ಪುಟ:ನಿರ್ಯಾಣಮಹೋತ್ಸವ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ವದ. ಜನರಲ್ಲಿ ಆಗಹತ್ತಿತು, ಭಗವಾನರೆಂದು ಕರೆಯದಿದ್ದರೆ, ಯುಗಧರ್ವುದಂತ ಶಿಷ್ಯರ ಮನಸ್ಸು ನೋಯುತ್ತಿತ್ತೋ ಹ್ಯಾಗೋ ಯಾರಿಗೆ! ಈ ದ್ಯಾಪ ರಯುಗದಲ್ಲಿ ಶ್ರೀಗುರುಸ್ಥಾನದಲ್ಲಿ ನಿಂತ ಶಿಷ್ಯರ ಹೆಸರು ಲಿಂಗಾಭಗವಾನರು, ತಿಪ್ಪಾಪುರಕ್ಕೆ ಹೋದವರು ಶಂಕರಭಗವಾನರು, ಸಾಗರಕ್ಕೆ ಹೋದವರು ನಾರಾಯಣಭಗವಾನರು, ಗು ಭ, ಲಿಂಗಭಗವಾನರೊಬ್ಬರೇ ಸೇವೆದಡ ಹತ್ತಿದ್ದರಿಂದ ಶ್ರೀಗುರುವು ತನ್ನ ದೃಷ್ಟಿಯನ್ನು ಅವರಲ್ಲಿ ವಿಶೇಷವಾಗಿ ಇಡಬೇ ಕಾಯಿತು ಶ್ರೀ ಗುರ.ವಿನ ಈ ಕೃಪಾದೃಷ್ಟಿಯ ಪ್ರಭಾವದಿಂದ ಗು. ಭ, ಲಿಂ ಗಭಗವಾನರ ಯೋಗ್ಯತೆಯು ಹೆಚ್ಚಿತು. ದಾಡ್ಡ ದೊಡ್ಡ ವಿದ್ವಾಂಸರು ಅವರ ಜ್ಞಾನಕ್ಕೂ, ಸದ್ಯಕ್ತಿಗೂ, ಗುರುಭಕ್ತಿಗೂ, ನಿಸ್ಪೃಹತೆಗೂ ತಲೆದೂಗ ಹತ್ತಿದರು. ಲಿಂಗೋಭಗವಾನರು ಸ್ವತಃ ಸಂಚಾರವೂಡಿ ಸೇವೆಯನ್ನು ಧುರಂ ಧರರಾಗಿ ಸಾಗಿಸಹತ್ತಿದರು, ಅವರು ಕೇವಲ ತಪಸ್ವಿ ಗಳಾಗಿ ಕಾಲಹರಣ ಮಾಡಿದರಂತೆ, ಗಟ್ಟ ದೋತರ ಉಡಲಿಲ್ಲವಂತೆ, ಸವಿಯುಣಿ ಸುಗಳನ್ನು ಉಣ್ಣಲಿ ಲ್ಲವಂತೆ ಗಾದಿಯ ಮೇಲೆ ಮಲಗಲಿಲ್ಲವಂತೆ, ಕಡೆತನಕ ದೇಹದಂಡನದ ಸೇವೆ ಯನ್ನು ಬಿಡಲಿಲ್ಲವಂತೆ, ಶ್ರೀಗುರುವಿನ ಸೇವೆಯಲ್ಲಿ ಕಡೆತನಕ ದೇಹವನ್ನು ಸವಿ ಸಿದವರಲ್ಲಿ ಶ್ರೀ ಲಿಂಗಭಗವಾನರು ಅಗ್ರಗಣ್ಯರೆಂದು ಹೇಳಲಿಕ್ಕೆ ಬಾಧೆಯಿಲ್ಲ. ಆವರು ದೇಹದವಿಷಯವಾಗಿದುರ್ಲಕ್ಷಮೂಡಿ ದೇಹದಂಡನಮಂಡಿದ್ದರಿಂದ, ಅವರಿಗೆ ಹೊಟ್ಟಿ ಶಾಲೆಯ ಬಾಧೆಯು ಉತ್ಪನ್ನ ವಾಯಿತು, ಶ್ರೀ ಗುರುಗಳಂತೆ ಈ ಭಗವಾನರ, ಪ್ರೇಯಿ ಸ್ಕರಾಚರಣೆಯವರಲ್ಲ; ಆವ್ವ ನವರಂತೆ ಶ್ರೇಯಸ್ಕರಾಚರಣೆಯವರು, ಇವರ ಸೇವಾಪದ್ದತಿಯು ಬಹುಕಠಿಣವಾದದ್ದು, ಸ್ವತಃ ಮೈ ಮುರಿದು ನಿರಭಿಮನದಿಂದ ದುಡಿಯುವವರಾದ್ದರಿಂದ, ಅವರ ಕೈ ಕೆಳಗೆ ಜನರು ಪೂರಯಿಸುವದು ಕಠಿಣವಾಗಿತ್ತು. ಒಂದು ಬಗೆಯಾಗಿ ಲಿಂಗಭಗವಾನರನ್ನು ಆವ್ವನವರ ೧ನೇ ನಂಬರಿನ ಪಟ್ಟ ಶಿಷ್ಯರೆಂದು ಕರೆಯಬಹುದು. ಈ ಭಗವಾನರವೆ.ಲೆಯ, ಆವರ ಸಾಧಿಯಾದ ಕುಟುಂಬದ ಮೇಲೆಯ ಆವ್ಯ ನವರ ಪ್ರೇಮ ಬಹಳ, ಲಿಂಗಭಗವಾನರು ಮಹಾನಿಸ್ಸಹಿಗಳು, ಅಥಿತಿಗಳಾಗಿ ಮನೆಗೆ ಬಂದ ಜನರನ್ನು ಮೊದಲನೆಯ ದಿವಸ ದೇವರೆಂತಲೂ, ಎರಡನೆಯದಿವಸ ಬೀಗರಂತಲ ಭಾವಿಸಿ ನಡಿಸಿಕೊಂ ಡು, ಮೂರನೆಯದಿವಸ ಮನೆಯವರೆಂದು ತಿಳಿದು, ಅವರನ್ನು ಕೆಲಸಕ್ಕೆ ಜಗ್ಗುತ್ತಿ ದ್ದರುಹೀಗಾಗಿ ನಿರುದ್ಯೋಗಿಗಳ ಸಂಖ್ಯೆಯು ಶ್ರೀ ಗುರುಸನ್ನಿಧಿಯಲ್ಲಿ ಅಗ ಹೆಚ ಲಿಲ್ಲ ಇದಕ್ಕೆ ಅಂಗೋಭಗವಾನರ ಪ್ರಖರವಾದ ವರ್ಚಸ್ಸೇ ಕಾರಣವು.