ಪುಟ:ಬತ್ತೀಸಪುತ್ತಳಿ ಕಥೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ . M ಕರ್ಣಾಟಕ ಕಾವ್ಯ ಕಲಾನಿಧಿ. ಬೇಕು? ” ಎಂದು ತನ್ನ ಪ್ರಧಾನನ ಕೇಳಲಾಗಿ, ಅವನಿಂತೆಂದನು:-ಈ ಜತೆಗೆ ಇನ್ನೊಂದು ಬೇಕಾದರೆ ವಿಕ್ರಮನಿಗೆ ಹೇಳಿದರೆ ಆದೀತು' ಎಂದ ಮಾತು ಸಹಜವೆಂದು ಆಗ ಅರಸು' ಪ್ರಧಾನ ಸಹ ವಿಕ್ರಮನ ಮನೆಗೆ ಬಂದು ಇಂ ತಂದರು.-ಎ ವಿಕನು ! ನೀನು ತಂದ ಕಾಲಿನಲ್ಲಿದ್ದ ಅಂದುಗೆಯನ್ನು ಅರಸೀತಿಗೆ ಕೊಡಲಾಗಿ, ಇದು ಜತೆ ಅಂದುಗೆಯ ತರಿಸಿ ಕೊಟ್ಟರೆ ಸಮ, ಇಲ್ಲದೆ ಇದ್ದರೆ ದೇಹವಿರಿಸುವುದಿಲ್ಲವೆಂದು ನಿಶ್ಚಯವಂ ಮಾಡಿ ಹೇಳಿ ಇ ದ್ದಾಳೆ, ಇದಕ್ಕೇನು ಮಾಡಬೇಕು? ?” ಎಂದು ಬಹುತರದಿಂದ ಅರಸು ಪ್ರಧಾ ನನು ಸಹ ಕೇಳಲಾಗಿ; ವಿಕ್ರಮ-'ಎಷ್ಟು ದಿನಕ್ಕೆ ಕೊಡಬೇಕು ? ” ಎಂದ ಮಾತಿಗೆ ಅರಸು ಇಸ್ಪತೊಂದು ದಿನಕ್ಕೆ ತಂದುಕೊಟ್ಟರೆ ಸರಿ, ಇಲ್ಲದೆ ಇದ್ದರೆ ಪುತ್ರ ಮಿತ್ರಾದಿಗಳೆಲ್ಲಾ ಅಗ್ನಿಪ್ರವೇಶವಂ ಮಾಡುತ್ತೇವೆ' ಎನ ಲಾಗಿ; ಆ ಮಾತಿಗೆ ವಿಕ್ರಮ ಒಪ್ಪಿ ಅಂದುಗೆಯ ತರುತ್ತೇನೆಂದು ಅರಸನ ಅಪ್ಪಣೆ ತೆಗೆದುಕೊಂಡು, ಅಲ್ಲಿಂದ ಹೊಚಟು, ಆ ದಿನ ಮಧ್ಯಾಹ್ನದ ಹೊ ತಿಗೆ ಬಹುದೂರ ಬಂದು, ಬಿಸಿಲಿನಿಂದ ಬಳಲಿ, ಒಂದು ಚೂತವೃಕ್ಷದ ಕೆಳಗೆ ಕುಳಿತುಕೊಂಡು, ಮಾರ್ಗದಲ್ಲಿ ಹೋಗುವವರ ಕರೆದು-ನೀರು ಎಲ್ಲಿ ಇದೆ? ?” ಎಂದು ಕೇಳಲಾಗಿ; ಅವರು ಎದುರಾಗಿರುವ ಬೆಟ್ಟಕ್ಕೆ ನಡ ಲಾಗಿ ಕಲ್ಲು ಕಟ್ಟಿದ ಕೊಳದಲ್ಲಿ ಕೈತೋದಕ ಸಮೃದ್ಧಿಯಾಗಿ ಇದೆ' ಎನ ಲಾಗಿ ; ಆ ಕೊಳದ ಬಳಿಗೆ ಹೋಗಿ, ತೃಪೆಯಿಂಗಿಸಿಕೊಂಡು, ಮೇಲಕ್ಕೆ ಹತ್ತಿ ಬರುವಲ್ಲಿ ಸೋಪಾನದಮೇಲೆ ಶಾಸನ ಬರೆದಿರುವುದು ಕಂಡು, ಓದಿ ನೋಡಿದನು. ಅದೇನೆಂದರೆ '-ಈ ಕೆಳದ ಏಲಿಯಮೇಲೆಂದು ಯೋ ಜನ ಉನ್ನತದ ಮಾವಿನಮರದ ಕೊನೆ ಕೊಳದ ಮೇಲೆ ಬಂದಿರುವುದು. ಅದ ಕ್ಕೆ ಬಂದು ನೆಲುವು ಕಟ್ಟಿ ಇರುವುದು. ಆ ಕೊಳದೊಳಗೆ ಆನೆಯ ಗಾತ್ರ ಅಗ್ನಿಕುಂಡವಿರುವುದು. ಅದು ಆಳ ನಾಗಲೋಕನ ಮುಟ್ಟಿಯಿರುವುದು. ಆವನಾನೊಬ್ಬ ವೀರನಾದವನು ಆಮರವನ್ನೇ ಆನೆಲುವಿನೊಳಗೆ ಕು ಆತು, ನೆಲುವಿನ ಕಟ್ಟನ್ನು ತನ್ನ ಕೈಯ ಕತ್ತಿಯಿಂದ ಹಮ್‌ದರೆ, ಆ ನೆಲುವು ಕೊಳದೊಳಗೆ ಬೀಳುವ ಸಮಯದಲ್ಲಿ ಅವನ ವೀರತ್ವಕ್ಕೆ ಮೆಚ್ಚಿ ಪಾರ್ವ ತೀಪತಿಯಾದ ಪರಶಿವನು ಪ್ರಸನ್ನನಾಗಿ ಎತ್ತಿಕೊಂಡು ಆವೀರನಿಗೆ ವಜ್ರ ಮಕುಟರಾಯನ ಮಗಳಾದ ಸುಲಭಾವತಿಯನ್ನು ವಿವಾಹಮಾಡಿಸಿ, ಸಕ ಆ ದ* M m ಟ + D.