ಪುಟ:ಯಶೋಧರ ಚರಿತೆ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೯೩

ಮನಮಿರೆ ಪುರ್ವಿನ ಮೊದಲೊಳ್
ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್
ಕುನಿದಿರೆ ಪದ್ಮಾಸನದೊಳ್
ತನುವಿರೆ ಯೋಗೀಂದ್ರ ನಾತ್ಮ ಚಿಂತೆಯೊಳಿರ್ದಂ೧೩


ಎರಗಿದನಾತಂ ಗೌರವ
ಮರೆಮದೆಯು ದೀಪವರ್ತಿ ನಿಧಿಗಾಣ್ಬುದುಮೊ-
ಲ್ದೆರಗುವ ತೆರದಿಂ ಮುನಿ ಕ-
ಣ್ದೆಱೆದೊಯ್ಯನೆ ನೋಡಿ ಪರಸೆ ಬರೆಕಿಂತೆಂದಂ೧೪


ಎಲೆ ದೇವರೆ ಪುತ್ತುಂ ಬ-
ತ್ತಲೆಯುಂ ಬರೆದಿಲ್ಲದೆಂಬರದು ಕಾರಣದಿಂ
ನೆಲೆಯಾಂದೆಗನಚ್ಚಿಯವೋ-
ಲೆಲೆಮಿಡುಕದೆ ನೆನೆಯುತಿರ್ದಿರೇನಂ ಮನದೊಳ್೧೫



ಕೇಂದ್ರೀಕರಿಸಿ ಹುಬ್ಬುಗಳ ನಡುವೆ ನಿಲ್ಲಸಿದ್ದರು. ಆ ಮನಸ್ಸಿನಲ್ಲಿ ವಾಯುಗಳನ್ನು
ನಿಲ್ಲಿಸಿದ್ದರು. ಆ ವಾಯುವಿನಲ್ಲಿ ಇಂದ್ರಿಯಗಳನ್ನೆಲ್ಲ ನಿಲ್ಲಿಸಿದ್ದರು. ಅವರು ಪದ್ಮಾಸನ
ಹಾಕಿ ಆತ್ಮಾನುಸಂಧಾನದಲ್ಲಿ ಮಗ್ನರಾಗಿದ್ದ ಯೋಗಿವರ್ಯರಾಗಿದ್ದರು.೧೪.
ಗೌರವವೆಂದರೇನೆಂದರಿಯದಿದ್ದರೂ ಚಂಡಕರ್ಮನು ತನ್ನಿಂದ ತಾನೇ ಅವರೆದುರು
ತಲೆಬಾಗಿಸಿದನು. ನಿಧಿಯನ್ನು ಕಂಡ ಕೂಡಲೆ ದೀಪದ ಕುಡಿ ಆಕಡೆ
ಬಾಗಿಕೊಳ್ಳುವುದಷ್ಟೆ! ಚಂಡಕರ್ಮನು ನಮಸ್ಕರಿಸಿದ ಹೊತ್ತಿಗೆ ಆ ಮುನಿಗಳು
ಕಣ್ಣುತೆರೆದರು! ಮಣಿದವನನ್ನು ನೋಡಿ ಹರಸಿದರು. ಚಂಡಕರ್ಮನು
ಮಾತಿಗುಪಕ್ರಮಿಸಿದನು. ೧೫. "ದೇವರೇ, ಹುತ್ತವೂ ಬತ್ತಲೆಯೂ ಬರಿದಲ್ಲ೫೬
ಎನ್ನುತ್ತಾರೆ. ಆದ ಕಾರಣ ನೀವು ಒಂದು ಕಡೆ ಕುಳಿತ ಗೂಗೆಯ ನಿಶ್ಚಲವಾದ
ಕಣ್ಣುಗಳಂತೆ ಒಂದಿಷ್ಟೂ ಅಲುಗಾಡದೆ ಕುಳಿತುಕೊಂಡು ಮನಸ್ಸಿನಲ್ಲಿ ಏನೇನೋ