ಪುಟ:ಬತ್ತೀಸಪುತ್ತಳಿ ಕಥೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭ - ಬಸಪುತ್ತಳಿ ಕಥೆ. ನೀನು ಕೇಳಿದುದ ಕೊಡುವುದು. ನೀನು ಇನ್ನು ಸುಖವಾಗಿರು, ಎಂದು ಕಳುಹಿಸಿ, ಅಲ್ಲಿಂದ ಇಲ್ಲಿ ಬಂದು ತಾನು ಸುಖದಿಂದ ಇದ್ದನು, ಕಣಾ : ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಅನಂಗಜೆಯೆಂಬ ಪುತ್ತಳಿಯು ಪೇಳಿದ ಹನ್ನೊಂದನೆಯ ಕಥೆ. ೧೨ ನೆಯ ಕಥ. m ಹನ್ನೆರಡನೆಯ ದಿವಸದಲ್ಲಿ ಭೋಜರಾಯನು ಸಾನ ದೇವತಾರ್ಚನೆ ಭೋಜನ ತಾಂಬೂಲವಂ ತೀರಿಸಿ, ಎಂದಿನಂತೆ ಸಿಂಹಾಸನದ ಬಳಿಗೆ ಬಂದು, ಬಲದ ಕಾಲ೦ ನೀಡುವ ಸಮಯದಲ್ಲಿ, ಆ ಸೋಪಾನದ ಇಂದ್ರಾ ವತಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ, ಭೋಜರಾಯನು ಬೇತಿ ನಿಂಹಾ ಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಹೇಳಿದ ಕಥೆ:- ಎಲೆ ಪುತ್ತಳಿಯೇ, ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖದಿಂದ ರಾಜ್ಯಂಗೆಯ್ಯುವಲ್ಲಿ ಒಂದು ದಿನ ಸದರಿನಲ್ಲಿ ಕುಳಿತಿರುವ ವೇಳೆ ಯಲ್ಲಿ ವರರುಚಿ ಮೊದಲಾದ ಕವಿಗಳ ಮುಖಮಂ ನೋಡಿ ಒಂದು ಬೆರಲಂ ತೋಜಲಾಗಿ ; ಅದಕ್ಕೆ ಯಾರೂ ಉತ್ತರನಂ ಕೊಡದೆ ಇರುವುದ ಕಂಡು, ಅಲ್ಲಿಂದ ವರರುಚಿ ಎದ್ದು ಹೋಗಿ ಬಂದು ಊರಲ್ಲಿ ಒಬ್ಬ ಕುರುಬ ರೂ ಸಸ್ತನಾಗಿ ಇರುವುದು ಕಂಡು, ಅವನ ಕರೆದು-ನಿನಗೊಂದು ಕಾರವಂ ಮಾಡಿಕೊಟ್ಟೆನು. ನನ್ನ ಸಂಗಡ ಬಾರೆಂದು-ಅವನ ತನ್ನ ಮನೆಗೆ ಕರೆ ದುಕೊಂಡು ಹೋಗಿ-ಎಲೋ ಕುಚುಬ ! ನಿನ್ನ ರಾಯನ ಮನೆಗೆ ಕರೆದು ಕೊಂಡು ಹೋಗುತ್ತೇನೆ. ನೀನು ರಾಯನ ಸಂಗಡ ಮಾತನಾಡಬೇಡ. ರಾಯನು ಹೇಳಿದುದಕ್ಕೆ ನೀನು ಸಂಜ್ಞೆಮಾಡಿ ಉತ್ತರಕೊಡು ಎಂದು ಹೇಳ ಲಾಗಿ; ಆ ಕುಲುಬನು-ಒಳ್ಳೇದು ಎಂದು ಎನ್ನಲಾಗಿ; ಅವನ ರಾಯನ ಬಳಿ ಗೆ ಕರೆತಂದು ತೋರಲಾಗಿ ; ರಾಯನು-ಇವನಾರೆಂದು ಕೇಳಲಾಗಿ ; ವರ ರುಚಿಯು-ನಮ್ಮ ಗುರುಪುತ್ರನೆಂದು ಹೇಳಿದುದಕ್ಕೆ, ರಾಯನು ಮತ್ಯಾದೆಯು