ಪುಟ:KELAVU SANNA KATHEGALU.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಎಣ್ಣೆ! ಚಿవిుణి ಎಣ್ಣೆ!”

11


ಯಾರ ಮೇಲಿನ ಸಿಟ್ಟು ಇದು? ಹಿಂದಿನ ದಿನವಷ್ಟೇ ನಾಲ್ಕು ದುಡ್ಡಿಗೆ
ಕೊಂಡುಹೋಗಿದ್ದನಲ್ಲ? ಒಂದೇ ದಿನದಲ್ಲಿ ನಾಲ್ಕು ಪೈ ಹೆಚ್ಚಾಯಿತು.

ರಾಯರು ಕೂಗಿ ನುಡಿದರು:
“ಬೇಕಾದರೆ ಕೊಂಡುಹೋಗು. ಇಲ್ಲದಿದ್ರೆ ಕಲೆಕ್ಟರಲ್ಲಿಗೆ ಹೋಗು!”

****

ಮತ್ತೊಂದು ಸಂಜೆ ತನ್ನ ಅಂಗಡಿ ಮುಚ್ಚುತ್ತಿದಾಗ ಸೋಮ ಹೊಸ
ಹೊಸ ಸಾಮಾನು ಗಾಡಿಯಿಂದಿಳಿದು ಅಂಗಡಿಯ ಒಳಹೋಗುತ್ತಿದ್ದುದನ್ನು
ಕಂಡ. ಚಿಮಣಿಎಣ್ಣೆ ಡಬ್ಬಗಳೂ ಹಲವು ಇದ್ದಂತೆ ತೋರಿತು.
ಮಾರನೆಯ ದಿನ ಎಣ್ಣೆ ತರಬೇಕು. ಮನೆಯ ಬುಡ್ಡಿ ದೀಪವೂ ಬರಿದು;
ಅಂಗಡಿಯ ಚಿಮಣಿಯೂ ಖಾಲಿ. ಸಂಜೆಯವರೆಗೆ ಕಾಯುವಂತಿಲ್ಲ.
ದುಡ್ಡಿರಲಿಲ್ಲ.ಸದ್ಯಕ್ಕೆ ಕಾಲು ಬಾಟಲಿ ತರೋಣ ಎಂದು, ಪುಡಿಕಾಸಿ
ನೊಡನೆ ರಾಯರ ಭಂಡಸಾಲೆಗೆ ಹೋದ.
ಅಲ್ಲಿ ಹೇಳಿದರು:
"ಕಾಲು ಬಾಟ್ಲಿಗೆ ఒంದಾಣೆ-ఇವತ್ತಿನಿಂದ.”
“ತುಂಬಾ ಹೆಚ್ಚಾಯಿತಲ್ಲ ಧನಿಗಳೇ" ಎಂದ.
ಅವರು ಉತ್ತರ ಕೊಡಲಿಲ್ಲ. ಬೇಕಿದ್ದರೆ ಕೊಳ್ಳಬೇಕು ಅಷ್ಟೆ.
ಬೇಕಿದ್ದರೆ? ಉಹ್! ಬೇಡವೇ ಮತ್ತೆ? ಅಂಗಡಿಗೆ ಹೋಗಿ ಮತ್ತೂ ಒಂದೆ
ರಡು ಕಾಸು ಹುಡುಕಿ ತಂದು, ಒಂದಾಣೆ ತೆತ್ತು, ಸೋಮ ಎಣ್ಣೆ ಕೊಂಡ.ಅವ
ನಿಗೆ ತುಂಬಾ ದುಃಖವಾಯಿತು. ಹಣ ಹೆಚ್ಚು ಕೊಡಬೇಕಾದ್ದೊಂದು; ರಾಯರ
ಬಗ್ಗೆ ತಾನು ತೋರಿಸುತ್ತಿದ್ದ ಪ್ರೀತಿಯ ನೂರರಲ್ಲಿ ಒಂದಂಶವನ್ನೂ ಪ್ರತಿಯಾಗಿ
ಅವರು ತೋರಿಸಲಿಲ್ಲ ಎಂಬುದು ಇನ್ನೊಂದು.

****

ಮರುದಿನ ಬೆಳಿಗ್ಗೆಯೂ ಸೋಮ ಎಣ್ಣೆ ತಂದ.
ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದ ಅಕ್ಕಸಾಲಿಗ ಒಂದು ಸುದ್ದಿ
ಹೇಳಿದ. ಉತ್ತಮ ಚಿಮಣಿ ಎಣ್ಣೆಯನ್ನು ಬಾಟಲಿಗೆ ೩ ಆಣೆ ೭ ಪೈಗೂ,
ಕೀಳು ತರಹೆಯನ್ನು ೩ ಆಣೆ ೨ ಪೈಗೂ, ಮಾರಬೇಕೆಂದು ಸರಕಾರ ಆಜ್ಞಾ
ಪಿಸಿದೆ. ಹೆಚ್ಚು ಬೆಲೆ ಕೇಳಿದರೆ ವೋಚರ್ ಕೊಡಿ ಎನ್ನಬೇಕು.
ಸೋಮ ಕೇಳಿದ:
"ವೋಚರ್ ಅಂದ್ರೆ?”
“ఒంದು ಚೀಟಿ. ಎಷ್ಟು ಬೆಲೆಗೆ ಮಾಡಿದ್ದೂಂತ ಅದರಲ್ಲಿರ್‍ತದೆ.”