ಪುಟ:KELAVU SANNA KATHEGALU.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4 ನಿರcಜನ: ಕೆಲವು ಸಣ್ಣ ಕಥೆಗಳು

  ಹಣತೆಯೊಂದರ ಮುಂದುಗಡೆ. ಅದರ ಸಂಗೀತ, ಮಾಧುರ್ಯ ಇನ್ನೂ ಇದೆ... ಆದರೆ ಅದು
  ಆ ಚರಕದ ಚರಮಗೀತೆಯ ಧ್ವನಿ...
     ನೂಲೆಳೆಯುತ್ತಿರುವವರು ಶ್ರೀ! ಜ. ಸ. ಮುದುಕಪ್ಪ, ಬಾಪೂಜಿ ಜೀವಿಸಿದಾಗ ಅವರ ಬಲಗೈ
  ಬಂಟನಾಗಿ ಗ್ರಾಮೋದ್ಧಾರದ ವಿಷಯದಲ್ಲಿ ಅಹೋರಾತ್ರಿ ತಲೆ ಚಚ್ಚಿಕೊಂಡು ಅಸಂಖ್ಯ ಯೋಜನೆಗಳನ್ನು  
  ನಿರ್ಮಿಸಿದವರು. ಒಂದಲ್ಲ ಒಂದು ದಿನ ಶಾಂತಿಯ ಜಗತ್ತಿನಲ್ಲಿ ಕನಸುಗಳು ನೆನಸಾಗುವುವೆಂದು 
  ಅವರು ಎಣಿಸಿದ್ದರು.
 
  ಅಂದು ಶ್ರೀ ಕೋಪಾನಲರು ಭಾರತೀಯ ಸ್ವಾತಂತ್ರ್ಯಾ ಸಂಗ್ರಾಮದ ಸೂತ್ರಧಾರಿಗಳಲ್ಲಿ ಒಬ್ಬರಾಗಿದ್ದರು. 
  ಬಾಪೂಜಿಯ ಮೆಚ್ಚಿನವರಾಗಿದ್ದರು. ಇಂದು ಕೂಡ ಸ್ವತಂತ್ರ ಸರಕಾರದ ವೃದ್ಧ ಚಾಣಕ್ಯರು ಅವರೆ.   
  ಪ್ರಜಾಧಿಕಾರಿ ಸೋಜಾಜಿಯವರು ಇವರ ಕೈಯೊಳಗಿನವರೇ.
 
  ಅಂತಹ ಕೋಪಾನಲರಿಗಾಗಿ ಮುದುಕಪ್ಪ ಕಂಬನಿ ಮಿಡಿಯುತ್ತಿದ್ದಾರೆ. ತಮ್ಮ ಅಖಂಡ ಮೈತ್ರಿ 
  ಸಹವಾಸಗಳಿಗೆ ಭಂಗ ಬಂತೆಲ್ಲಾ ಎಂದು.
     *                    *                   *   
  ಈ ಸರಕಾರ ನಮ್ಮದಲ್ಲ! ಬಂಡವಾಳಗಾರರು ನಮಗೆ ಮೋಸ ಮಾಡಿದ್ದಾರೆ. ಸಾಮ್ರಾಜ್ಯಶಾಹಿಯ  
  ನಾಶಕ್ಕಾಗಿ ಹೇಗೆ ಹೆಣಗಿದೆವೋ ಹಾಗೆಯೇ ಈ ಅನ್ಯಾಯದ ಸರಕಾರದ ಅಂತ್ಯಕ್ಕಾಗಿ ಹೆಣಗೋಣ'..
    ಎಂದು ಉಗ್ರಪಕ್ಷೀಯನೊಬ್ಬ, ಒಂದು ಗುಪ್ತ ಸಭೆಯ ಮುಂದೆ ಕೂಗಿ ಕೊಳ್ಳುತ್ತಿದ್ದ, ಸಾರ್ವಜನಿಕ   
  ಸಭೆಗಳನ್ನು ಸೇರಿಸಲು ಅನುಮತಿ ಇಲ್ಲ! ಅಭಿಪ್ರಾಯ ಸ್ವಾತಂತ್ರ್ಯವಿಲ್ಲ! ನಮ್ಮ ನಾಡಿನ ಶ್ರೇಯಸ್ಸಿಗಾಗಿ
  ನಮ್ಮವರೊಳಗೇ ಯಾದವೀ ಕಲಹ!
     *                     *                  *  
 
  ಬಾಪೂಜಿ ಜೀವಿಸಿದ್ದಾಗಲೇ ತನ್ನಲ್ಲಿನ ದೇವಾಲಯಗಳ ಬಾಗಿಲನ್ನು ಹರಿಜನರಿಗಾಗಿ ತೆರೆದೆಸೆದಿದ್ದ   
  ತಿರುವಾಂಕೂರಿನ ಒಂದು ಹಳ್ಳಿ.
 “ಹೋ, ಹಂ!-ಹೋ-ಹೋ”
  ನಂಬೂದಿರಿ ಬಾಹ್ಮಣನೊಬ್ಬ ಮನೆಗೆ ಹೋಗುತ್ತಲಿದ್ದ. ಅಸ್ಪೃಶ್ಯರು ತನ್ನ ಆಗಮನವನ್ನರಿತು ದೂರ  
  ಸರಿಯಲೆಂದು ಅಂಥ ಶಬ್ದ ಮಾಡುತ್ತಿದ್ದ.
  ಹರಿಯ ಜನರು-ಹರಿಜನರು.
  ಹರಿಜನ?
  ಆ ಪದ, ರೂಢಿಯಿಂದಲೇ ಅಳಿಸಿ ಹೋಗುತ್ತಿದೆ.