ಪುಟ:Rangammana Vathara.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

154

ಸೇತುವೆ

ಮತ್ತು ರಾಧಾ ಅದೇನನ್ನೋ ಹೇಳಲು ಹೊರಟರು. ಆದರೆ ಸ್ವರವೇರಿಸಿ ಬೈಯು
ವುದರಲ್ಲೆ ನಿರತಳಾದ ರಾಜಮ್ಮನಿಗೆ ಅದು ಒಂದೂ ಕೇಳಿಸಲಿಲ್ಲ. ಕಲಿಕಾಲದ ಹುಡುಗಿ
ಯರು ಬಜಾರಿಗಳೆಂದು ಆಕೆ ಸಾರಿದಳು. ಹಿಡಿಯುವರಿಲ್ಲದೆ ನೀರು ವೃಥಾ ಹರಿದು
ಹೋಯಿತು.
ಗದ್ದಲ ಕೇಳಿ ಬಂದ ರಂಗಮ್ಮ ಆಕ್ರೋಶ ಮಾಡಿದರು:
"ಅಯ್ಯೊ ನಮ್ಮಪ್ಪಾ! ನೀರು ಸುರಿದು ಹೋಗ್ತಾ ಇದೆಯಲ್ಲೇ!"
ತಾಯಿಯ ಸ್ವರ ಕೇಳಿ ವೆಂಕಟೇಶ ಉಪ್ಪಿಟ್ಟನ್ನು ಅರ್ಧದಲ್ಲೇ ಬಿಟ್ಟು ಹೊರ
ಬಂದ. ಆತನನ್ನು ನೋಡುತ್ತಲೆ ಅಹಲ್ಯಾ ಅಳತೊಡಗಿದಳು.
"ಹೋಗ್ಲಿ. ನಾನೇ ಹಿಡಕೊತೀನಿ", ಎಂದು ರಾಧಾ ತನ್ನ ಬಕೀಟನ್ನು ಕೊಳಾ
ಯಿಯ ಕೆಳಗಿಟ್ಟಳು.
ರಾಜಮ್ಮ ಗಟ್ಟಿಯಾಗಿ ಕಿರಿಚಿಕೊಳ್ಳುತ್ತ ಆ ಬಕೀಟನ್ನು ಪಕ್ಕಕ್ಕೆ ತಳ್ಳಿದರು. ಆ
ಗಲಾಟೆಯ ಮಧ್ಯೆ ನಿಜ ಸಂಗತಿ ರಾಜಮ್ಮನಿಗೆ ಹೊಳಿಯಿತು. ಅಹಲ್ಯಾ ರಾಧೆಯರು
ಸ್ಥಳಗಳನ್ನು ಮಾತ್ರ ಬದಲಾಯಿಸಿಕೊಂಡಿದ್ದರೆಂಬುದು ಸ್ಪಷ್ಟವಾಯಿತು. ತಪ್ಪು ತನ್ನ
ದೆಂದು ಗೊತ್ತಾದೊಡನೆ ಅವಳು ಮತ್ತಷ್ಟು ಗಟ್ಟಿಯಾಗಿ ಕೂಗಾಡಿದಳು:
"ರಾಮ ರಾಮಾ! ಈ ಹುಡುಗಿಯರು ಹೊಡೆಯೋಕೇ ಬರ್ತಾವಲ್ಲೇ!"
ಬೀದಿಯಲ್ಲೂ ಜನ ಗುಂಪು ಕಟ್ಟಿಕೊಂಡು ವಠಾರದತ್ತ ನೋಡತೊಡಗಿದರು.
ವೆಂಕಟೇಶ ತಾಯಿಗೆ ಹೇಳಿದ:
"ನೀನು ಬಾಮ್ಮ ಒಳಕ್ಕೆ. ಎಲ್ಲರ್ದೂ ಆದ್ಮೇಲೆ ನೀರು ಹಿಡ್ಕೊ."
ಮಗನೂ ಹುಡುಗಿಯರ ಪಕ್ಷ ವಹಿಸಿದ್ದನ್ನು ಕಂಡು ರಾಜಮ್ಮನಿಗೆ ರೇಗಿ
ಹೋಯಿತು.
"ಅಯ್ಯೋ ಮುಂಡೇಗಂಡಾ! ನೀನೂ ನಿಮ್ಮಮ್ಮನಿಗೆ ಅಂತಿಯೇನೋ!" ಎಂದು
ರಾಜಮ್ಮ ತನ್ನ ಬಿಂದಿಗೆ ಎತ್ತಿಕೊಂಡಳು.
"ಈ ನಲ್ಲಿ ನೀರೇ ಬೇಡ. ಬೀದಿ ಕೊಳಾಯಿಯಿಂದ ತರ್ತೀನಿ,"ಎಂದು ಹೇಳಿ
ಅವಳು ಎದುರುಗಡೆ ದೊಡ್ಡ ಮಹಲಿನ ಹೊರಭಾಗದಲ್ಲಿದ್ದ ಬೀದಿ ಕೊಳಾಯಿಯತ್ತ
ಸಾಗಿದಳು.
ವಠಾರದ ಕೊಳಾಯಿಯನ್ನು ಆಗಲೆ ನಿಲ್ಲಿಸಿಬಿಟ್ಟಿದ್ದರು ರಂಗಮ್ಮ. ರಾಜಮ್ಮ
ಹೊರಟು ಹೋದ ಮೇಲೆ ಅವರು ಮತ್ತೊಮ್ಮೆ ನಲ್ಲಿ ತಿರುಗಿಸಿದರು. ರಾಧಾ ನೀರು
ಹಿಡಿದಳು. ಅಹಲ್ಯಾ ಅಳುತ್ತಾ ಒಳಹೋದ ಮೇಲೆ ಆಕೆಗೆ ಒಂದೇಟು ಕೊಟ್ಟು,
ಮಗಳ ಬದಲು ಆಕೆಯ ತಾಯಿ ಹೊರ ಬಂದಳು.
ವೆಂಕಟೇಶ ಕೋಪದಿಂದ ಮುಖ ಊದಿಸಿಕೊಂಡು, ಉಪ್ಪಿಟ್ಟನ್ನು ಅರ್ಧದಲ್ಲೇ
ಬಿಟ್ಟು, ಚಪ್ಪಲಿ ಮೆಟ್ಟಿ ಹೊರಟು ಹೋದ.

ಬೀದಿಯ ಕೊಳಾಯಿ ತೆರವಾಗಿರಲಿಲ್ಲ. ಶ್ರೀಮಂತರ ಮನೆಯ ಮಾಲಿಯೂ