ಪುಟ:AAHVANA.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                         ಆಹ್ವಾನ
 ಪಂಡಿತ್ :
   ಈ ವಿಷಯದಲ್ಲಿ ಸಂಸ್ಕೃತದ ಕೊಡುಗೆ ಅಪಾರವಾದದ್ದೂಂತ ನನಗೆ ಸ್ವಲ್ಪ
   ಹೆಮ್ಮೆಯೇ!
  ಇತಿಹಾಸದ ಪ್ರಾದ್ಯಾಪಕ :
    ಇಂಥ ಸ್ವಾಭಿಮಾನ ಕ್ಷಮ್ಯ, ಅಪ್ಪಣೆಕೊಡಿಸಿ!
  ಪಂಡಿತ್ :
     ಮಹಾಕಾವ್ಯಗಳಾದ 'ರಾಮಾಯಣ' 'ಮಹಾಭಾರತ' ಇಡೀ ದೇಶದ ಸೊತ್ತು.
  ಭರತೇಶ್ :
    ಹಿಂದಿಯ'ತುಳಸೀದಾಸ ರಾಮಾಯಾಣ',ತಮಿಳಿನ 'ಕಂಬ ರಾಮಾಯಣ'
    ಕನ್ನಡದ ಕುವೆಂಪು ವಿರಚಿತ 'ಶ್ರೀ ರಾಮಾಯಣ ದರ್ಶನಂ',-ಇವೆಲ್ಲ ಆ
    ಪ್ರಾಚೀನ ಮಹಾಕಾವ್ಯದ ಭಾರತೀಯತ್ವಕ್ಕೆ ಸಾಕ್ಷಿ.
 ಪಾಂಡಿತ್ :
   ಭಾಸನ ನಾಟಕಗಳು, ಶೂದ್ರಕನ 'ಮೃಚ್ಛಕಟಿಕ', ಕಾಳಿದಾಸನ 'ಅಭಿಜ್ಞಾನ
   ಶಾಕುಂತಲ', ನಿಶಾಖದತ್ತನ  'ಮುದ್ರಾರಾಕ್ಷಸ', ಭವಭೂತಿಯ 'ಮಾಲತೀ
   ಮಾಧವ', 'ಪಂಚತಂತ್ರದ ಕಥೆಗಳು,' 'ಹಿತೋಪದೇಶ'ದ ಕಥೆಗಳು
   ಇವೆಲ್ಲ ಭಾರತೀಯ ಸಾಹಿತ್ಯ.
 ಭರತೇಶ್ :
    ನಿಜ, ಭಾರತದ ಎಲ್ಲ ಭಾಷೆಗಳಲ್ಲೂ ಲಭ್ಯವಿರುವ ಸಾಹಿತ್ಯ.
 ಇತಿಹಾಸದೆ ಪ್ರಾದ್ಯಾಪಕ :
     ಇತಿಹಾಸದ ದೃಷ್ಟಿಯಿಂದ ಮಾತ್ರ ಸಂಸ್ಕೃತವೀಗ ಜೀವಂತವಲ್ಲದ ಭಾಷೆ.
ಭರತೇಶ್ :
   ಆದರೆ ಅದೀಗ ಬೇರೆ ರೂಪಗಳಲ್ಲಿ ಜೀವಂತವಾಗಿ ಉಳಿದಿದೆ. ಭಾರತದ ಹತ್ತು 
   ಹದಿನಾರು ಪ್ರಮುಖ ಭಾಷೆಗಳಲ್ಲಿ ಈಗ ಅದು ಬದುಕಿದೆ. ಉತ್ತರದ ಭಾಷೆ
   ಗಳಿಗೂ ದ್ರಾವಿಡ ಮೂಲದ ಹೆಚ್ಚಿನ ಭಾಷೆಗಳಿಗೂ ಸಂಬಂಧ ಸಾಧ್ಯವಾಗಿ 
    ರೋದು ಸಂಸ್ಕೃತದ ಮೂಲಕವೇ.
                          __________________
                                ೧೭೦