ಪುಟ:ಬತ್ತೀಸಪುತ್ತಳಿ ಕಥೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ಕರ್ಣಾಟಕ ಕಾವ್ಯ ಕಲಾನಿಧಿ, ಸತ್ಯಜ್ಞಾನಗತಿಯಿರುವ ಸ್ಥಳ ತೋಸಬೇಕೆನ್ನಲಾಗಿ; ಸಮುದ ರಾಜ ಆರುಷಿಯ ತಪೋವನನಂ ತೋಯಿಸಲು ; ಆ ದಿಜನು ಮುನಿಯ ಬಳಿಗೆ ಬಂದು, ನಮಿಸಿ ರಾಯ ಕಳುಹಿದ ವೃತ್ತಾಂತವಂ ಪೇಳಲಾಗಿ ; ಆರು ಕೇಳಿ ಸಂತೋಷಪಟ್ಟು ಇಂತೆಂದನು' --ಎಲೆ ಬ್ರಾಹ್ಮಣ ' ನನಗೂ ವಿಕ ಮಾದಿತ್ಯರಾಯನಿಗೂ ಅತಿಸ್ನೇಹ, ಆತನು ನಾನು, ನನ್ನಲ್ಲಿ ಆತ, ಎಲ್ಲಿ ಇದ್ದಾಗ್ಯೂ ಗಂಡಭೇರುಂಡದಂತೆ ತಿರಸ್ಸೆರಡಾಗಿ ದೇಹ ಏಕವಾಗಿ ಇದ್ದೇವೆ. ನಾನು ಬರುವುದಕ್ಕೇನು ? ಬಂದೇನು. ಅಲ್ಲಿ ಯಜ್ಞಪೂರ್ತಿಯಾಗಿದೆ. ನಾನು ಒಂದು ಪ್ರಯೋಜನವಿಲ್ಲ, ನೀನು ಹೋಗು ಎಂದು ಹೇಳಿ ರಾಯ ನಿಗೆ ಐಮ ರತ್ನ ವಂ ಕೊಟ್ಟು, ಅರತ್ನಗಳ ಪರೀಕ್ಷೆಯ ಪೈ೪, ಕಳುಹಿ ಸಲು ; ಆಪುರೋಹಿತ ರಾಯನ ಬಳಿಗೆ ಬಂದು, ಆ ರುಸಿಯೆಂದ ಮಾತಿನ ವಿವರ ಹೇಳಿ, ಐದು ರತ್ನವಂ ಮುಂದಿರಿಸಲಾಗಿ ; ಅಷ್ಟಲ್ಲಿ ಯಜ್ಞಪೂರ್ತಿ ಯಾಗಿ ಮಂಗಳಾವವೃಥಾನವು 4ರಿ, ಸಕಲರಿಗೆ ದಾನದಕ್ಷಿಣೆಗಳ ಕೊಟ್ಟು, ಬಳಿಕ ರಾಯನೈದು ರತ್ನದ ಪರಿಕ್ಷೆ ಕೇಳಲಾಗಿ , ಪುರೋಹಿತ ಇಂತೆಂದನು 'ಈ ಸಂಚರತ್ವದಲ್ಲಿ ಈರತೃ ಸುವಣ-ದ್ರವ ಕೊಡುವುದು; ಈರತ್ನ ಚತುರಂಗಸೇನೆ ವಾಹನಗಳ ಕೊಡುವುದು ; ಇರತ್ನ ದಿವ್ಯ ದುಕಲಾಭರಣಗಳ ಕೊಡುವುದು, ಈರತ್ನ ಸುಂದರನಿಯರಂ ಕೊಡು ವುದು : ಈರತೃ ಮೃಷ್ಟಾನ್ನ ರಾಕನ ಕೊಡುವುದು, ಎಂದು ಬಯಸಿ ಅನು ಗ್ರಹಿಸಿ ಕೊಟ್ಟು ಇದ್ದಾರೆ ಎಂದು ಆಕೆಯಂ ಮಾಡಲಾಗಿ , ರಾಯ ಪರಿತೋಷಮಂ ಮಾಡಿಕೊಂಡು ಎಲೈ ಪುರೋಹಿತನೇ ! ಯಜ್ಞದ ದಾನ ದಕ್ಷಿಣೆ ನಿನಗೆ ಕೊಡಲಿಲ್ಲ ; ಈಐದು ರತ್ನದಲ್ಲಿ ನಿನಗೆ ಬೇಕಾದ ಒಂದು ರತ್ನನ ತೆಗೆದುಕೊ ಎನ್ನಲಾಗಿ ; ಅವ, ತನ್ನ ಮನೆಗೆ ಹೋಗಿ ಬಂದು ತೆಗೆ ದುಕೊಳ್ಳುವೆನೆಂದು ರಾಯನಿಗೆ ಬಿಸಿ, ತನ್ನ ಮನೆಗೆ ಹೋಗಿ, ನಾಲ್ವರು ಮಕ್ಕಳು ಪತ್ನಿ ಸಹ ಕರೆದು, ಅವರ ಕಡೆ ಈವಿವರವ ವಿರಚಿಸಲಾಗಿ; ಪತ್ನಿ -ಎಲೈ ಪುರುಷನೆ : ಬಹುಕಾಲ ಕಷ್ಟಪಟ್ಟಿರುವುದಿಂದ ದುಕೂ ಲಾಭರಣ ಕೊಡುವ ರತ್ನ ತಾರೆಂದುದ, ಹಿರಿಯಮಗ ಕೇಳಿ-ಅದು ಬೇಡ ಸುವರ್ಣದ್ರವ್ಯಕೊಡುವ ರತ್ನ ತಾರೆಂದು, ಎರಡನೆಯ ಮಗ ಕೇಳಿ-ಚತು ರಂಗಸೇನೆ ವಾಹನ ಕೊಡುವ ರತ್ನ ತಾರೆಂದು, ಮನೆಯ ಮಗ ಕೇಳಿ