6
ಸೇತುವೆ
ದಾರಿ ಬಿಡಿಸಿಕೊಂಡು, ಅವರು ಬಂದರು. ಊರುಗೋಲು ವಠಾರದ ಕೊನೆಯಲ್ಹದ್ದ ನಾರಾಯಣಿಯ ಮನೆಯ ಮುಂದೆ ನಿಂತಿತು.
ಪ್ರಯತ್ನ ಪೂವರ್ಕವಾಗಿ ಬೆನ್ನನ್ನು ನೇರಗೊಳಿಸಿ, ಜೋಲು ಮೋರೆ ಹಾಕಿ
ಸುತ್ತಲೂ ನೋಡಿ, ರಂಗಮ್ಮ ನಿಟ್ಟುಸಿರುಬಿಟ್ಟರು.
ಎಲ್ಲರ ಹಾಗೆ ರಂಗಮ್ಮ ಅಳುವುದರಲ್ಲಿ ಅರ್ಥವಿರಲಿಲ್ಲ. ಅರುವತ್ತೈದು ವರ್ಷ
ಗಳ ಅವಧಿಯಲ್ಲಿ ಅವರೆಷ್ಟೋ ಸಾವು ಎಷ್ಟೋ ಹುಟ್ಟು ನೋಡಿದ್ದರು. ಅಲ್ಲದೆ, ವಯಸ್ಸಿನಲ್ಲಿ ಅವರು ಎಲ್ಲರಿಗಿಂತಲೂ ಹಿರಿಯರು. ವಠಾರದ ಒಡತಿ. ಅವರು ಅಳುವಂತಿಲ್ಲ.
ಎರಡು ಮೂರು ವರ್ಷಗಳಿಂದ ಆ ವಠಾರಕ್ಕೆ ಯಮರಾಯ ಬಂದಿರಲಿಲ್ಲ. ಈ
ವರ್ಷ ಯಾಕೊ_
ಯಾರೋ ಅಂದರು:
"ಬುಧವಾರವೇ ಸತ್ಯ, ನಡು ಹಗಲಲ್ಲಿ, ಪುಣ್ಯವಂತೆ."
ಪಾಪ ಪುಣ್ಯಗಳ ಯೋಚನೆ ರಂಗಮ್ಮನನ್ನು ಕಾಡುತ್ತಿರಲಿಲ್ಲ, ಸಾವು ಆ
ವಠಾರದ ದಿನನಿತ್ಯದ ಜೀವನಕ್ರಮವನ್ನು ಸ್ತ್ರಬ್ಧಗೊಳಿಸಿತ್ತು ಸತ್ತಿದ್ದ ನಾರಾಯಣಿ ಯನ್ನು ಹೊರಕ್ಕೆ ಸಾಗಿಸುವವರೆಗೂ ಆ ಅವ್ಯವಸ್ಥೆ ಸರಿಹೋಗುವಂತಿರಲಿಲ್ಲ, ಒಬ್ಬ ಮನುಷ್ಯ ಸತ್ತ ಮೇಲೂ ಮಾಡಬೇಕಾದ ಕ್ರಿಯೆಗಳಿದ್ದುವು
ಸಾವಿನ ಮನೆಯೊಳಕ್ಕೆ ತಲೆಹಾಕಿ ರಂಗಮ್ಮ ಹೇಳಿದರು:
ರಂಗಮ್ಮನ ಸಹಾನುತಾಪದ ಮಾತು ಕೇಳಿ ನಾರಾಯಣಿಯು ಗಂಡ ಮತ್ತೊ
ಗಟ್ಟಿಯಾಗಿ ರೋದಿಸಿದ.
ಮಿನಾಕ್ಷಮ್ಮ ಒಳಹೋದಳು, ಚಲಿಸಿದೆ ಮಲಗಿದ್ದ ತಾಯಿಯ ಬಳಿ ಆಳುತ್ತ
ಲಿದ್ದ ಎಳೆಯ ಕೂಸನ್ನು ಎತ್ತಿಕೊಂಡು ಹುರಬಂದಳು.
"ಎಲ್ಲಿ ಬೇರೆ ಹುಡುಗರು?" ಎಂದು ರಂಗಮ್ಮ ಸುತ್ತಲೂ ನೋಡಿ ಕೇಳಿದರು.
"ದೊಡ್ಡೋನು ಸ್ಕೂಲಿಗೆ ಹೋಗಿದಾನೇನೋ?"
"ఇల్ల, ಚಿಕ್ಕೋವ್ನ ಆಡಿಸ್ತಾ ಇಲ್ಲೆ ಇದ್ದಾಂದ್ರೆ."
ಸಾಯೋ ಘಳಿಗೇಲಿ ಹತ್ತಿರ ಇದ್ದಿಲ್ಲ, ನಿರ್ಭಾಗ್ಯ ಮುಂಡೇವು."
“ಹೋಗ್ರೇ, ಯಾರಾದರೂ ಕರಕೊಂಬನ್ನಿ. ರುಕ್ಕೂ, ನೀನು ಹೋಗಮ್ಮ."
"ಹುಂ.. ಒಬ್ಬರೂ ಇಲ್ವಲ್ಲ ಇಲ್ಲಿ!" ಎಂದರು ರಂಗಮ್ಮ, ಆ ಧ್ವನಿಯಲ್ಲಿ
ಬೇಸರವಿತ್ತು, ಅಷ್ಟು ಜನ ಅಲ್ಲಿದ್ದರೂ ಅವರ ದೃಷ್ಟಿಯಲ್ಲಿ ಒಬ್ಬರೂ ಅಲ್ಲಿರಲಿಲ್ಲ' ಒಬ್ಬ ಗಂಡಸೂ ಅಲ್ಲಿರಲಿಲ್ಲ.
"ದಿನಾ ಗುಂಡಣ್ನನಾದರೂ ಇರ್ತಿದ್ದ. ಎಲ್ಲೋದ್ನೋ ಇವತ್ತು?"