ಪುಟ:Abhaya.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ಅಭಯ

ತುಂಗಮ್ಮನ ಮೊನದಿಂದಲೂ ಹೊರಡಲು ತಮಗೆ ತಡವಾದ್ದ

ರಿಂದಲೂ ಸರಸಮ್ಮನಿಗೆ ಕಸಿವಿಸಿಯಯಿತು.

"ಯಾಕೆ ಕೇಳ್ದೆ ತುಂಗ?"

ತುಂಗಮ್ಮ ಉತ್ತರವೀಯಲಿಲ್ಲ. ಬದಲು ತಾನೇ ಒಂದು ಪ್ರಶ್ನೆ

ಕೇಳಿದಳು:

"ನನ್ನ ವಿಷಯ ಎನು ತೀರ್ಮಾನಮಾಡ್ತೀರಿ ದೊಡ್ದಮ್ಮ?"

"ಅದೇನೆ ಹಾಗಂದ್ರೆ?"

"ನಾನು--ಇನ್ನು--..."

ತನಗಿಷ್ಟು ಶಕ್ತಿ ಇಲ್ಲವೆಂದಿತು ಸರಸಮ್ಮ ಸಹನೆ.

"ತುಂಗಾ! ಇಂಥ ಯೊಚ್ನೆ ಮಾಡ್ಬೇಡ ! ಯಾರು ಇದನ್ನೆಲ್ಲಾ

ನಿನ್ತಲೇಲಿ ತುಂಬ್ದೋರು ? ಥೂ...ಆ ಜಲಜಾಗಿಷ್ಟೂ ಬುದ್ದಿಯಿಲ್ಲ--

"ಅಯ್ಯೋ ! ಜಲಜ ಏನೂ ಹೇಳ್ಲಿಲ್ಲ ದೊಡ್ಡಮ್ಮ -ನಾನೇನೇ-...."

"ಸರಸಮ್ಮ ನಕ್ಕರು.

"ನಿನ್ನ ತಲೆಕಾಯಿ! ಸುಮ್ನೆ ಮಲಕೊ. ನಿನಗೆ ಹೆಚ್ಚು ಹೆಚ್ಚು ಹಣ್ಣು

ಬೇಕು,ಅಂತ ಮಿಂಟಿಂಗ್ನಲ್ಲಿ ಕೆಳಿ ಪಾಸ್ಮಾಡಿಸ್ಕೊಂ
ಕೊಂಡು ಬರ್ತೀನಿ...

"ಆ ಮಾತಿಗೆ ಎನು ಉತ್ತರಕೊಡಬೇಕೆಂಬುದೇ ತುಂಗಮ್ಮನಿಗೆ

ತೋಚಲಿಲ್ಲ.

"ಆಮೇಲೆ, ಇನ್ನೂ ಒಂದು ವಿಷಯ ತುಂಗ---"

"ಏನು ದೊಡ್ಡಮ್ಮ?"

"ನಿಮ್ತಂದೆ ಕಾಗದಕ್ಕೆ ಉತ್ತರ ಬರೀಬೇಕು ತುಂಗ. ಅವರಿಗೇನೊ

ತಿಳಿಸೇ ಇಲ್ಲ."

"ಹೊಂ."

"ನಾಳೇನಾದ್ರೂ ಬರೀಬೇಕು. ನಾನೂ ಬರೀತೀನಿ."

"ಆಗಲಿ ದೊಡ್ದಮ್ಮ."

"ಅದೇನು ಬರೀತೀಯೋ ಯೋಚ್ನೆ ಮಾಡಮ್ಮ. ನಾಳೆ ಮಾತ್ನಾ

ಡೋಣ ಆ ವಿಷಯ."