ಪುಟ:ಯಶೋಧರ ಚರಿತೆ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ಯಶೋಧರ ಚರಿತೆ

ಪರಿಮಳದ ತೂಬನೆತ್ತಿದ
ನರಲಂಬಂ ಜನಮನೋವನಕ್ಕೆನೆ ಕಾಳಾ
ಗರುಧೂಮಲತಿಕೆ ಜಾಲಾಂ
ದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ೧೯

ಎಳದುಂಬಿ ಸುರಿದು ಸುಟ್ಟರೆ
ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮು
ಚ್ಚಳಿಸಿದುವು ನೀಲಮುತ್ತಿನ
ಬೆಳಗಿನ ಕುಡಿ ರಾರಸದಿನಂಕುರಿಸುವವೋಲ್೨೦

ಅಮೃತಮತಿ ಸಹಿತಮಾ ಚಂ
ದ್ರಮತಿಯ ಸುತನಂತು ಮೆರೆವ ಧವಳಾರದೊಳ
ಭ್ರಮುವೆರಸಭ್ರ ಗಜಂ ವಿ
ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ೨೧



೧೯. ಕಾಮನು ಜನ ಮನೋವನಕ್ಕೆ ಪರಿಮಳದ ತೂಬನ್ನು ತೆರೆದುಬಿಟ್ಟನೋ
ಎಂಬಂತೆ ಕಾಳಾಗರುವಿನ ಹೊಗೆಬಳ್ಳಿ ಕಿಟಕಿಯಿಂದ ಹೊರಹಬ್ಬುತ್ತಾ ಇತ್ತು ಆ
ಶಯ್ಯಾಗೃಹದಿಂದ, ಆ ಹೊಗೆಯು ಪಾರಿವಾಳದ ರೆಕ್ಕೆಯಂತೆ ಕರಿಯ ಬಣ್ಣದ್ದಾಗಿತ್ತು.
೨೦. ಅಲ್ಲೆಲ್ಲ ಕಸ್ತೂರಿಯ ಪುಡಿ, ಕರ್ಪೂರದ ದೂಳು ಹಬ್ಬಿಕೊಂಡಿತ್ತು. ಪರಿಮಳಕ್ಕೆ
ಎರಗುವ ಎಳೆಯ ತುಂಬಿಗಳು ಅಲ್ಲಿ ಸುತ್ತೂ ಸುಳಿಯುತ್ತಿದ್ದುವು. ಆಗ ಏಳುತ್ತಿದ್ದ
ಸುಳಿಗಾಳಿಯಲ್ಲಿ ಆ ಪುಡಿದೂಳೆಲ್ಲ ಮೇಲೆ ಹಾರುತ್ತಿತ್ತು. ಇದನ್ನು ಕಾಣುವಾಗ
ನೀಲ ಮುತ್ತಿನ ಬೆಳಕಿನ ಕುಡಿ ಪ್ರೇಮರಸದಿಂದ ಮೊಳಕೆಯೊಡೆಯುತ್ತಿರುವಂತೆ
ಭಾಸವಾಗುತ್ತಿತ್ತು. ೨೧. ಹೀಗೆ ಶೋಭಿಸುವ ಆ ಧವಳಾಗಾರದಲ್ಲಿ ಚಂದ್ರಮತಿಯ
ಮಗ ಯಶೋಧರನು ಅಮೃತಮತಿಯೊಂದಿಗೆ ಸೇರಿಕೊಂಡನು. ಅಭ್ರಮುವನ್ನು
ಕೂಡಿಕೊಂಡು ಐರಾವತವು ಬಹು ಸಂಭ್ರಮದಿಂದ ಶಯ್ಯಾಗಾರಕ್ಕೆ ಬಂದಂತೆ