ಪುಟ:Rangammana Vathara.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

41



ಆ ಮನುಷ್ಯ ವಠಾರಕ್ಕೆ ಬೀಡಾರ ಬರಲು ಒಪ್ಪಿದನೆಂದು ತಿಳಿದಾಗ ಅಹಲೈಗೆ
ತುಸು ಆಶ್ಚರ್ಯವೇ ಆಯಿತು.
"ಎಷ್ಟು ಬಾಡಿಗೆಗೆ ಒಪ್ಕೊಂಡ್ರು ರಂಗಮ್ನೋರೆ?"

ರಂಗಮ್ಮನಿಗೆ ಆ ಪ್ರಶ್ನೆ ಇಷ್ಟವಾಗಲಿಲ್ಲ.
"ನಿನಗ್ಯಾತಕ್ಕಮ್ಮ ಅದೆಲ್ಲ?ಒಪ್ಕೊಂಡ,ಹೋದ."
"ಇಪ್ಪತ್ತೊಂತ ತ್ತೋರುತೆ."
ಹತ್ತೊಂಭತ್ತು. ನೀವು ಮನೆ ಖಾಲಿ ಮಾಡಿದ್ರೆ ಮುಂದೆ ನಿಮ್ಮದಕ್ಕೂ
ಹತ್ತೊಂಭತ್ತು ರೂಪಾಯಿ ಬರುತ್ತೆ."
ರಂಗಮ್ಮ ರೇಗಿದರೆಂದು ಅಹಲ್ಯಾ ಸುಮ್ಮನಾದಳು.ಆದರೂ ಮೌನವಾಗಿ
ಕುಳಿತಿರಲಾರದೆ ವರದ ಬಾಗಿಲಿನಿಂದ ಬಾಗಿಲಿಗೆ ಸಂಚರಿಸಿ ಕೊನೆಯ ಮನೆಗೆ ಬಿಡಾರ
ಬರಲಿರುವ ವಿಷಯವನ್ನು ಪ್ರಸಾರ ಮಾಡಿದಳು.
"ಬಂದ್ಮೇಲೆ ತಾನೆ?"ಎಂದು ಒಬ್ಬಿಬ್ಬರು ಸಂದೇಹದ ರಾಗವೆಳೆದರು.
ಮರುದಿನ ಸಾಯಂಕಾಲ ಶಂಕರನಾರಾಯಣಯ್ಯ ಮುಂಗಡ ಬಾಡಿಗೆ ತೆತ್ತು
ಕರಾರು ಪತ್ರ ಮಡಿಕೊಳ್ಳಲು ಬರದೆ ಇರಲ್ಲಿಲ. ಈ ದಿನ ಅತ ಅಪರಿಚಿತನಂತೆ
ಅಂಗಳದಲ್ಲೇ ನಿಲ್ಲಲಿಲ್ಲ. ಕತ್ತಲೆಯ ನಡುಮನೆ ಹಾದಿಯಲ್ಲಿ ಬಂದು ರಂಗಮ್ಮನ
ಬಾಗಿಲಿನೆದುರು ಓಣೆಯಲ್ಲಿ ನಿಂತು,"ಇದೀರಾ?"ಎಂದು ಕೇಳಿದ.
ಸಂಜೆಯಾದರೂ ಈತ ಬರಲೇ ಇಲ್ಲವಲ್ಲಾ -ಎಂದು ಯೊಚನೆಯಲ್ಲೇ ಇದ್ದ
ರಂಗಮ್ಮ "ಬನ್ನಿ, ಬನ್ನಿ"ಎಂದರು.
ಹಿಂದಿನ ದಿನದ್ದೇ ವೇಷಭೂಷಣ . ಈ ದಿನವೂ ವೀಳ್ಯ ಜಗಿದು ತುಟಿಗಳು
ಕೆಂಪಾಗಿದ್ದುವು. ಹಿಂದಿನ ದಿವಸ ಮಾತು ನಿಲ್ಲಿಸಿದ್ದಲ್ಲಿಂದಲೇ ಮುಂದುವರಿಸಿದ ಹಾಗೆ
ಆತ ಹೇಳಿದ:
"ಅದೇನೋ ಕರಾರು ಪತ್ರ ಬರೀಬೇಕು ಅಂದ್ರಲ್ಲಾ."
"ಹೌದು,ಹೌದು. ಬಾಡಿಗೆ ಹಣ ತಂದಿದ್ದೀರಾ?"
"ತಗೊಳ್ಳಿ."
ಜುಬ್ಬದ ಪಾರ್ಶ್ವ ಜೇಬಿನಲ್ಲಿ ಮಡಚಿ ಇಟ್ಟಿದ್ದೊಂದು ಲಕೋಟೆಯನ್ನು ಆತ
ಹೊರತೆಗೆದ.ಹತ್ತು ರೂಪಾಯಿನದೊಂದು, ಐದು ರೂಪಾಯಿನದೊಂದು, ಒಂದು
ರೂಪಾಯಿನ ನಾಲ್ಕು ನೋಟುಗಳು_ಅದರೊಳಗಿದ್ದುದೇ ಅಷ್ಟು.ಅಷ್ಟನ್ನೂ ಆತ
ರಂಗಮ್ಮನ ಎದುರಿಟ್ಟ.
ಅವರು ಎಲ್ಲವನ್ನೂ ಎತ್ತಿಕೊಂಡು ಒಂದೂಂದನ್ನೂ ಬೆಳಕಿಗೆ ಹಿಡಿದು ಸೂಕ್ಷ್ಮ
ವಾಗಿ ನೋಡಿದರು.
"ದೃಷ್ಟಿ ಸ್ವಲ್ಪ ಮಂದ. ವಯಸ್ಸಾಯ್ತು" ಎಂದು ಅವರು ಆ ಸೂಕ್ಷ್ಮ ಪರೀ
ಕ್ಷೆಗೆ ಕಾರಣ ಕೂಟ್ಟರು.ಮಂದವೋ ಚುರುಕೋ ,ಎಷ್ಟೋ ವರ್ಷಗಳಿಂದ ನೋಟನ್ನು
ಅವರು ಹಿಡಿದು ನೋಡುತಿದ್ದ ರೀತಿಯೇ ಅಂಥದ್ದು. ಸುಬ್ಬುಕೃಷ್ಣಯ್ಯನಿಗೆ ಮನೆ
ಕೊಟ್ಟಾಗ ದೊರೆತ ಐದು ರೂಪಯಿನ ನೋಟನ್ನೂ_ಆ ಮೊದಲ ಬಾಡಿಗೆಯನ್ನೂ

6