ಪುಟ:ನಿರ್ಯಾಣಮಹೋತ್ಸವ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಆತನು ಶ್ರೀ ಗುರುವಿನ ಬಳಿಗೆ ಹೋದಾಗ ಆತನ ಹತ್ತಿರ ಕುಳಿತು ತನ್ನ ಈ ಶಂಕ ಯನ್ನು ಕುರಿತು ಆಲೋಚಿಸತೊಡಗುವನು. ಹೀಗಿರುವಾಗ ಲೇಖಕನು ಹಿಂದ ಕೊಮ್ಮೆ ಶ್ರೀ ಗುರುವಿನಮುಂದೆ-ಭ ಹೈರ ಕರ್ಮಗಳು ದೇವರಿಗಾ, ಶಿಷ್ಯರ ಕರ್ಮಗಳು ಗುರುಗಳಿಗೂ, ಲೋಕದ ಕರ್ಮಗಳು ಲೋಕೋದ್ದಾರಕಂಗ ಪ್ರಾರಬ್ದ ರೂಪದಿಂದ ಪರಿಣಮಿಸುತ್ತಿರಬಹುದೆಂದು ನುಡಿದದ್ದಕ್ಕೆ ಶ್ರೀ ಗುರುವು ಒಪ್ಪಿಕೊ೦ಡದ ಪಕ್ಕನೆ ನೆನಪಾಯಿತು. ಆಗ ಲೇಖಕನಿಗೆ ಸಮಾಧಾನವಾ ದ೦ತಾಗಿ, ಆತನು ಸದ್ದು ರುವಿನ ರೋಗಾನುಭವದ ಉಪಪತ್ತಿಯನ್ನು ಕುರಿತು ಶೋಧಿಸಹತ್ತಿದನು, ಆಗ ಆತನಿಗೆ ಸಮರ್ಪಕವಾದ ಹಲವು ಉದಾಹರಿಣಗಳು ನೆನಪಾಗಿ ಶ್ರೀ ಗುರುವಿನ ರೋಗಾನುಭವದ ಒಂದೊಂದೇ ಕಾರಣಗಳು ಆತನ ಮನಸ್ಸಿಗೆ ಹಾಳೆಯಹತ್ತಿದವು. ಸಂಸಾರದಲ್ಲಿ ಯಾದರೂ ಒಬ್ಬರ ಕರ್ಮಗಳು ಇನ್ನೊಬ್ಬರಿಗೆ ಬಾಧಿಸುತ್ತಿವೆಂಬದನ್ನು ಸುಲಭವಾಗಿ ದನಗಾಣಬಹುದು. ಧರ್ಮರಾಜನು ಯಕ್ಷನನ್ನು ಕುರಿತು-14 ಸದಾ ದುಃಖಿಯು ಯಾರು” ಎಂದು ಪ್ರಶ್ನೆ ಮೂಡಿದಾಗ ಯಾವನ ಕುಟುಂಬವು ದೊಡ್ಡ ದೋ ಅವನು' ಎಂದು ! ಯಕ್ಷನು ಕಾಟ್ಟ ಉತ್ತರವು ವಿಚಾರಮೂಡತಕ್ಕದ್ದಾಗಿದೆ, ದೊಡ್ಡ ಕುಟುಂಬದ ವನು ಹಲವು ಜನರಿಗೆ ಸಂಬಂಧಪಟ್ಟ ವನಾದ್ದರಿಂದ, ಆ ಸಂಬಂಧಿಕರೊಡನೆ ಅವ ರೆಲ್ಲರ ಕರ್ಮದ ಸಂಬಂಧವೂ ಅವನಿಗಾಗಿ ಆತನು ಅವರವರ ಕರ್ಮಗಳ ಫಲ ಗಳನ್ನು ಭೋಗಿಸಬೇಕಾಗುವದು , ನಯ-ಭಯಗಳಿಲ್ಲದೆ ಮನಬಂದಂತೆ ನಡೆ ಯುವ ಹೆಂಡಿರು ಮಕ್ಕಳು-ಬಂಧುಬಳಗದವರ ಉಳ್ಳ ಕುಟುಂಬದ ಯಜಮ್ರನನಿಗೆ ಈ ಮಾತಿನ ಅನುಭವವು ಚೆನ್ನಾಗಿ ಬರಬಹುದಾಗಿ ತೋರತ್ತದೆ. ನಿನ್ನ ಕಾಲಲ್ಲಿ" ಇಷ್ಟೆಲ್ಲ ಭೋಗಿಸಬೇಕಾಯಿತು,” ಎಂಬ ಅಕ್ಕಸದ ನುಡಿಯು, ಸಾಂಸಾರಿಕರಂದ ನಮ್ಮಲ್ಲಿ ಬಹುರೂಢವಾಗಿರುವದು ಇದಕ್ಕೆ ಸಾಕ್ಷಿಯಾಗಿರುತ್ತದೆ. - ಈ ಮೇರೆಗೆ ಸಂಸಾರದಲ್ಲಿ ಕುಟುಂಬದವರ ಕರ್ಮಗಳೂ, ಸಮಾಜದವರ ಕರ್ವಗಳೂ, ದೇಶದವರ ಕರ್ಮಗಳೂ ಹೆಚ್ಚು ಕಡಿಮೆ ಪ್ರಮಾಣದಿಂದ ಪರಸ್ಪರ ಬಾಧಿ ಸುವಂತೆ, ಭಕ್ತರ, ಹಾಗು ಲೋಕದ ಕರ್ವುಗಳು ದೇವರನ್ನೂ , ಶಿಷ್ಯರ ಹಾಗು ಲೋಕದ ಕರ್ಮಗಳು ಲೋಕೋದ್ದಾರಕ ಗುರುಗಳನ್ನೂ ಬಾಧಿಸುತ್ತವೆ. ಯಾದವರ ಉದ್ದ ಕತನದಿಂದ ಒಬ್ಬ ಸತ್ಪುರುಷನು ಅವರಿಗೆ--ನಿಮ್ಮ ವಂಶ ಕ್ಷಯವಾಗಲೆಂದು ಶಾಸಕೊಡಲು, ನಿರಪರಾಧಿಯಾದ ಶ್ರೀ ಕೃಷ್ಣನು ಅವತಾರಿ ಕನಾದರೂ ಗಿಡದ ಬುಡದಲ್ಲಿ ಬಿದ್ದು ಬಾಣ ತಾಕಿ ಪ್ರಾಣಬಿಡಬೇಕಾಯಿತು !