ಪುಟ:ಇಂದ್ರವಜ್ರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ದೂರ ತೆಗೆದುಕೊಂಡುಹೋಗಿ ಫಲವತ್ತಾದ ಭೂಮಿ ಯಲ್ಲಿ ಅದನ್ನು ಆಳವಾಗಿ ಹೂ೪, ಅದರಮೇಲೆ ಎತ್ತರ ವಾಗಿ ಮಣ್ಣು ಗುಡ್ಡೆ ಮಾಡಿ, ಆನೆಲದಲ್ಲೆಲ್ಲಾ ಗೋಧಿ, ಕಡಲೆಮುಂತಾದ ಧಾನ್ಯಗಳನ್ನು ಬಿತ್ತಿಸಿ, ಅದನ್ನು ಒಬ್ಬ ಬಡಬ್ರಾಹ್ಮಣನಿಗೆ ದಾನವಾಗಿ ಕೊಟ್ಟು ಬಿಟ್ಟರು.

  • * ಕಾಲಚಕವು ಯಥಾಪ್ರಕಾರ ನಡೆಯಿತು. ವಿಕ ಮನ ರಾಜ್ಯವಾದ ಮಾಳವವು ಜೀಣಿಸಲಾರಂಭಿಸಿತು. ಭೂದಾನವನ್ನು ಪಡೆದ ಆಬ್ರಾಹ್ಮಣನೂ ಕಾಲವಶನಾ ದನ, ಅವನ ಮಕ್ಕಳು ಮುಮ್ಮಕ್ಕಳು ಆ ಭೂಮಿ ಯನ್ನನು ಭವಿಸುತ್ತ ಬಂದರು. ಸಿಂಹಾಸನವಿದ್ದ ಎತ್ತ ರವಾದೆಡೆಯಲ್ಲಿ ಬಿದಿರ ಅಟ್ಟಣಿಗೆಯೊಂದು ಏರ್ಪಾಟಾ ಯಿತು. ಅದು ಉನ್ನತವಾಗಿದ್ದ ಕಾರಣ ಭೂಮಿಯ ಯಜಮಾನನು ಅದರಮೇಲೆ ಕುಳಿತು ಬೆಳೆಯನ್ನು ಕಾಯುತ್ತಿದ್ದನು.

ಅವನ ಭೂಮಿಯಲ್ಲಿ ಬೆಳೆಯು ಯಾವಾಗಲೂ ಹುಲುಸಾಗಿರುವುದು, ಅವನು ಮನೆಯಲ್ಲಿಯ, ಬೀ ದಿಯಲ್ಲಿಯೇ ಇದ್ದಾಗ ಇತರರಂತೆ ಕೋಪವುಳ್ಳವನಾ ಗಿರುವನು, ಪಕ್ಷಪಾತವುಳ್ಳವನಾಗಿರುವನು, ಲೋಭಿ ಯಾಗಿರುವನು; ಆದರೆ ತನ್ನ ಭೂಮಿಗೆ ಬಂದು ಅಟ್ಟಣೆ ಯನ್ನೇರಿದಕೂಡಲೆ ಅವನ ನಡತೆಯೆಲ್ಲವೂ ಮಾರ್ಷ-ತು ವುದು, ಅವನ ಮನಸ್ಸು ಶಾಂತವಾಗುವುದು, ಅವನ ಮಾ ತುಗಳು ಮೃದುವಾಗುವುವು, ಅವನ ಎದೆಯ ದಯೆ