ಪುಟ:Rangammana Vathara.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಆ ಕೊನೇಲಿ ಬುಕ್ ಏಜಂಟು ಪುಸ್ತಕ ಮಾರ್ತಾರೆ, ಅಲ್ಲಿ నింತಿದಾನಲ್ಲಾ
ಅವನೇ-ಅವರ ಮಗ ಜಯರಾವು."
ತನ್ನ ಪ್ರಸ್ತಾಪ ಬಂತೆಂದು ಜಯರಾಮು ಮುಖ ತಿರುಗಿಸಿದ. ಆದರೆ
ಗುಂಡಣ್ಣನ ಉತ್ತರದಿಂದ ಶಂಕರನಾರಾಯಣಯ್ಯನ ಸಮಸ್ಯೆ ಬಗೆಹರಿಯಲಿಲ್ಲ.
“ಬೇರೆ ಯಾರೊ ಇಲ್ವೇನು?"
"ಇದಾರೆ-ಚಂದ್ರಶೇಖರಯ್ಯ ಅಂತ ఒಬ್ರು ಇನ್‌ಶೊರೆಸ್ಸು...."
ಗುಂಡಣ್ಣನ ಮಾತು ಪೂರೈಸುವುದಕ್ಕೆ ಮುಂಚೆಯೇ ಶಂಕರನಾರಾಯಣಯ್ಯ
ಮನೆಯತ್ತ ಬೇಗ ಬೇಗನೆ ಕಾಲು ಹಾಕಿದ. ಆ ಯುವಕನೇ, ಸಂದೇಹವಿರಲಿಲ್ಲ.
ಪರಿಚಯ ಮಾಡಿಕೊಳ್ಳುವ ಯೋಚನೆ! ವಿಮಾ ಸಂಸ್ಥೆಯ ಪ್ರತಿನಿಧಿಯೊಡನೆ ಪರಿ
ಚಯವೇ? ವಠಾರದಲ್ಲಿ ತಾನು ದೂರವಿಡಬೇಕಾದ ವ್ಯಕ್ತಿ ಈ ಚಂದ್ರಶೇಖರಯ್ಯ
ಎಂದು ಆತ ಆ ಕ್ಷಣವೇ ತೀರ್ಮಾನಿಸಿದ.
ಹೊತ್ತು ಏರುತ್ತಿತ್ತು, ಹೆಂಗಸರು ಮಕ್ಕಳಿಂದಷ್ಟೇ ತುಂಬಿದ ವಠಾರ. ಇದು
ಹೊಸ ಜಾಗನಲ್ಲ. ಬಹಳ ದಿನಗಳಿಂದಲೂ ತಾನು ನೋಡುತ್ತ ಇದ್ದ ದೃಶ್ಯ-ಎಂದು
ಆತನೆಗೆ ಭಾಸವಾಯಿತು.
ಬಾಗಿಲಿನೊಳಕ್ಕೆ ಕಾಲಿಡುತ್ತ ಆತ ಹೇಳಿದ:
" ಏ ಚಂಪಾ.. ಇಷ್ಟು ಹೊತ್ತಿಗೆ ವಠಾರದಲ್ಲಿ ಗಂಡಸರು ಯಾರೂ ಇರಲ್ವಲ್ಲೇ!
ಇನ್ನು ನಾನೂ ಬೆಳಗ್ಗೆ ಎದ್ದ ತಕ್ಷಣ ಹೊರಟ್ಟಿಡಬೇಕು."
"ಯಾಕೋ?יי
"ಮತ್ತೆ! ನಾನು ವಠಾರದಲ್ಲೆ ಇದ್ದರೆ ಸುಮ ನಿರು ತರೆಯೇ ಇವರೆల్ల?"
"ಏನಾಡ್ತಾರೆ?"
“ಈ ಚಂಪಾ ಗಂಡನನ್ನ ಮನೇಲೆ ಇಟ್ಟೊಂಬಿಡ್ತಾ ಅಂತಾರೆ."
“ಸಾಕು ನಿಮ್ರಮಾಷೆ. ಬಾಗಿಲು ಅಡ್ಡ ಮಾಡಿ ಸ್ವಲ್ಪ ತರಕಾರಿ ಹೆಚ್ಚಿ
ಅದೇನು ತಂದಿದೀರೋ?”
"ನೋಡಿದ್ಯಾ ಚಾಕರೀನೊ ಮಾಡಿಸ್ಕೊತಾಳೆ-ಅಂತ ಅವರು ಹೇಳಿದ್ರೂ
ತಪ್ಪೇನು?"
ಶಂಕರನಾರಾಯಣಯ್ಯ ಹನ್ನೊಂದು ಘ೦ಟೆಯ ಹೊತ್ತಿಗೆ ಸಾನ ಊಟ
ಎರಡೂ ಮುಗಿಸಿ ಗಾಂಧಿನಗರಕ್ಕೆ ಹೊರಟ. ಕೋಹಿನೊರು ಹಂಚಿಕೆಗಾರರಿಗೋಸ್ಕರ,
ಆರು ತಿಂಗಳ ಅನಂತರ ಬಿಡುಗಡೆಯಾಗಲಿದ್ದ ಒಂದು ಹಿಂದೀ: ಚಲಚ್ಚಿತ್ರಕ್ಕೆ ಜಾಹೀ
ರಾತು ಚಿತ್ರ ಬರೆಯುವ ಕೆಲಸ ಆರಂಭವಾಗಿತ್ತು. ಮನುಷ್ಯರನ್ನು ಇದ್ದುದಕ್ಕಿಂತಲೂ
ನಾಲ್ಕು ಪಾಲು ಗಾತ್ರದಲ್ಲಿ ತೋರಿಸುವ ಚಿತ್ರಗಳು, ಬಟ್ಟೆಯ ಮೇಲೆ ಅಳತೆ ಕೋಲಿನ
ಆಧಾರದಿಂದ ಪ್ರತಿರೂಪವನ್ನು ಒಡಮೂಡಿಸಿ, ದೊಡ್ಡ ದೊಡ್ಡ ಬ್ರಷ್ ಹಿಡಿದು ಬಣ್ಣ
ಬಳೆಯುವ ಕೆಲಸ.