ಪುಟ:ನವೋದಯ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

362

ಸೇತುವೆ

ಹೌಹಾರಿ ಬಿದ್ದ.
"ಹೌದು, ಹೌದು. ಹೇಳಿದ್ದಿರಿ."
ಜಯದೇವ ನಿದ್ದೆಯ ಪೀಡೆಗೆ ಒಳಗಾಗಿದ್ದ ದೃಶ್ಯವನ್ನು ಕಂಡು ನಂಜುಂಡಯ್ಯ
ನಸುನಕ್ಕರು.
"ಅದಕ್ಕೇಂತ ಒಂದು ಸಮಿತಿ ರಚಿಸಿದ್ವಿ. ಸಮಿತಿ ಅಂದ್ಮೇಲೆ ಎಲ್ಲರಿಗೂ ಪ್ರಾತಿ
ನಿಧ್ಯ ಇರಬೇಕು ತಾನೆ? ಅವರ ಜನಕ್ಕೆ ಎರಡು ಸೀಟು ಕೊಡಬೇಕಾಯ್ತು. ಈಗ ఆ
ಇಬ್ಬರು ನಮಗೆ ಕೊಡ್ತಿರೋ ತೊಂದರೆ ಎಷ್ಟೂಂತ !'"
ಮೂಲತಃ ಏನೂ ಬದಲಾಗಿಯೇ ಇರಲಿಲ್ಲ. ಹಿಂದಿನಂತೆಯೇ ಇತ್ತು ಪ್ರತಿ
ಯೊಂದೂ.
ಜಯದೇವನಿಂದ ಯಾವ ಪ್ರತಿಕ್ರಿಯೆಯೂ ಬರದೇ ಇದ್ದುದನ್ನು ಕಂಡು
ನಂಜುಂಡಯ್ಯನೆಂದರು:
"ನಾನು ಯಾಕೆ ಹೇಳ್ಲಿ ಇದನ್ನೆಲ್ಲ? ನೀವು ಬಂದಿದೀರಲ್ಲ. ನಿಮಗೇ ಗೊತ್ತಾ
ಗುತ್ತೆ. ಸ್ವಲ್ಪಹೊತ್ತು ಮಲಕೊಳ್ಳಿ ಇನ್ನು. ಸಾಯಂಕಾಲ ಮನೆ ನೋಡ್ಕೊಂಡು
బರೋಣ."
ಜಯದೇವ, ಕೃತಜ್ಞತೆಯಿಂದ ಅವರಿಗೆ ತಲೆಬಾಗಿ ವಂದಿಸುತ್ತ ಎದ್ದ.



ಎಚ್ಚರವಾದಾಗ ಜಯದೇವನ ಮೈಯೆಲ್ಲ ಬೆವತು ಹೋಗಿತ್ತು. ಸೂರ್ಯನ
ತಾಪ ಹೊರಗೆ ಕಡಮೆಯಾಗಿದ್ದಂತೆ ಕಂಡರೂ ತಣ್ಣನೆಯ ಗಾಳಿ ಬೀಸಲು ಇನ್ನೂ
ಮೊದಲಾಗಿರಲಿಲ್ಲ. ಒಳ ಹಜಾರದಿಂದ ಸುನಂದೆಯ ಮಾತು ಕೇಳಿಸುತ್ತಿತ್ತು.
ನಂಜುಂಡಯ್ಯನ ಹೆಂಡತಿಯೊಡನೆ ಸಂಭಾಷಣೆ. ಪಕ್ಕದ ಕೊಠಡಿಯಿಂದ ಹಾಳೆ ಮಗು
ಚಿದ ಸದ್ದು ಬರುತ್ತಿತ್ತು, ಕ್ರಮಬದ್ಧವಾಗಿ. ನಂಜುಂಡಯ್ಯ ಏನನ್ನೋ ಓದುತ್ತ
ಕುಳಿತಿರಬೇಕು.
ಏಳಬೇಕು ತಾನಿನ್ನು. ಎಷ್ಟು ಹೊತ್ತಾಯಿತು?
ಕೈಗಡಿಯಾರದ ನೆನಪು. ಉಣ್ಣೆಯ ಸೂಟು, ವಾಚು, ಸೈಕಲ್ಲು ಯಾವುದೂ
ಬೇಡವೆಂದ ಅಳಿಯ. ಆದರೆ ಮದುವೆಯ ಸಮಯದಲ್ಲೊಂದು ಉಡುಗೊರೆ ಬಂದಿತು!
ಟೈಂ-ಪೀಸು!
'ಉಪಯುಕ್ತ ವಸ್ತು.' ಎಂದಿದ್ದ ಜಯದೇವ.
ಈಗ ಅದು ಪೆಟ್ಟಿಗೆಯೊಳಗೆ ಮಲಗಿತ್ತು. 'ನಡೆಯುತ್ತಿತ್ತೊ ಇಲ್ಲವೋ.'