ಪುಟ:Mysore-University-Encyclopaedia-Vol-1-Part-1.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕಿಗಳು(ಇತಿಹಾಸ)

ಪ್ರಪಂಚದ ಆದ್ಯಂತವೂ ಈಗ ದಾಶಮಿಕಸಂಖ್ಯಾಕ್ರಮದಲ್ಲಿ ಎಲ್ಲ ಸಂಖ್ಯೆಗಳನ್ನೂ ಬರೆಯುವುದು ರೂಢಿಯಲ್ಲಿದೆ.ಗಣಿತದ ಪರಿಕರ್ಮಗಳಿಗೆ ಸಹಾಯಕವಾಗಿದ್ದು ಅತಿಸುಲಭವಾಗಿರುವುದೇ ಇದರ ಶ್ರೇಷ್ಠತೆಗೆ ಕಾರಣ.ಈ ಕ್ರಮದಲ್ಲಿ ಒಂದು,ಎರಡು ಮುಂತಾಗಿ ಒಂಬತ್ತರವರೆಗಿರುವ ಸಂಖ್ಯೆಗಳಿಗೆ ಆಯಾ ಭಾಷಾಲಿಪಿಯಂತೆ ಚಿಹ್ನೆಗಳನ್ನು ಕೊಟ್ಟು,ಯಾವ ಸಂಖ್ಯೆಯೂ ಇಲ್ಲಿ ಎಂಬ ಶೂನ್ಯಭಾವನೆಗೂ ಒಂದು ಚಿಹ್ನೆಯನ್ನು ಕೊಟ್ಟು ಅದನ್ನು ಸೊನ್ನೆ ಎಂದು ಕರೆಯುತ್ತಾರೆ.ಈ ಹತ್ತು ಚಿಹ್ನೆಗಳಿಗೆ ಸ್ಥಾನಾನುಗುಣವಾಗಿ ಹತ್ತರ ಗುಣಕಗಳಲ್ಲಿ ಬೆಲೆಗಳನ್ನು ಕೊಟ್ಟು ಯಾವುದೇ ಸಂಖ್ಯೆಯನ್ನಾದರೂ ಈ ಚಿಹ್ನೆಗಳಿಂದ ಸಂಶಯರಹಿತವಾದ ರೀತಿಯಲ್ಲಿ ಬರೆಯಬಹುದೆಂಬುದೇ ದಾಶಮಿಕಕ್ರಮದ ಸ್ವರೂಪ.ಇವುಗಳ ಪೈಕಿ ಒಂದರಿಂದ ಒಂಬತ್ತರವರೆಗಿನ ಅಂಕಗಳು ಮೊದಲು ಚಾರಿಗೆ ಬಂದುವು ಎಂದೂ,ಸೊನ್ನೆಯ ಭಾವನೆಯೂ ಅದರ ಚಿಹ್ನೆಯ ಉಪಯೋಗಗಳೂ ತಡವಾಗಿ ಹುಟ್ಟಿದವು ಎಂದೂ,ಪಾಶ್ಚಾತ್ಯರವಾದ.ದಾಶಮಿಕ ಸಂಖ್ಯಾಕ್ರಮದ ಸೃಷ್ಟಿಯು ೪ನೆಯ ಶತಮಾನದ ವೇಳೆಗೆ ಆರಂಭವಗಿರಬಹುದೆಂದು ಹೇಳುತ್ತಾರೆ.ಭಾರತೀಯ ಇತಿಹಾಸ ಪುರಾಣಾದಿಗಳನ್ನು ಓದಿ ನಂಬುವವರಿಗೂ ಭರತದ ನಾಗರಿಕತೆ ಎಷ್ಟರಮಟ್ಟಿಗೆ ಇದ್ದಿರಬೇಕು ಎಂದು ಈ ಗ್ರಂಥಗಳಿಂದ ವಿಮರ್ಶಿಸುವವರಿಗೂ ಮೇಲಿನ ಹೇಳಿಕೆಯನ್ನು ಸ್ವೀಕರಿಸುವುದು ಸಾಧ್ಯವಾಗದು.

ಅರೇಬಿಯ ದೇಶದ ಚರಿತ್ರಕಾರರಲ್ಲಿ ಒಬ್ಬನಾದ ಅಬುಲ್ ಹಸನ್ ಆಲ್ ಮಸೂದಿ ಭಾರತದಲ್ಲೆಲ್ಲಾ ಸಂಚಾರಮಾಡಿ ತನ್ನ ಗ್ರಂಥದಲ್ಲಿ (ಪ್ರಶ.೯೪೩) ಈ ರೀತಿ ಬರೆದ್ದಿಟ್ಟಿರುವನು:ಸೃಷ್ಟಿಕರ್ತ ಬ್ರಹ್ಮನ ಆಜ಼ೆಯಂತೆ ಋಷಿಗಳ ಸಮ್ಮೇಳನವೊಂದು ಒಂಬತ್ತು ಅಂಕಿಗಳನ್ನು ಹಿಂದೂಗಳ ಖಗೋಳಶಾಸ್ತ್ರವನ್ನು ಹಾಗೂ ಇತರ ಶಾಸ್ತ್ರಗಳನ್ನು ಸೃಷ್ಟಿಸಿತು ಭಾರತದ ಆತ್ಯಂತ ಪ್ರಾಚೀನಗ್ರಂಥಗಳಲ್ಲೊಂದಾದ ಯಜೂರ್ವೇದಸಂಹಿತೆ(ವಾಜಸನೇಯಿ)ಯಲ್ಲಿ ಕೆಳಕಂಡ ಸಂಖ್ಯೆಗಳ ಪಟ್ಟಿ ದೊರಕುತ್ತದೆ.ಏಕ,ದಶ,ಶತ,ಸಹಸ್ರ,ಅಯುತ,ನಿಯುತ,ಪ್ರಯುತ,ಅರ್ಬುದ,ನ್ಯರ್ಬುದ,ಸಮುದ್ರ,ಮಧ್ಯ,ಅಂತ,ಪರಾರ್ದ.ಪ್ರತಿಸಂಖ್ಯೆಯು ಹಿಂದಿಣ ಸಂಖ್ಯೆಯ ಹತ್ತರಷ್ಟು.ತೈತ್ತಿರೀಯ ಸಂಹಿತೆಯಲ್ಲೂ ಇದೇ ಪಟ್ಟಿಯಿದೆ.ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಇತರ ವೇದಭಾಗಗಳಲ್ಲಿ ಇದೇ ಪಟ್ಟಿಯಿದ್ದು ಮುಂದುವರಿಸಲ್ಪಟ್ಟಿದೆ.ದಶಗುಣೋತ್ತರಸಂಜ಼ಾ ಎಂಬ ಹೆಸರು ಈ ಪಟ್ಟಿಗೆ ಸಮಂಜಸವಾಗಿಯೇ ಇದೇ.

ರಾಮಾಯಣದಲ್ಲಿ ಬಹು ದೊಡ್ಡ ಸಂಖ್ಯೆಗಳು ನಿರೂಪಿತವಾಗಿವೆ.ರಾವಣನ ಕಡೆಯ ಚಾರನೊಬ್ಬ ಕಪಿಸೈನ್ಯದ ಸಂಖ್ಯೆಯನ್ನು ವಿವರಿಸುತ್ತ,ಆ ಸಂಖ್ಯಾಕ್ರಮವನ್ನು ತಿಳಿಸುತ್ತಾನೆ.ಲಕ್ಷ,ಕೋಟಿ,ಶಂಖ, ಮಹಾಶಂಖ ಮುಂತಾಗಿ ಸಂಖ್ಯಾಕ್ರಮವು ಮಹೌಘದವರೆಗೂ ಹೋಗಿದೆ.ಮಧ್ಯೆ ಮಧ್ಯೆ ಬರುವ ಎಲ್ಲ ಸಂಖ್ಯೆಗಳನ್ನೂ ಇಲ್ಲಿ ಹೇಳಿಲ್ಲ.ಆಧುನಿಕ ಸಂಕೇತದಲ್ಲಿ ಒಂದು ಮಹೌಘ= (ಒಂದರ ಮುಂದೆ ೫೫ ಸೊನ್ನೆಗಳು).ಕಪಿಸೈನ್ಯದ ಸಂಖ್ಯೆ ೧೬ ಕ್ಕೆ ಮೇಲ್ಪಟ್ಟು.ಈ ದೊಡ್ಡ ಸಂಖ್ಯೆಗಳಲ್ಲದೆ,ರಾಮಾಯಣದಲ್ಲಿ ಹನ್ನೆರಡು.ಹದಿನಾಲ್ಕು,ಹದಿನಾರು,ಮೂವತ್ತು, ನಲವತ್ತು,ನೂರು,ಮುನ್ನೂರೈವತ್ತು ಮುಂತಾದ ಸಂಖ್ಯೆಗಳು ಹೇರಳವಾಗಿ ಬರುತ್ತವೆ.

ವೇದಗಳಲ್ಲಿಯೂ ರಾಮಾಯಣದಲ್ಲಿಯೂ ಕಾಣಬರುವ ದಾಶಮಿಕ ಸಂಖ್ಯಾಕ್ರಮದ ಸ್ಪಷ್ಟ ತಿಳಿವಳಿಕೆಗೆ ಇಷ್ಟು ನಿದರ್ಶನ ಸಾಕು.ಹೀಗಿರುವಾಗ ೪ನೆಯ ಶತಮಾನದವರೆಗೆ ಈ ಕ್ರಮವು ಇರಲಿಲ್ಲ.ಸೊನ್ನೆಯೆಂಬುದು ಇನ್ನೂ ತಡವಾಗಿ ಬಂದಿತು ಎಂಬ ಚರಿತ್ರೆಯ ಉಲ್ಲೇಖವನ್ನು ನಂಬುವುದು ಸುಲಭವಲ್ಲ.

ವೇದಗಳಲ್ಲಿ ತಿಳಿಸಲ್ಪಟ್ಟಿರುವ ಯಜ಼ಯಾಗಾದಿ ವಿಧಾನಗಳಿಗೆ ಅಗ್ನಿವೇದಿಕೆಗಳನ್ನು ಖಚಿತವಾದ ರೂಪ ಅಳತೆಗಳಿಗೆ ಸರಿಯಾಗಿ ನಿರ್ಮಿಸಬೇಕಾಗಿತ್ತು.ಈ ರಚನಾ ಕ್ರಮಗಳು ಶುಲ್ವಸೂತ್ರಗಳೆಂಬ ಗ್ರಂಥದಲ್ಲಿ ಉಕ್ತವಾಗಿವೆ.ಇದರಲ್ಲಿ ಕಂಡುಬರುವ ಗಣಿತದ ಮಟ್ಟವೂ ಸ್ವರೂಪವೂ ಆಶ್ಚರ್ಯಕರವಾಗಿದೆ.೨ರ ವರ್ಗಮೂಲವನ್ನು ಪಡೆಯಲು,ಬೋಧಾಯನ ಆಪಸ್ತಂಬ ಕಾತ್ಯಾಯನ ಶುಲ್ಪಸೂತ್ರಗಲಲ್ಲಿ ಕೆಳಗಿನ ಸೂತ್ರವನ್ನು ತಿಳಿಸಲಾಗಿದೆ.

ಸಮಸ್ಯ ದ್ವಿಕರಣೆ ಪ್ರಮಾಣಂ ತೃತೀಯೇನ ವರ್ಧಯೇತ್ ತಚ್ಚತುರ್ಥೇನಾತ ಚತುಸ್ತ್ರಿಂಶೋನೇನ ಸವಿಶೇಷತಂ(ಆಪಸ್ತಂಬ).ಆಧುನಿಕ ಭಷೆಯಲ್ಲಿ,

೨=೧+೧/೩+೧/೩:೪ ೧/೩:೪:೩೪

ಇದು ಹೇಗೆ ಬಂತು, ವರ್ಗಮೂಲದ ಭಾವನೆ ಆಗ ಇತ್ತೆ, ಇದು ಸನ್ನಿಹಿತ ಬೆಲೆ(ಅಪ್ರಾಕ್ಸಿಮೇಟ್ ವ್ಯಾಲ್ಯು)ಮಾತ್ರ ಅಲ್ಲವೆ-ಎಂಬ ವಿಚಾರ ಈಗ ಬೇಡ.ಮೂರು ನಾಲ್ಕು ಮೂವತ್ತನಾಲ್ಕು ಎಂಬ ಸಂಖ್ಯೆಗಳನ್ನೂ ಊನ ಕಳೆಯುವಿಕೆ ಎಂಬ ಪರಿಕರ್ಮವನ್ನು ಗಮನಿಸಿದರೆ ಸಾಕು. shuಲ್ವಸೂತ್ರಗಳ ಕಾಲ ಪ್ರ.ಶ.ಪೂ.೮೦೦.ಈ ಸಮಯದಲ್ಲಿ ದಾಶಮಿಕ ಸಂಖ್ಯಾಕ್ರಮವೂ ಭಿನ್ನರಾಶಿಗಳೂ ಅವುಗಳ ಸಂಕಲನ ವ್ಯವಕಲನವೂ ಇದ್ದುವು.

ಅಶ್ವಮೇಧಿಕೇ ವೇದಿಕೆಯು ತ್ರಾಪಿಜ್ಯದ ಅಕೃತಿಯಲ್ಲಿ , ಪ್ರಕ್ರಮಗಳಷ್ಟು ಶಿರ, ಪಾದಗಳನ್ನು ೨ಲಂಬವನ್ನೂ ಹೊಂದಿತ್ತು.ಕ್ಷೇತ್ರಫಲವನ್ನು ೧೯೯೪ ಪ್ರಕ್ರಮಗಳು(ಚದರ)ಎಂದು ಸರಿಯಾಗಿ ಕೊಟ್ಟಿದೆ.ಇದಕ್ಕೆ ಕ್ಷೇತ್ರಫಲದ ಸೂತ್ರವೂ ಸಂಕಲನ ಗುಣಾಕಾರಗಳೂ ಆವಶ್ಯಕ.

ಜೈನಧರ್ಮದಲ್ಲಿ ಗಣಿತಕ್ಕೆ ಹೆಚ್ಚು ಪ್ರಾಧಾನ್ಯವಿದ್ದು,ಅವರ ಧತ್ಮಗ್ರ್ಂಥಗಳ ಒಂದು ಭಾಗಕ್ಕೆ'ಗಣಿತಾನುಯೋಗ' ವೆಂದು ಹೆಸರು.ಆ ಧರ್ಮ ಗ್ರಂಥಗಳಲ್ಲಿ ಬಹು ಪುರಾತನವಾದ ಸೂರ್ಯಪ್ರಜ಼ಪ್ತಿ, ಜಂಬೂದ್ವೀಪಪ್ರಜ಼ಪ್ತಿ(ಪ್ರ.ಶ.ಪೂ ೫೦೦)ಎಂಬ ಗ್ರಂಥಗಳಂತೆ,ಭೂಮಿಯು ಲಕ್ಷಯೋಜನ ವ್ಯಾಸವುಳ್ಳ ಒಂದು ವೃತ.ಪೂರ್ವ ಪಶ್ಚಿಮವಾಗಿ ಹಬ್ಬಿರುವ ಆರು ಪರ್ವತ ಶ್ರೇಣಿಗಳು ವೃತ್ತವನ್ನು ಏಳಾಗಿ ವಿಭಾಗಿಸಿವೆ.ಭೂಮಿಯ ಪರಿಧಿ ಮೂರು ಲಕ್ಷ ಹದಿನಾರು ಸಾವಿರದ ಇನ್ನೂರ ಇಪ್ಪತೇಳು ಯೋಜನ,ಮೂರು ಗವ್ಯೂತಿ,ನೂರಿಪ್ಪತ್ತೆಂಟು ಧನುಸ್ಸು,೧೩ ೧/೨ ಆಡಿಗಳಿಗಿಂತ ಸ್ವಲ್ಪ ಅಧಿಕ ಎಂದು ಈ ಗ್ರಂಥಗಳಲ್ಲಿ ತಿಳಿಸಿದ್ದಾರೆ.ವೃತದ ಪರಿಧಿ ( =ವ್ಯಸ)ಎಂಬ ಸೂತ್ರದಿಂದ = ೧೦ ಎಂದು ತೆಗೆದುಕೊಂದು ಇದನ್ನು ಪಡೆದಿರಬೇಕು.ಇಲ್ಲಿ ಉಪಯೋಗಿಸಿರುವ ಕೋಷ್ವಕ: ೧ ಯೋಜನ = ೪ ಗವ್ಯೂತಿ , ೧ ಗವ್ಯೂತಿ = ೨೦೦೦ ಧನುಸ್ಸು , ೧ ಧನು = ೧೦೦ ಅಂಗುಲ. ೧೦ರ ವರ್ಹಮೂಲವನ್ನು ೧೩ ದಶಮಾಂಶಸ್ಥಾನಗಳವರೆಗೂ ಸರಿಯಾಗಿ ಪಡೆದಿದ್ದರೆಂದು ಇದರಿಂದ ತಿಳಿಯಬಹುದಾಗಿದೆ.ವೃತ್ತಕ್ಕೆ ಸಂಬಂಧಿಸಿದ ಇತರ ಅನೇಕ ವಿಷಯಗಳೂ ಅಂಕಿಗಳೂ ಈ ಗ್ರಂಥಗಳಲ್ಲಿ ದೊರಕುತ್ತವೆ.ಜೈನಮತ ಹುಟ್ಟುವ ವೇಳೆಗೆ ಅಂಕಗಣಿತ,ರೇಖಾಗಣಿತಗಳು ಅಭಿವೃದ್ಧಿ ಸ್ಥಿತಿಯಲ್ಲಿದ್ದುವೆಂಬುದಕ್ಕೆ ಈ ದೃಷ್ಟಾಂತಗಳೇ ಸಾಕು,

ಸಾರಾಂಶ ಇಷ್ಟು:ದಾಶಮಿಕ ಸಂಖ್ಯಾಕ್ರಮವೂ ಅದರ ತಳಹದಿಯ ಮೇಲೆ ಬೆಳೆದು ಬಂದ ಅಂಕಗಣಿತವೂ ಬಹು ಹಿಂದಿನ ಕಾಲದಿಂದಳಲೇ ಭಾರತದಲ್ಲಿ ಕಂಡುಬರುತ್ತವೆ.ಈ ಕಾಲ ಯಾವುದು ಎಂಬುದು ವೇದಗಳ,ರಾಮಾಯಣದ,ಕಾಲ ಯಾವುದು ಎಂಬ ಪ್ರಶ್ನೆಯನ್ನೆವಲಂಬಿಸಿದೆ.ಇಲ್ಲಿ ಇದರ ಚರ್ಚೆ ಅನಾವಶ್ಯಕ.ಅಲ್ಲಲ್ಲೇ ಸಿಕ್ಕಿದ ಶಿಲಾಶಾಸನಗಳ,ಮೊಹೆಂಜೊದಾರೊ ಹರಪ್ಪ ಉತ್ಖನನಗಳಲ್ಲಿ ದೊರೆತ ಅವಶೇಷಗಳ ಅಪರಿಪೂರ್ಣಜ಼ಾನದ ಆಧಾರಗಳ ಮೇಲೆ ನಿರ್ಧಾರಮಾಡಿ,ದಾಶಮಿಕ ಸಂಖ್ಯಾಕ್ರಮವು ಈಚೀಚಿನದು,ಕ್ರಿಸ್ತಜನನಕ್ಕೆ ಮುಂಜೆಯಂತೂ ಇರಲೇ ಇಲ್ಲಿ ಎಂದು ತೀರ್ಮಾನಿಸುವುದು ಸರಿಯಲ್ಲವೆನಿಸುತ್ತದೆ.

ದಾಶಮಿಕ ಕ್ರಮದ ಜೊತೆಯಲ್ಲೇ ಇತರ ಕ್ರಮಗಳೂ ಇದ್ದಿರಬಹುದು.ಇದ್ದುವು ಎಂದೇ ಹೇಳಬಹುದು.ಎಲ್ಲ ಶಾಸ್ತ್ರಾರ್ಥ ವಿಷಯಗಳನ್ನೂಮ ಪದ್ಯ ರೂಪದಲ್ಲೇ ಬರೆದಿಡುವುದು ಪದ್ಧತಿಯಾಗಿದ್ದುದರಿಂದ ಸಂಖ್ಯೆಗಳನ್ನು ಪದ್ಯಕ್ಕೆ ಅಳವಡಿಸಿಕೊಳ್ಳುವುದಕ್ಕೆ ಶಬ್ದಸಂಖ್ಯೆಗಳು,ಅಕ್ಷರಸಂಖ್ಯೆಗಳು ಮುಂತಾದ ಉಪಾಯಗಳನ್ನು ಕಲ್ಪಿಸಿಕೊಂಡಿದ್ದರು .ದೇವನಾಗರಿಲಿಪಿಯ ವರ್ಗೀಯವ್ಯಂಜನಗಳಿಗೆ ೧-೨೫ ರ ವರೆಗೂ ಅವರ್ಗೇಯ ವ್ಯಂಜನಗಳಿಗೆ ೩೦,೪೦ಇತ್ಯಾದಿಯಾಗಿಯೂ ಬೆಲೆಗಳನ್ನು ಕೊಟ್ಟುಸ್ವರಗಳಿಗೆ ೧೦ ರ ಗುಣಕಗಳನ್ನು ಕೊಡುವುದು ಒಂದು ಕ್ರಮವಾಗಿತ್ತು.ಇದರಂತೆ,ಖ್ಯ=ಖ+ಯ=೨+೩೦=೩೨.ಖ್ಯು=ಖ+ಯ+ಉ=೩೨೦೦ ಇತ್ಯಾದಿ.ಅಕ್ಷರಸಂಖ್ಯೆಗಳಿಗೆ ಕನ್ನಡ ವ್ಯಾಕರಣದಲ್ಲೇ ಉದಾಹರಣೆಗಳಿವೆ.ಶರ ಕುಸುಮ ಭೋಗ ಭಾಮಿನ |ಪರಿವರ್ಧಿನಿ ವಾರ್ಧಿಕಂಗಳೆಂಬಾರುತೆರಂ| ಕರಿದಶರವಿ ಮನುರಾಜರ್ ೧ ಬರೆ ವಿಂಶತಿ ಮಾತ್ರೆಯಿಂದ ಷಟ್ಪದಿ ಮೆರೆಗುಂ| ಇಲ್ಲಿ ಕರಿ=೮, ರವಿ=೧೨, ಮನು=೧೪, ರಾಜ=೧೬.

ಪದ್ಯ ರಚನೆಯ ಅನುಕೂಲಕ್ಕಾಗಿ ಕಲ್ಪಿಸಿಕೊಂಡ ಈ ವಿಧಾನಗಳು ದಾಶಮಿಕ ಸಂಖ್ಯಾಕ್ರಮವಿಲ್ಲದಿದ್ದುದಕ್ಕೆ ಸಾಕ್ಷಿ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ.

ಅಂಕಿಗಳಿಗೆ ನಾನಾ ಭಾಷೆಗಳಲ್ಲಿ ಲಿಪಿಗಳು ಬೆಳೆದು ಬಂದ ಚರಿತ್ರೆಯು ಪ್ರಾಕ್ತನ ಶಾಸ್ತ್ರಕ್ಕೆ(ಆರ್ಕಿಯಾಲಜಿ) ಸಂಬಂಧಿಸಿದ್ದು.ಹಿಂದಿನ ಕಾಲದಿಂದಲೂ ಖರೋಷ್ಠಿ,ಬ್ರಾಹ್ಮೀ ಎಂಬ ಲಿಪಿಗಳಿದ್ದುವೆಂದೂ ಫೀನೀಷಿಯ,ಈಜಿಪ್ಟ್ ಮುಂತಾದ ದೇಶಗಳಲ್ಲಿ ಬೇರೆ ಬೇರೆ ಲಿಪಿಗಳಿದ್ದುವೆಂದೂ ಕಾಲಾನುಗುಣಕ್ಕೆ ತಕ್ಕಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಭಾಷೆಗಳು ಬೆಳೆದಂತೆಲ್ಲ ಅಂಕಿಗಳ ಲಿಪಿಗಳೂ ಒಂದು ಸ್ಥಿರ ರೂಪಕ್ಕೆ ಕ್ರೋಡೀಕೃತವಾದುವೆಂದೂ ಹೇಳಬಹುದು.ಭಾರತದ ಪ್ರಾಚೀನ ಭಷೆಯಾದ ದೇವನಾಗರಿ ಆಂಕಲಿಪಿಗೂ ಆಧುನಿಕ ಭಷೆಗಳಾದ ಬಂಗಾಳಿ,ಗುಜರಾತಿ,ತೆಲುಗು,ಕನ್ನಡ ಮುಂತಾದ(ತಮಿಳನ್ನು ಹೊರತು ಪಡಿಸಿ) ಭಾಷೆಗಳ ಅಂಕಲಿಪಿಗೂ ಕ್ರಮ ಕ್ರಮವಾಗಿ ಹೋಲಿಕೆಗಳನ್ನು ಕಾಣಬಹುದು.ಇಂಗ್ಲಿಷ್ ಅಥವಾ ಲ್ಯಟಿನ್ ಲಿಪಿಯ ೦,೧,೨,೩,೪ಎಂಬುವಕ್ಕೂ ದೇವನಾಗರಿ ಅಥವಾ ಭಾರತದ ಇತರ ಭಾಷೆಗಳ ಲಿಪಿಗೂ ಹೋಲಿಕೆ ಬಹುಮಟ್ಟಿಗೆ ಇದೆ.ಉಳಿದ ಅಂಕಿಗಳಿಗೆ ಇಲ್ಲಿ.ಹಲವಾರು ಸಂಸ್ಕೃತಿಗಳು ಕಲೆತು ಭಾಷೆಯೂ ಭಾಷಾಲಿಪಿಯೂ ಬೆಳೆದು ಬಂದು ಏಕತೆಯನ್ನು ಹಾಗೆಯೇ ಭಿನ್ನತೆಗಳನ್ನು ತಾಳಿರುವುದು ಸ್ವಾಭಾವಿಕವೇ.