ಈ ಪುಟವನ್ನು ಪ್ರಕಟಿಸಲಾಗಿದೆ
ಇದು ಪ್ರಕಟವಾಗುತ್ತಿದ್ದಂತೆ,ಒಂದು ಸಂದೇಶ ಬಂತು. ಈ ಸಲ ಧಾರವಾಡದಿಂದ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೆಶಕ ಪ್ರೊ. (ಡಾ.) ಎಸ್.ಎಂ. ವೃಷಭೇಂದ್ರಸ್ವಾಮಿ ಅವರಿಂದ. “ನಿರಂಜನ: ಕೆಲವು ಸಣ್ಣ ಕಥೆಗಳು' ಕರ್ನಾಟಕ ವಿಶ್ವವಿದ್ಯಾಲಯದ ಬಿ. ಎ. ಪದವಿ ಪ್ರಥಮ ಭಾಗಕ್ಕೋಸ್ಕರ ಉಪಪಠ್ಯವೆಂದು ಆಯ್ಕೆಯಾಗಿದೆ.”
ಆ ಕಾರಣದಿಂದ 'ನಿರಂಜನ: ಕೆಲವು ಸಣ್ಣ ಕಥೆಗಳು' ಸಂಕಲನದ ಈ ಹೊಸ ಆವೃತ್ತಿ ಹೊರಬರುತ್ತಿದೆ.
ಮೇಲೆ ಹೆಸರಿಸಿರುವ ಎಲ್ಲ ಮಹನೀಯರಿಗೆ ನಾನೂ, ಪುಸ್ತಕದ ಕೃತಿ ಸ್ವಾಮ್ಯ ಹೊಂದಿರುವ ಸೀಮಂತಿನಿಯನೂ ಕೃತಜ್ಞರು.
೧೫ನೇ ಮೇ ೧೯೮೭
-ನಿರಂಜನ
'ಕಥೆ'
515 (ಹೊಸತು 702), 7ನೇ ಮುಖ್ಯ ಬೀದಿ
46ನೇ ಅಡ್ಡರಸ್ತೆ, 5ನೇ ಬಾಕ್'
ಜಯನಗರ, ಬೆಂಗಳೂರು-560 041.