ಪುಟ:Vimoochane.pdf/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನ ಗತ ಜೀವನವನ್ನು ನೆನೆಸಿಕೊಂಡಾಗ ನನ್ನ ಹೃದಯ ಅಳುಕುತ್ತಿತ್ತು. ಹೀಗಾಗಿ ಹೋಯಿತಲ್ಲವೆ? ಜೀವನದಲ್ಲಿ ಒಂದು ಶ್ರದ್ಧೆ ನಂಬುಗೆ... ಇಲ್ಲ, ನನಗೆ ಅಂತಹ ಶ್ರದ್ಧೆ ನಂಬುಗೆ ಯಾವ ಕಾಲದಲ್ಲೂ ಇರಲಿಲ್ಲ...

ಕೃಷ್ಣರಾಜ ಹೇಳುತ್ತಿದ್ದರು:

"ಆಗಾಗ್ಗೆ ಸಿಗ್ತಾ ಇರಿ ಚಂದ್ರಶೇಖರ್."

ನನ್ನ ಬಾಳ್ವೆಯು ಕತೆ, ಆತನ ಕೈಯಲ್ಲಿ ರುದ್ರ ಕಾದಂಬರಿ ಯಾಗಬಹುದು, ರುದ್ರ ನಾಟಕವಾಗಬಹುದು!

ಆದರೆ ಅದು ರುದ್ರವೇ ಎಂದು ಆಗಲೀ ನಾನೇ ತೀರ್ಪು ಕೊಡ ಬೇಕೆ?

ನಾನು ಕೃಷ್ಣರಾಜರನ್ನು ಕಾಣ ಹೋಗಲಿಲ್ಲ. ಅವರು ಕೆಲ ವರ ಪ್ರಾಣಕ್ಕೆ ಎರವಾಗುವೆನೆಂದು ಒಂದು ದಿನ ಒಪ್ಪಿಕೊಂಡಿದ್ದೆ. ಹಾಗಾಗಲಿಲ್ಲ. ಆಮೀಲೆ ಕೃಷ್ಣರಾಜರ ವ್ಯಕ್ತಿತ್ವ ನನ್ನನ್ನು ಆಕರ್ಷಿ ಸಿತು... ಆ ಆಕರ್ಷ್ನಣೆಯ ಬಳಿಕ?

ನಾನು ಅವರಿಂದ ದೂರವಿದ್ದೆ... ನನ್ನ ಬಾಳ್ವೆಯ ದೋಣಿ ಬಂಡೆಗಳಲ್ಲಿಗೆ ಸಿಕ್ಕಿ ಹಲವಾರು ಬಿರುಕು ಬಿಟ್ಟತ್ತು. ಅದರ ಫಲವಾಗಿ ಹಲಿಗೆಗಳು ಒಂದೊಂದಾಗಿ ಕಳಚಿಹೊಗುತ್ತಿದ್ದುವು. ಹಾಗೆ ಕಳಚಿ ಹೋಗುತಿದ್ದ ಹಲಿಗೆಗಳನ್ನ ಮತ್ತೆ ಕೂಡಿಸಿ ಜೋಡಿಸುವುದು ಸಾಧ್ಯವಿತ್ತೆ?... ಕೃಷ್ಣರಾಜರಂಥವರು ಅದೂ ಸಾಧ್ಯ, ಅದಕ್ಕಿಂತ ಕಷ್ಟತರವಾದುದೂ ಸಾಧ್ಯ, ಎನ್ನಬಹುದು..ಇನ್ನೊಬ್ಬರಿಗೆ ಸಂಬಂಧಿಸಿ ಅಂತಹಾ ಪ್ರಯೋಗ ನಡೆದರೆ ನಾನೂ ಅದನ್ನು ಆಸಕ್ತಿಯಿಂದ ನೋಡ ಬಹುದಾಗಿತ್ತು. ಆದರೆ ಆ ಪ್ರಯೋಗ ನನಗೆ ಸಂಬಂಧಿಸಿಯೇ ನಡೆಯುವ ಯೋಚನೆ ಹಿತಕರವಾಗಿರಲಿಲ್ಲ..

ನಾನು ಮುಳುಗುತ್ತಲಿದ್ದೆ, ಸ್ವಲ್ಪ ಸ್ವಲ್ಪವಾಗಿ. ಹಾಗೆಯೇ ಮುಳುಗಿ ಹೋಗುವುದೇ ಮೇಲಾಗಿರಲಿಲ್ಲವೆ?

ಜೀವನದಲ್ಲಿ ಜಿಗುಪ್ಸೆ...