ಪುಟ:Duurada Nakshhatra.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬರುತಿದ್ದವರನ್ನು ನೋಡುತ್ತಲೆ ಹುಡುಗಿಯರು ಓಡಿಹೋದರು.

“ಬಂದ ಷುರುನಲ್ಲೇ ನಿಮಗೆ ಒಳ್ಳೆ ಅನುಭವ ಆದಹಾಗಾಯ್ತು, ಅಲ್ವೆ ಜಯದೇವ್ ?'

“ಏನೋ ಸಾರ್... ”

ಮತ್ತೇನನ್ನ ಹೇಳಬೇಕೆಂದು ಜಯದೇವನಿಗೆ ತೋಚಲಿಲ್ಲ.

ಅಷ್ಟರಲ್ಲಿ ನಾಲ್ಕನೆಯ ತರಗತಿಯ ಹಿರೇಮಣಿ ಗ೦ಟೆಬಾರಿಸುವ. ಕಬ್ಬಿಣದ ಕೋಲಿನೊಡನೆ ಬಂದ.

"ಟೈಂ ಆಯ್ತೆ ಸಾರ್?”

“ಇನ್ನೂ ಎರಡು ನಿಮಿಷ ಇದೆಯಲ್ಲೋ ?... ಹೂಂ.. ಹೊಡಿ !”

ಶಾಲೆಯ ಗಂಟೆ ಭಾರಿಸಿತು. ಆ ಅಲೆಗಳು ಮೌನವಾಗುವುದಕ್ಕೆ ಮುಂಚೆಯೆ ಹುಡುಗ ಹುಡುಗಿಯರೆಲ್ಲ ತಮ್ಮ ತಮ್ಮ ತರಗತಿಗಳನ್ನು ಸೇರಿಕೊಂಡರು.

ರಂಗರಾಯರೆಂದರು:

“ನಾಳೆ ಬಂದ್ದಿಡುತ್ತೆ ಆಜ್ಞಾಪತ್ರ ಅಂತೂ ಈ ಊರಲ್ಲಿ ಇವತ್ತು ನಾನು ಮಾಡೋ ಪಾಠವೇ ಕೊನೇದು'

ಜಯದೇವನಿಗೆ ಬಲು ಖೇದವೆನಿಸಿತು.