ಪುಟ:KELAVU SANNA KATHEGALU.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

19

ಅದು ನಿರಂತರ. ಜೀರ್ಣವಾದ ಶರೀರ ಬಿದ್ದ ಜಾಗದಲ್ಲೇ ಚಿಗುರೊಡೆಯುತ್ತ ಮತ್ತೊಂದು ಜೀವ ಚಿಮ್ಮಿರುತ್ತದೆ.

ಈ ಸಂಕಲನದ ಕಡೆಯ ಕಥೆ 'ಹರಕೆಯ ಖಡ್ಗ' ಉಳಿದ ಒoಬತ್ತಕ್ಕಿoತ ಭಿನ್ನವಾಗಿದೆ. ಇದು ಐತಿಹಾಸಿಕ ವಸ್ತುವನ್ನು ಒಳಗೊಂಡಿರುವುದೊಂದೇ ಈ ಭಿನ್ನತೆಗೆ ಕಾರಣವಲ್ಲ. ಹಿನ್ನೆಲೆಯ ತಂತ್ರವೇ ಆದರೂ ನಿರೂಪಣೆಯಲ್ಲಿ ನಾವೀನ್ಯವಿದೆ. ಸಪ್ಪೆ ಇತಿಹಾಸಕ್ಕೆ ಜೀವಕಳೆ ಬಂದಿದೆ. ಸ್ವಾಭಿಮಾನದ ಕೆಚ್ಚು ಕಥೆಯ ಕೇಂದ್ರಬಿಂದುವಾದರೂ ಮುಖ್ಯ ಪಾತ್ರದ ಸೂಕ್ಷ್ಮಸಂವೇದನೆಗೆ ಕೊಟ್ಟಿರುವ ಒತ್ತನ್ನು ಗುರುತಿಸಬೇಕು. ಮೈಸೂರು ಚರಿತ್ರೆಯ ಗಣಿಯಾಳದಲ್ಲಿ ತೆಳುರೇಖೆಯಾಗಿ ಹಾದುಹೋಗಿರುವ ಅಪ್ರಸಿದ್ಧ ವಸ್ತುವನ್ನು ಪುನರ್ ಸ್ರಿಷ್ಟಿಸಿರುವುದೂ ಒoದು ಹೆಚ್ಚಳವೇ. ಉಸಿರು ನಿಲ್ಲುವ ಕಡೆಯ ಗಳಿಗೆಯಲ್ಲಾ ತನ್ನ ವ್ಯಕ್ತಿತ್ವದ ಮುಖ್ಯ ಧಾತುವನ್ನು ಬಿಟ್ಟುಕೊಡದ ಧೋಂಡಿಯಾನ ಪಾತ್ರ ಯಾವ ಹೆಚ್ಚಿನ ವ್ಯಾಖ್ಯಾನವನ್ನೂ ಬಯಸದೆ ತನ್ನಷ್ಟಕ್ಕೇ ಬೆಳಗಿದೆ. ಐತಿಹಾಸಿಕ ವಸ್ತುವನ್ನು ನಿರಂಜನರು ಹೇಗೆ ನಿರ್ವಹಿಸುತ್ತಾರೆ ಎಂಬುದಕ್ಕೆ `ಕಲ್ಯಾಣಸ್ವಾಮಿ' ಕಾದಂಬರಿಯನ್ನು ಓದಬೇಕು, 'ಹರಕೆಯ ಖಡ್ಗ' ಕರ್ನಾಟಕ ಇತಿಹಾಸದ ನಿಕ್ಷೇಪದಿಂದ ತೆಗೆದ ಅಪರೂಪದ ಒಂದು ರತ್ನವೆಂಬುದನ್ನು ಓದುಗರಿಗೆ ಮನಗಾಣಿಸಿಕೊಡುವುದರಲ್ಲಿ ಕಥೆ ಯಶಸ್ವಿಯಾಗಿದೆ. ಅತಿ ಭಾವುಕತೆಯಿಂದ ಬಳಲದೆ ವೈಚಾರಿಕ ನೆಲೆಯಲ್ಲಿ ಚಲಿಸಲು ಪೂರ್ವಸ್ಮರಣೆಯ ಸುಳಿ ಸಹಾಯಕವಾಗಿದೆ. ಒಂಟಿ ನಕ್ಷತ್ರ ನಕ್ಕಿತು, ಹಮಾಲ ಇಮಾಮ್ ಸಾಬಿ ಕಥೆಗಳಲ್ಲಿರುವಂತೆ ಇಲ್ಲಿಯೂ ಮುಂದೆ ಬೆಳೆಯಲಿರುವ ಎಳೆಯ ಚೇತನ ವೊಂದಿದೆಯೆಂಬುದನ್ನು ಗಮನಿಸಬಹುದು.

ನಿರಂಜನರ ಶೈಲಿಯ ಕುರಿತು ಎರಡು ಮಾತು.ನಿರಂಜನರ ಬರವಣಿಗೆಯಲ್ಲಿ ಮೊದಲ ಗುಣ ಆತ್ಮೀಯತೆ, ಪ್ರಸನ್ನತೆ, ಅಲಂಕಾರಗಳ ಹೊರೆಯಿಂದ ಕುಸಿಯುವ ರಂಜಕ ಶೈಲಿ ಅವರ ಯಾವ ಕಥೆ ಕಾದಂಬರಿಯಲ್ಲೂ ಸಿಗಲಾರದು. ಸರಳತೆಯೇ ಅದರ ಜೀವಾಳ. ನಿರಲಂಕೃತವಾಗಿರುವುದೊಂದೇ ಅಲ್ಲ, ದುಂದು ಗಾರಿಕೆಯೂ ಇರುವುದಿಲ್ಲ. ನೇರವೂ ಪಾರದರ್ಶಕವೂ ಆದ ಶೈಲಿಯ ಸೊಗ ಸನ್ನು ಯಾವ ಕಥೆಯಲ್ಲಿ ಬೇಕಾದರೂ ಕಾಣಬಹುದು. ಕೆಲವೊಮ್ಮೆ ಕ್ರಿಯಾ ಪದಗಳೇ ಇರದ ಪುಟ್ಟ ವಾಕ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಾರೆ. ಚಿತ್ರ ಬಿಡಿಸಿದಂತೆ, ಮೂರ್ತಿ ಕೆತ್ತಿದಂತೆ ಸಂದರ್ಭಗಳನ್ನು ಸವಿವರವಾಗಿ ನಿರೂಪಿಸುತ್ತಾರೆ.