ಪುಟ:ಯಶೋಧರ ಚರಿತೆ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೪೧

ಕವಚಹರನಾದ ತನಯನೊ
ಭವನೀಭರಮೆಂಬ ಕನಕಮಣಿಮಂಡನ ಭಾ
ರವಳುಪಿ ನೀಡುವವೋಲಾ
ಡುವನಂಗಜರಾಗ ಶರಧಿಯೊಳಗೆ ಯಶೌಘಂ ೧0

ಅಗುಳ್ದಡಪುವ ಕಾಲದ ಗರ
ಟಗೆಯೊಳ್ ನೃಪಚಿತ್ತಚೋರನಂ ತೋರುವ ದೀ
ವಿಗೆಯೆನೆ ಸಂಮುಖಮಾಯ್ತೋ
ಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ ೧೧

ನರೆಯೆಂಬ ಹೊರಸು ಮೊಗಮೆಂ
ಬರಮನೆಯಂ ಪೊಕ್ಕೊಡಂಗನಾಲೋಕನಮೆಂ
ಬರಸೆಂತಿರ್ದಪನೆಂದಾ
ನರನಾಥಂ ಸತೊರೆದನಖಿಳವಿಷಯಾಮಿಷಮಂ ೧೨



೧೦. ಕವಚವನ್ನು ಧರಿಸಿಕೊಂಡು ಮುಂದಾಗುವ ವಯಸ್ಸು ಮಗನಿಗೆ ಬಂದುದನ್ನು
ಕಂಡ ಯಶೌಘನು ರಾಜ್ಯಭಾರತಿಯ ಬಂಗಾರದ ರತ್ನಾಭರಣವನ್ನು ಅವನ
ಮೇಲೆ ಹೊರಿಸಿ ತಾನು ಮನ್ಮಥಾನುರಾಗದ ಕಡಲಲ್ಲಿ ಓಲಾಡುವುದಕ್ಕೆ ಅವಕಾಶ
ಮಾಡಿಕೊಂಡನು. ೧೧. ಕಳ್ಳನು ಕನ್ನವನ್ನು ಕೊರೆದು ಸಿಕ್ಕಿಬೀಳುವ ಸಂಧರ್ಭವು
ಬಂದಿತು; ಆಗ ಅವನನ್ನು ಅನಿರೀಕ್ಷಿತವಾಗಿ ಕಾಣಿಸಿಕೊಡುವುದು ಒಂದು ಸಣ್ಣ
ದೀಪದ ಬೆಳಕು, ಶೃಂಗಾರ ರಸಮಗ್ನನಾಗಿ ತಪ್ಪು ದಾರಿ ಹಿಡಿದಿದ್ದ ಯಶೌಘನೂ
ಸರಿದಾರಿಗೆ ಬರುವ ಸುಸಂದರ್ಭವು ತನ್ನಿಂದ ತಾನೇ ಬಂದಂತೆ, ಒಂದು ದಿನ
ಅವನು ರಾಜಸಭೆಯಲ್ಲಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿದಾಗ, ತನ್ನ
ಕೂದಲು ನರೆತುದು ಕಾಣಿಸಿತು. ೧೨. ವಿಚಾರದ ಬೆಳಕಿನಲ್ಲಿ ಅವನು
ಬೇರೊಂದನ್ನೇ ಕಂಡನು. “ಅರಮನೆಯಂತಿರುವ ತನ್ನ ಮುಖದೊಳಕ್ಕೆ ನರೆಯೆಂಬ
ಕಾಡು ಪಾರಿವಾಳವು ಹೊಕ್ಕು ಅಮಂಗಲವನ್ನುಂಟುಮಾಡಿದೆ. ಈ ಅರಮನೆಯಲ್ಲಿ
ಕಾಮಿನೀದರ್ಶನ ಎಂಬ ಅರಸನು ಉಳಿಯುವುದಾದರೂ ಹೇಗೆ?” ಈ ಯೋಚನೆ
ಬಂದ ಒಡನೆ ಯಶೌಘನು ಎಲ್ಲ ಇಂದ್ರಯಾಕರ್ಷಣೆಗಳನ್ನೂ ಪರಿತ್ಯಾಗ