ಪುಟ:ಬತ್ತೀಸಪುತ್ತಳಿ ಕಥೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ m ಬ ಬತ್ತೀಸ ಪುತ್ತಳಿ ಕಥೆ. ಇಷ್ಟಾರ್ಥಮಂ ಪಾಲಿಸುವನೆಂದು ಬರೆದಿರ್ಸ ಶಾಸನವನೋದಿಕೊಂಡು ವಿಕ್ರಮನಿಗಲ್ಲದೆ ಇನ್ನಾರಿಗೆ '- ಎಂದು ನಿಶ್ಚಯದಿಂದ ಅಮರವನ್ನೇ ಆ ನೆಲುವಿನಲ್ಲಿ ಕುಳಿತು ತನ್ನ ಕೈಯ ಕತ್ತಿಯಿಂದ ನೆಲವಂ ಕತ್ತರಿಸಲು ; ಆನೆಲುವು ಬೋ ಎಂದು ಕೂಗುತ್ತ ಕೊಳದೊಳಗೆ ಬೀಳುವ ವೇಳೆ ಯಲ್ಲಿ ಈಶ್ವರನು ಬಂದ ಹಿಡಿದೆತ್ತಿಕೊಂಡು-'ಎಲೈ : ನಿನ್ನ ಮನೆ ನಿಶ್ಯಕ್ಕೆ ಮೆಚ್ಚಿ ಗೆನು' ಎಂದು, ವಿಕ್ರಮನ ಕರೆದುಕೊಂಡು ಹೋಗಿ, ವಜ್ರ ಮಕುಟರಾಯನ ಮಗಳಾದ ಸುಲಭಾವತಿಯನ್ನು ಮದುವೆ ಮಾಡಿಸಿ, ಬೇಕಾದ ಇಷ್ಟಾರ್ಧನಂ ಪಾಲಿಸಿ, ದಂಪತಿ ಸಹ ಕಳುಹಿಸಲಾಗಿ; ಅಲ್ಲಿಂದ ಸತಿಯ ಕರೆದುಕೊಂಡು ಬರುವ ಮಾರ್ಗದಲ್ಲಿ ಶಾಂಭವೆಯೆಂಬ ನದಿಯು ಪೂರ್ಣಪ್ರವಾಹದಿಂದ ಹರಿಯುವುದು ಕಂಡು, ಆ ಬಳಿಯಲ್ಲಿ ಇರುವ ಅಂ ಬಿಗನಂ ಕರೆದು-ನವಿಾರ್ವರನ್ನು ದಾಂಟಸಿ, ಕೊಡು ಎನಲಾಗಿ ; ಅಮಾ ತಿಗೆ ಅಂಬಿಗನು ಹರಿಗೋಲು ಒಬ್ಬ ರನಲ್ಲದೆ ಇಬ್ಬರ ಹಿಡಿಯದು ಎಂದ ಮಾತಿಗೆ-ಮುಂಚೆ ನನ್ನ ಸಾಗಿಸಿ “ಆಮೇಲೆ ಹೆಂಗಸ ಸಾಗಿಸೆನ್ನಲಾಗಿ ; ಅದೇಪ್ರಕಾರಕ್ಕೆ ಮುಂಚೆ ವಿಕ್ರಮನ ಆಚೆಗೆ ಸಾಗಿಸಿಬಿಟ್ಟು, ಈಚಿಗೆ ಬಂದು, ಹರಿಗೋಲಿ ಹೆಂಗಸ ಹತ್ತಿಸಿಕೊಂಡು ಬರುತ್ತ ಅವಳ ರೂಪು ಲಾವಣ್ಯವ ಕಂಡು, ಸೈರಿಸಲಾಗಿದೆ, ಅಂಬಿಗನು ಬೇರೆ ಮಾರ್ಗದಲ್ಲಿ ಕರೆದು ಕೊಂಡು ಹೋಗಿ, ಅಲ್ಲೊಂದು ಗಟ್ಟದಲ್ಲಿ ನಿಂತು, ಅವಳ ತನ್ನಲ್ಲಿ ಕ್ರಿಡಿ ಸುವುದಕ್ಕೆ ಬಹಳ ಬಗೆಯಲ್ಲಿ ಒಡಂಬಡಿಸುತ್ತಿದ್ದನು. ಇತ್ತಲಾವಿಕನು ತನ್ನ ಸತಿಯ ಅಂಬಿಗ ಎತ್ತ ಕಡೆ ಕರೆದುಕೊಂಡು ಹೊದನೆ ತಿಳಿಯಲು ಇಲ್ಲದೆ ವ್ಯಸನಪಡುತ್ತ, ತಾನವರಂ ತಡಕುತ್ತ ಹೋದರೆ ಅನ್ನ ಕೊಟ್ಟಂಥ ಅರಸಿನ ಕೆಲಸ ಕೆಟ್ಟಿತು ಎಂದು ಯೋಚಿಸಿ, ದೃಢವಿಡಿದು ಮುಂದಕ್ಕೆ ನಡೆದು, ಬರುವ ದಾರಿಯಲ್ಲಿ ಒಂದು ಪಟ್ಟಣವಂ ಕಂ ದು, ಅಲ್ಲಿಗೆ ಹೋಗಿ ನೋಡಲಾಗಿ; ಜನರೊಬ್ಬರೂ ಇಲ್ಲದಿರುವುದ ಕಂಡು, ಆಶ್ಚರ್ಯಪಟ್ಟು ನೋಡುತ್ತ ಹೋಗುವಲ್ಲಿ ಒಂದು ಉಪ್ಪರಿಗೆಯ ಕಂಡು, ಅದು ಮೇಲೆ ಹತ್ತಿ ಹೋಗಲಾಗಿ, ಅಲ್ಲಿ ಅತಿರೂಪವನಸಂಪನ್ನೆ ಯಾದ ಒಬ್ಬ ಸ್ತ್ರೀ ಯಂ ಕಂಡು, ಅವಳ-ನೀನು ದೇವತೆಯೋ, ದೈವ ವೋ, ಕಾಮರೂಪಿಯೋ ? ನೀನು ಯಾರು ? ಎಂದು ಕೇಳಿದುದಕ್ಕೆ-ಅವ ಆm.