ಪುಟ:Mysore-University-Encyclopaedia-Vol-1-Part-1.pdf/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬೀಜೋತ್ಪಾದನೆ- ಅಬು ಪರ್ವತ ಆಹುತಿಯಾಯಿತು.ಚಕ್ರವರ್ತಿ ಹೈಲಿ ಸೆಲಾಸಿ ಇಂಗ್ಲೆಂಡಿನಲ್ಲಿ ಆಶ್ರಯ ಪಡೆದು ಅಲ್ಲೇ ನೆಲೆಸಿದ.ಎರಡನೇಯ ಮಹಾಯುದ್ಧದಲ್ಲಿ 1941ರಲ್ಲಿ ಬ್ರಿಟಿಷರು ಇಥಿಯೋಪಿಯಾದ ರಾಜಧಾನಿಯಾದ ಆಡಿಸ್ ಆಬಾಬವನ್ನು ಹಿಡಿದು ಚಕ್ರವರ್ತಿ ಹೈಲಿ ಸೆಲಾಸಿಗೆ ಪುನಃ ರಾಜ್ಯಾಭಾರವನ್ನು ವಹಿಸಿದರು.ಅಬಿಸೀನಿಯ ಎಷ್ಟೇ ಕಷ್ಟಗಳು ಅನುಭವಿಸಿದರೂ ಹೈಲಿ ಸೆಲಾಸಿಯ ಸಮರ್ಥ ನಾಯಕತ್ವದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಆಧುನಿಕ ರೀತಿಯಲ್ಲಿ ಪ್ರಗತಿ ಹೊಂದಿದೆ.

ಅಬೀಜೋತ್ಪಾದನೆ: ಬೀಜಗಳನ್ನು ಉಪಯೋಗಿಸದೆ ಹೊಸ ಸಸ್ಯಗಳನ್ನು ಪಡೆಯುವ ವಿಧಾನ (ಏಸೆಕ್ಷುಯಲ್ ರೀಪ್ರೊಡಕ್ಷನ್).ಇದನ್ನು ನಿರ್ಲಿಂಗ ರೀತಿಯ ವಂಶಾಭಿವೃದ್ಧಿಯೆನ್ನಬಹುದು.ರೆಂಬೆ ನೆಟ್ಟು ಸಸಿ ಮಾಡುವ ವಿಧಾನ ಇದಕ್ಕೆ ಸರಳವಾದ ಉದಾಹರಣೆ.ಹೀಗೆ ಮಾಡಿದಾಗ ತಾಯಿಗಿಡಕ್ಕೂ ಹೊಸಗಿಡಕ್ಕೂ ಮೂಲ ಗುಣಲಕ್ಷಣಗಳಲ್ಲಿ ಯಾವ ವ್ಯತ್ಯಾಸವೂ ಇರದು.ಆದರೆ ಬೀಜದಿಂದ ಪಡೆದ ಹೊಸಗಿಡ ತಾಯಿಗಿಡಕ್ಕಿಂತ ಭಿನ್ನವಾದ ಗುಣಲಕ್ಷಣಗಳನ್ನು ಪ್ರದರ್ಶಿಸಬಲ್ಲದು.ಆದ್ದರಿಂದ ತಾಯಿಸಸ್ಯಗಳ ಗುಣಲಕ್ಷಣವನ್ನೇ ಸಂತತಿಯಲ್ಲೂ ಬಯಸುವಾಗ ಅಬೀಜೋತ್ಪಾದನೆ ಸರಿಯಾಗಬಹುದು.ಬಾಳೆ ಮುಂತದ ಅಬೀಜ ಸಸ್ಯಗಳನ್ನು ಹೆಚ್ಚಿಸಿಕೊಳ್ಳಲಂತೂ ಈ ಕ್ರಮವೊಂದೇ ಮಾರ್ಗ.ಬೀಜದಿಂದ ಬೆಳೆಸುವುದು ಕೆಲವು ಸಸ್ಯಗಳಲ್ಲಿ ತೀರ ನಿಧಾನವಾಗುತ್ತದೆ.ವಿಳಂಬವನ್ನು ತಪ್ಪಿಸುವಾಗಲು ಅಬೀಜಸಂತಾನ ಕ್ರಮವನ್ನು ಅನುಸರಿಸುತ್ತದೆ. ಈ ವಿಧಾನದಲ್ಲಿ ಅನೇಕ ಕ್ರಮಗಳುಂಟು.ಕೆಲವನ್ನು ಬೇರು,ಕಂದ,ಗೆಡ್ಡೆಗಳಿಂದಲೂ ಮತ್ತೆ ಕೆಲವನ್ನು ಕಣ್ಣು,ಎಲೆ,ಕಾಂಡದ ಭಾಗಗಳಿಂದಲೂ ಉತ್ಪತ್ತಿ ಮಾಡಿಕೊಳ್ಳಬಹುದು.ಪ್ರತಿಯೊಂದು ಸಸ್ಯಜಾತಿಯನ್ನೂ ಪ್ರತಿಯೊಂದು ವಿಧಾನದಿಂದಲೂ ಬೆಳೆಸುವುದಕ್ಕಾಗುವುದಿಲ್ಲ.ಆಯಾ ಜಾತಿಯ ಬೆಳೆಯ ಸ್ವಭಾವ , ಬೆಳವಣಿಗೆ ಇತ್ಯಾದಿಗಳಿಗೆ ಅನುಗುಣವಾಗಿ ಸೂಕ್ತ ಕಂಡ ವಿಧನವನ್ನು ಅನುಸರಿಸ ಬೇಕಾಗುತ್ತದೆ. ಅಬೀಜ ರೀತಿಯ ಸಂತಾನೋತ್ಪಾದನೆಯ ಕ್ರಮಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು:1.ಸಸ್ಯ ಭಾಗಗಳಿಂದ ಬೇರು ಬಿಡಿಸುವಿಕೆ; 2. ಸಸ್ಯ ಭಾಗಗಳನ್ನು ಬೇರು ಬಿಟ್ಟಿರುವ ಸಸ್ಯಗಳ ಮೇಲೆ ಜೋಡಿಸುವಿಕೆ. ಬೇರು ಬಿದಿಸುವಿಕೆಯಲ್ಲಿ ಮೂರು ಬಗೆ;ತಾಯಿಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಸಸ್ಯಭಾಗಳಿಂದ ಬೇರು ಬಿಡಿಸುವಿಕೆ; ತಾಯಿಸಸ್ಯದಿಂದ ಬೇರ್ಪಡಿಸಿ ಬೇರು ಬಿಡುಸುವಿಕೆ;ತಾಯಿಸಸ್ಯದ ಭಾಗಗಳನ್ನು ತುಂಡು ಹಾಕಿ ಬೇರು ಬಿಡಿಸುವಿಕೆ. ಬಾಳೆ,ಜೇಗುಜ್ಜೆ ಇತ್ಯಾದಿಗಳಲ್ಲಿ ಕಾಂಡದ ಬುಡದಿಂದ ಕಂದುಗಳು ಹೊರಡುತ್ತವೆ.ಕೆಲವು ಗಿಡಗಳನ್ನು ತರಿದಾಗ ಕಾಂಡದಿಂದ ಕಂದುಗಳು ಹೊರಡುತ್ತವೆ.ಕೆಲವು ಗಿಡಗಳನ್ನು ತರಿದಾಗ ಕಾಂಡದಿಂದ ಕಂದುಗಳು ಹೇರಳವಾಗಿ ಬರುವುದುಂಟು.ಬಳ್ಳಿ ಜಾತಿಯ ಕೆಲವು ಸಸ್ಯಗಳಲ್ಲಿ,ಕಾಂಡದ ಬುಡದಿಂದ,ನವುರಾದ ಉಪಕಾಂಡಗಳು ಒಡೆದು ನೆಲದ ಮೇಲೆ ಹಾದು ಅಲ್ಲಲ್ಲೆ ಗಿಣ್ಣಿರುವೆಡೆ ಬೇರುಬಿಡುತ್ತವೆ.ಉದಾ:ಹರಿಯಾಳಿ,ಸ್ಟ್ರಾಬೆರಿ,ರಾಸ್ಟ್ಬೆರಿ.ಸಕಾಲದಲ್ಲಿ ಇವನ್ನು ಕತ್ತರಿಸಿ ಬುಡಸಮೇತ ಹೂಳಿ ಸಸ್ಯಗಳನ್ನು ಹೆಚ್ಚಿಸಿಕೊಳ್ಳಬಹುದು.ತಾಯಿಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಕಾಂಡದ ಭಾಗಗಳಿಂದ ಬೇರು ಬಿಡಿಸುವ ಕ್ರಮವೊಂದಿದೆ.ಪ್ರಕೃತಿಯಲ್ಲಿ ,ಗಿಡದ ರೆಂಬೆ ಕ್ಕೆ ಉಜ್ಜಿದಾಗ ಅದರ ತೊಗಟೆಗೆ ಗಾಯವಾಗುತ್ತದೆ.ಈ ಗಾಯದಿಂದಲೇ ಬೇರು ಹೊರಟು ಉಪಸಸ್ಯ ಹುಟ್ಟುತ್ತವೆ.ಇದನ್ನು ಅರಿತು ತೋಟಗಾರರು ತೊಗಟೆಯನ್ನು ಸುಲಿದೋ ಸೀಳಿಯೋ ರೆಂಬೆಗೆ ಗಾಯ ಗೊಳಿಸಿ ನೆಲಕ್ಕೆ ಬಗ್ಗಿಸಿ,ಮಣ್ಣು ಪೇರಿಸಿ ಬೇರು ಬಿಡಿಸುತ್ತಾರೆ.ಈ ಕ್ರಮ ನಿಧಾನವಾದರೂ ಯಶಸ್ಸು ಖಂಡಿತ.ಈ ಕ್ರಮದಲ್ಲೂ ಕೆಲವು ವಿಧಗಳಿವೆ. 1.ಬಲಿತ ರೆಂಬೆಯಲ್ಲಿ ಹರಿತವಾದ ಚಾಕುವಿನಿಂದ ಸ್ವಲ್ಪ ಸೀಳಿ ಆ ಭಾಗ ನೆಲಕ್ಕೆ ತಗಲುವಂತೆ ಮಾಡಿ ನೀರು ಗೊಬ್ಬರವನ್ನು ಹಾಕಿ ತೇವ ಆರದ್ತಂತೆ ನೋಡಿಕೊಂಡರೆ ಸೀಳಿನಲ್ಲಿ ಬೇರುಗಳು ಕಾಣಿಸಿಕೊಳ್ಳುತ್ತವೆ.2.ಮಲ್ಲಿಗೆ,ಕಣಗಲೆ ಮುಂತಾದ ಗಿಡಗಳಲ್ಲಿ ರೆಂಬೆಯನ್ನು ಅರ್ಧವೃತ್ತಾಹಾರದಲ್ಲಿ ಬಾಗಿಸಿ ಮಣ್ಣಿನಲ್ಲಿ ಹೂತು ಅದರ ಮೇಲೆ ಕಲ್ಲು ಹೇರುತ್ತಾರೆ ಅಥವಾ ಊರುತ್ತ್ತಾರೆ.ಕೆಲವು ಬಾರಿ ಹೂಳುವ ಭಾಗವನ್ನು ತಿರುಚುತ್ತಾರೆ ಅಥವಾ ಕಂಬಿಯಿಂದ ಬಿಗಿಯಾಗಿ ಹಿಸುಕುತ್ತಾರೆ.ಈ ಕ್ರಿಯೆಗಳಿಂದ ಸಸ್ಯರಸದ ಚಲನೆಗೆ ತಡೆಯಾಗಿ ಆ ಭಾಗದಿಂದ ಬೇರು ಬರುತ್ತದೆ. 3.ತೊಗಟೆ ಎಬ್ಬಿ ಅಥವಾ ತೊಗಟೆ ಉಂಗುರ ಸುಲಿದು ಬೇರು ಬಿಡಿಸುವಿಕೆ;ಕ್ರೋಟನ್ , ಡ್ರೆಸೀನ್ ಮುಂತಾದ ಗಿಡಗಳಲ್ಲಿ ಬೇರು ಬಿಡಿಸುವ ಕಡೆ ಗಿಣ್ಣಿನ ಕೆಳಗೆ ಹರಿತವಾದ ಚಾಕುವನ್ನು ರೆಂಬೆಯ ಸುತ್ತಲೂ ಊರುವುದು.೧ ಸೆಂಮೀ ಅಥವಾ ೨ ಸೆಂಮೀ ಕೆಳಗೆ ಮತ್ತೊಂದು ಸುತ್ತು ಚಾಕು ಊರಿ ಎರಡು ಕಚ್ಚಿನ ಮಧ್ಯೆ ಇರುವ ತೊಗಟೆ ಉಂಗುರವನ್ನು ಎಬ್ಬಿ ಒಳ ಮೈಯನ್ನು ಬಯಲುಮಾಡಿ ಆ ಭಾಗದ ಸುತ್ತಲೂ ಮಣ್ಣು ಮೆತ್ತುವುದು.ಆಗ ಈ ಉಂಗುರದಿಂದ ಬೇರು ಹೊಮ್ಮುತ್ತದೆ.4 ಚೆನ್ನಾಗಿ ಬಲಿತು ಆರೋಗ್ಯವಾಗಿರುವ ರೆಂಬೆಯನ್ನು ಕೆಳಗಿಂದ ಮೇಲಕ್ಕೆ ಚಾಕುವಿನಿಂದ ಸೀಳಿ , ಮಧ್ಯೆ ಸಣ್ಣ ಬೆಣೆ ಕೊಟ್ಟು ಸುತ್ತಲೂ

ಹಾವಾಸಿಯನ್ನೋ(ದೊಡ್ಡಪಾಚಿ) ತೆಂಗಿನ ನಾರನ್ನೊ ಅಥವಾ  ತೇವ ಉಳಿಸಿಕೊಳ್ಳಬಲ್ಲ ಯಾವುದಾದರು ಪದಾರ್ಥವನ್ನೊ (ಪಾಲಿಥೀನ್ ಕಾಗದ) ಕಟ್ಟಿ, (ಇದು ಜಾರದಂತೆ ನಾರಿನಿಂದ ಬಿಗಿಯುವುದು) ಸೀಳಿನಿಂದ ಬೇರು ಹೊರಟು ಈ ಮಧ್ಯಸ್ಥ ಪದಾರ್ಥದಲ್ಲಿ ಇಳಿಯುತ್ತದೆ.ಹಾಗೆ ಇಳಿದ ಮೇಲೆ ಈ ಗೂಟಿಯನ್ನು ತಾಯಿ ಸಸ್ಯದಿಂದ ಬೇರ್ಪಡಿಸಿ ಕುಂಡದಲ್ಲಿ ಹಾಕಿ ಬೆಳೆಸುವುದು.

ತಾಯಿ ಸಸ್ಯದಿಂದ ಬೇರ್ಪಟ್ಟ ಭಾಗಗಳಿಂದ ಹೊಸ ಗಿಡಗಳನ್ನು ಪಡೆಯುವ ವಿಧಾನಗಳು ಬಗೆಬಗೆಯಾಗಿವೆ.ಕೆಲವು ಸಸ್ಯಗಳಲ್ಲಿ ಎಲೆಗಳು ಪೊರೆಗಳಾಗಿ ಮಾರ್ಪಟ್ಟು ಇಲ್ಲವೆ ಒಗ್ಗೂಡಿ ಕಂದುಗಳಾಗುತ್ತವೆ.ಅವನ್ನು ಹೂಳಿ ಗಿಡ ಪಡೆಯಬಹುದು.ಉದಾ:ಈರುಳ್ಳಿ,ಲಿಲ್ಲಿ,ಭೂತಾಳೆ,ಜರೀಗಿಡ ಇತ್ಯಾದಿ.ಮತ್ತೆ ಕೆಲವು ಸಸ್ಯಗಳಲ್ಲಿ ನೆಲದಲ್ಲಿನ ಕಾಂಡ ಭಾಗ ಊದಿ ಗಡ್ಡೆಕಟ್ಟಿರುತ್ತದೆ.ಅದನ್ನು ನೆಟ್ಟು ಗಿಡ ಪಡೆಯಬಹುದು.ಉದಾ:ಕೆಲೇಡಿಯಂ,ಶುಂಠಿಯಂಥ ಗಿಡಗಳ ಕಾಂಡಗಳು ನೆಲದಲ್ಲಿದ್ದು. ಅವುಗಳಿಂದ ಬೇರು ಹೊಮ್ಮಿರುತ್ತದೆ.ಆದರಿಂದ ಹೊಸಗಿಡ ಪಡೆಯಬಹುದು.ಅನಾನಸ್ನಂಥ ಗಿಡದಲ್ಲಿ ಮೇಲಿನ ಎಲೆಗುಚ್ಚಿನ ಕೂಳೆಯನ್ನು ಕತ್ತರಿಸಿ ನೆಟ್ಟಿನಲ್ಲಿ ಹೊಸಗಿಡ ಬರುತ್ತದೆ.ಗ್ಲಾಡಿಯೋಲಸ್,ಡ್ಯಾಫೋಡಿಲ್,ಟ್ಯೂಲಿಪ್ ಮೊದಲಾದವುಗಳಲ್ಲಿ ಗೆಡ್ಡೆಗಳಿಗೆ ಅಂಟಿದಂತಿರುವ ಮರಗೆಡ್ಡೆಗಳನ್ನು ಕಿತ್ತು ನೆಟ್ಟರೆ ಹೊಸಗಿಡ ಬರುತ್ತದೆ.ಆಲೂಗಡ್ಡೆ ಸುವರ್ಣಗೆಡ್ಡೆಗಳಲ್ಲಾದರೋ ಗೆಡ್ಡೆಯೊಳಗಣ ಒಂದೊಂದು ಕಣ್ಣೂ ಒಂದೊಂದು ಹೊಸಗಿಡವನ್ನು ಕೊಡುತ್ತದೆ. ಕೆಲಸಸ್ಯಗಳ ಕಾಂಡ ಎಲೆ ಅಥವಾ ಬೇರುಗಳನ್ನು ತುಂಡರಿಸಿ ನೆಟ್ಟು ಹೊಸಗಿಡ ಪಡೆಯಬಹುದು.ನೆಡುವಾಗ ಮರಳುಮಿಶ್ರಿತ ನೆಲ,ಆರದ ತೇವ,ರಸಾಯನಿಕ ಗೊಬ್ಬರ ಅಗತ್ಯ.ಜೇಗುಜ್ಜೆ ,ಫ್ಲಾಕ್ಸ್ ಮೊದಲಾದವುಗಳ ಬೇರುಗಳ ತುಂಡು,ಬಲಿತ ಗುಲಾಬಿಗಿಡಗಳ ಎಲೆಮೊಗ್ಗಿರುವ ಕಾಂಡದ ತುಂಡು ,ಬೆಗೊನಿಯ,ಗ್ಲಾಕ್ಸೀನಿಯ,ಪೆಪೆರೋಮಿಯ ಮೊದಲಾದುವುಗಳಲ್ಲಿ ಬಲಿತ ಪೂರ್ತ ಎಲೆ ಅಥವಾ ಎಲೆಯ ತುಂಡು - ಇವುಗಳಿಂದ ಹೊಸಗಿಡ ಬರುತ್ತದೆ. ಈ ವಿಧಾನಗಳಲ್ಲದೆ ಕಸಿಮಾಡುವಿಕೆಯಿಂದ ವಿವಿಧ ಸಸ್ಯಗಳ ಅಡ್ಡತಳಿ ಎಬ್ಬಿಕೆಯ ತಂತ್ರ ಈಚೆಗೆ ಅನೇಕ ಕರಣಗಳಿಂದಾಗಿ ಬಳಕೆಗೆ ಬಂದಿದೆ.ಇದರಿಂದ ಹೊಸ,ಉತ್ತಮ ತಳಿಗಳು ದೊರೆತಿವೆ.ಇದೂ ಅಬೀಜ ಸಸ್ಯೋತ್ಪಾದನೆಯ ಪ್ರಮುಖ ಭಾಗವೇ.ಮೂಲಗಿಡದ ಕಾಂಡವನ್ನು ಕೊರೆದು ಅಲ್ಲಿಗೆ ಬೇರೊಂದು ಗಿಡದ ರೆಂಬೆಯನ್ನು ಲಗತ್ತಿಸಿ ನೀರು ಗೊಬ್ಬರ ಕೊಟ್ಟು ತುಂಡುಕಾಂಡ ಚಿಗುರಿ ಬೇರುಬಿಡುವಂತೆ ಮಾಡುತ್ತಾರೆ.ವಿಧವಿಧವಾದ ಕಸಿಮಾಡುವಿಕೆಯ ಫಲಗಳೇ ಆಗಿವೆ.

ಅಬು ಪರ್ವತ: ದಕ್ಷಿಣ ರಾಜಸ್ತಾನದ ಅಂಚಿನಲ್ಲಿ ಅಡ್ಡಲಾಗಿ ಹಬ್ಬಿರುವ ಆರಾವಳೀ ಪರ್ವತಗಳಲ್ಲಿ ಅಬು ನಗರದ ಹತ್ತಿರ ಕಾಣಬರುವ ದೊಡ್ಡ ಪರ್ವತ.ಉತ್ತರ ಆಕ್ಷಾಂಶ ೨೪-೪೧; ಪೂರ್ವ ರೇಖಾಂಶ ೭೨-೫೦.ಪ್ರದೇಶದ ಜನಸಂಖ್ಯೆ ಸು.೪೭,೬೪೦.ಉತ್ತರ ಅಹಮದಾಬಾದಿಗೆ ೧೭೬ಕಿ.ಮಿ. ದೂರದಲ್ಲಿದೆ.ಏಳು ಮೈಲಿ ಅಗಲವಿರುವ ಒಂದು ನದೀಕಣವೆ ಉಳಿದ ಬೆಟ್ಟಗಳ ಸಾಲಿನಿಂದ ಪರ್ವತವನ್ನು ಪ್ರತ್ಯೇಕಿಸಿದೆ.ಈ ಕಣವೆಯಲ್ಲಿ ಪಶ್ಚಿಮ ಬಾನಸ್ ಎಂಬ ನದಿ ಹರಿಯುವುದು.ಈ ಪರ್ವತ ಮೈದಾನದ ನಡುವೆ ಕಡಿದಾದ ಗ್ರಾನೈಟ್ ಶಿಲಾದ್ವೀಪದಂತೆ ತೋರುವುದು.ಎತ್ತರ ೧೨೨೦ ಮೀ.-೧೭೨೨ ಮೀ. ಪರ್ವತದ ನೆತ್ತಿಯಲ್ಲಿ ಮತ್ತು ಪೀಠಭೂಮಿಗಳಲ್ಲಿ ವಿಶೇಷ ರೀತಿಯಲ್ಲಿ ಕೊರೆದಿರುವ ಜೈನ ಬಸದಿಗಳೂ ದೇವಾಲಯಗಳೂ ಗೋಪುರಗಳೂ ಇವೆ.ಕನಿಷ್ಠಪಕ್ಷ ೨೦೦೦ ವರ್ಷಗಳಿಂದಲೂ ಯಾತ್ರಾಸ್ಥಳವಾಗಿವೆ.ಮಹಾಭಾರತದಲ್ಲಿ ಇದನ್ನು ಅರ್ಬುದ ಎಂದು