ಧೂಳೆದ್ದು ಹೋಗುತ್ತೆ...ಇದು ನಮ್ಮ ಚಾನ್ಸ್...ಕೆಲಸಗಾರರನ್ನ
ಕಡಿಮೆ ಮಾಡಿ, ಉಳಿದೋರಿಂದ ಅಷ್ಟೇ ಕೆಲಸ ತಗೋತೀವಿ.........
ನೋಡ್ತಿರು ಚಂದ್ರೂ..."
"ಆದರೆ ಕೆಲಸಗಾರರು ಸುಮ್ನಿರ್ರ್ತಾರೇನಯ್ಯ ಕಂಠಿ?"
"ನಿನ್ಗೆ ಬಂಡವಾಳದ ಎಕನಾಮಿಕ್ಸ್ ಅರ್ಥ ಚಂದ್ರು,
ಯೂನಿಯನ್ ನಲ್ಲಿ ನಮ್ಮವರೇ ಇದ್ದಿದ್ರೆ ನಾವೇ ಹೇಳ್ಸಿ ಮುಷ್ಕರ ಮಾಡಿಸ್ತಿದ್ವಿ."
"ಇರೋ ಸ್ಟಾಕು ಮುಗಿಲೀಂತ ತಾನೆ?"
"ಅದ್ಸರಿ, ಸರಿಯಾಗೇ ಊಹಿಸ್ದೆ."
ಶ್ರೀಕಂಠನ ಆತ್ಮ ವಿಶ್ವಾಸದಿಂದ ನನಗೆ ಕಸಿವಿಸಿಯಾಯಿತು.
ಹೋದ ಸಾರೆಯ ಹಾಗೆ, ಮಣ್ಣಿನ ರಾಶಿಯಿಂದೊಂದು ಬಡಕಲು ಶಕ್ತಿ ಎದ್ದು ನಿಂತು, ಒಮ್ಮೆಲೆ ಬಲಿಷ್ಠವಾಗಿ ಮೈ ಚಾಚಿ, ಜಗತ್ತಿನ ಒಂದೇ ಒಂದಾದ ಪ್ರಬಲ ಶಕ್ತಿಯನ್ನು ಈ ಬಾರಿ ಆಣಕ್ಕಿಸಲಾರದಲ್ಲವೆ? ಆ ಶಕ್ತಿಗೆ ಆಹ್ವಾನಕೊಡಲಾರದಲ್ಲವೆ?
......ಆದರೆ ಈಗ ಸ್ವಾತಂತ್ರ್ಯ ಬಂದಿತ್ತು. ಪ್ರಾಯಶಃ ಶ್ರೀಕಂಠನ
ಎಣೆಕೆ ತಪ್ಪಾಗಿತ್ತೇನೊ. ಬಡವರ ಪಕ್ಷಪಾತಿಯಾದ ಜನತಾ ಸರಕಾರ.....
ಆ ಕರಪತ್ರಗಳ ಭಾಷೆಯೊ!
ಒಂದು ದಿನ ಸೊರಗಿದ ದೇಹದ ವ್ಯಕ್ತಿಯೊಬ್ಬ ಶ್ರೀಕಂಠನನ್ನು
ಹುಡುಕಿಕೊಂಡು ಬಂದ.
"ಯಾರು ಬೇಕು?" ಎಂದು ಕೇಳಿದೆ.
"ನಾನು ಚೆಲುವಯ್ಯ. 'ವಿಶಾಲಭೂಮಿ' ಪತ್ರಿಕೆಯ ಚೀಫ್
ಅಸೋಸಿಯೇಟ್ ಎಡಿಟರ್-ಮುಖ್ಯ ಸಹಾಯಕ ಸಂಪಾದಕ. ಶ್ರೀಕಂಠಯ್ಯನವರು ಬರ ಹೇಳಿದ್ದರು."
"ಕೂತಿರಿ, ಈಗ ಬರ್ರ್ತಾರೆ."
ಆ ಪತ್ರಿಕೋದ್ಯೋಗಿ ಕೆಮ್ಮಿದ.
"ಇಲ್ಲಿ ಸಿಗರೇಟು ಸೇದ್ಬಹುದೆ ಸಾರ್?"