ಪುಟ:Rangammana Vathara.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

66

ಸೇತುವೆ

ಎ‍ಚ್ಚರವಾಗದೆಯೆ ಇದ್ದ ಮಗುವಿಗೆ ಮೆತ್ತನ್ನ ಹಾಸಿಗೆ ದೊರೆಯಿತು.
ಶಂಕರನಾರಾಯಣಯ್ಯ ಒಂದು ಸಿಗರೇಟು ಸೇದುತ್ತ ಹಾಯಾಗಿ ಕುಳಿತ.
ಚಂಪಾ ಮಗುವನ್ನೂ ಮಗುವಿನ ತಂದೆಯ ಮುಖವನ್ನೂ ಪ್ರೀತಿಯಿಂದ ನೋಡಿದಳು.
ದೀಪ ಆರಿಹೋಯಿತು.
"ಇಲ್ಲಿ ನಾವು ದೀಪ ಆರಿಸ್ಬೇಕಾದ ತೊಂದರೇನೇ ಇಲ್ಲ," ಎಂದು ಶಂಕರನಾರಾ
ಯಣಯ್ಯ ನಕ್ಕ.
ನಗೆಯ ಶಾಖ ಚಂಪಾವತಿಗೂ ತಗಲಿತು.
ಗಂಡ ಹೆಂಡತಿ ಇಬ್ಬರೂ, ಹಾಸಿಗೆಯ ಮೇಲೆ ತಮಗೂ ಜಾಗ ಬೇಕೆಂದು,
ಮಗುವನ್ನು ಮೂಲೆಯಲ್ಲಿ ಮಲಗಿಸಿದರು.
ಹಗಲು ಬಯಸಿದ್ದನ್ನು ಈಗ ಆಕೆಯೇ ಕೊಟ್ಟಳು. ಅದನ್ನಾತ ಹುಸಿ ಮುನಿಸಿ
ನಿಂದ ವಾಪಸು ಮಾಡಿದ. ಆಕೆ ಮತ್ತೆ ಕೊಡಹೋಡಳು.
ಚಿತ್ರ ಬರೆಯುವ ಶಂಕರನಾರಾಯಣಯ್ಯ ಹೇಳಿದು:
"ಮೊದಲ ರಾತ್ರಿ."

ಬೆಳಗ್ಗೆ ಐದು ಘಂಟೆಯಿಂದಲೇ ಆಗುತ್ತಿದ್ದ ಸದ್ದು ಸಪ್ಪಳ ಕೊನೆಯ ಮನೆಯ

ದಂಪತಿಯನ್ನೂ ಎಚ್ಚರಗೊಳಿಸಿದುವು.
"ಈ ಮನೇಲಿ ನೀವು ಎಂಟು ಘಂಟೆವರೆಗೆ ನಿದ್ದೆ ಹೋದ ಹಾಗೆಯೇ," ಎಂದು
ಚಂಪಾ ಗಂಡನನ್ನು ಕುರಿತು ಹೇಳಿದಳು.
ಬೆಳಗಿನ ಬೆಚ್ಚಗಿನ ನಿದ್ದೆಗೆ ಅ‍ಷ್ಟು ಸುಲಭವಾಗಿ ಎಳ‍್ಳು ನೀರು ಬಿಡುವ ಹಾಗಿರ
ಲಿಲ್ಲ ಶಂಕರನಾರಾಯಣಯ್ಯ. ಹೆಂಡತಿಯ ಸಮೀಪಕ್ಕೆ ಸರಿಯುತ್ತ ನಿದ್ದೆಯ ಗೊಗ್ಗರ
ಧ್ವನಿಯಲ್ಲಿ ಆತ ಹೇಳಿದ:
"ಒಂದು ನಾಲ್ಕು ದಿವಸ. ಅಷ್ಟರಲ್ಲಿ ಅಭ್ಯಾಸವಾಗ್ಬಿಡುತ್ತೆ."
"ನಿಮ್ಮ ಸುಖ ಬಿಟ್ಟುಕೊಟ್ಟೀರಾ ನೀವು? ನಾನು ಮಾತ್ರ ಇಲ್ಲಿ ಇನ್ನು ಆರು
ಘಂಟೆಗೇ ಏಳ್ಬೇಕು."
"ರಾತ್ರಿ ಬೇಗ್ನೆ ಮಲಕೊಂಡ್ಬಿಡು."
"ನೀವು ಬಿಟ್ಟರೆ!"
ಆತ 'ಊ' ಎಂದು ಗಂಟಲಿನಿಂದ ಸ್ವರ ಹೊರಡಿಸುತ್ತ ಆಕೆಯ ಮೃದುವಾದ
ತೋಳಿಗೆ ತನ್ನ ಮೂಗನ್ನು ತೀಡಿದ.