನೋಡು!' ಎಂದು ಹೋಳುತ್ತಾ ಅವನು ಒಂದು ಬಾಣವನ್ನು
ಪ್ರಯೋಗಿಸಿದನು. ಆ ಬಾಣವು ಎರಡೂ ಕೋಳಿಗಳನ್ನು ಒಮ್ಮೆಲೆ ಕೊಂದಿಕ್ಕಿತು,
ಎರಡಕ್ಕೂ ಆಯಸ್ಸು ಒಂದೇ ಆಗಿತ್ತೆಂಬಂತೆ. ೩೯. ಕೋಳಿಗಳೆರಡಕ್ಕೂ ದೊರೆತುದು
ಸಮಾಧಿ ಮರಣ.೫೮ ಹೀಗೆ ಸತ್ತು ಅವೆರಡೂ ಕುಸುಮಾವಳಿಯ ಗರ್ಭದಲ್ಲಿ ಆ
ದಂಪತಿಗಳ ಪ್ರೇಮವನ್ನೇ ಅಚ್ಚೊತ್ತಿದ್ದಂತೆ ಅವಳಿಮಕ್ಕಳಾಗಿ ಜನಿಸಿದವು.