ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಮಹಾರ. ೧೫ ನನ್ನ ವಿಶಿಷ್ಮ ಆಸ್ತಿಯನ್ನೂ ನಿಮ್ಮ ವಶಕ್ಕೆ ಕೊಟ್ಟಿದೇ ನೆ. ನನ್ನ ಆಸ್ತಿಯಲ್ಲಿ ನೀವು ಬೇಕಾದ ಆದಾಯವೆಚ್ಚ ಗಳನ್ನು ನಡಿಸಬಹುದು. ಅದಕ್ಕೆ ನೀವು ಯಾರಿಗೂ ಲೆಕ್ಕ ಹೇಳಬೇಕಾದ್ದಿಲ್ಲ. ಕೃಷ್ಣನಿಗೆ ಮದುವೆ ಮಾಡಬೇಕೆಂದು ಯೋಚಿಸಿದೆ. ಯಾರೂ ಹೆಣ್ಣ ಕೊಡಲಿಲ್ಲ. ಮುಂದಕ್ಕೂ ಅವನಿಗೆ ಮದುವೆಯಾಗುವ ಯೋಗ ರ್ತೊಲ್ಲ. ಅವನ ಜಾತಕವೂ ಅದಕ್ಕೆ ಸರಿಯಾಗಿಯೇ ಇದೆ. ನನ್ನ ತಲೆಗೆ ನನ್ನ ಮನೆಯು ಹೋಯಿತು ಎನ್ನಿಸದೆ, ನೀವು ಇಲ್ಲಿಯೇ ನಿಂತು ನಿನ್ನ ಹೆಂಡತಿ ತಿರು ವನ್ನೂ ಏನೂ ಅರಿಯದ ಕೃಷ್ಣನನ್ನೂ ಕಾಪಾಡಿಕೊಂಡು ಬರಬೇಕು. ಹೆಚ್ಚಾಗಿ ಮಾತನಾಡಲು ನನಗೆ ತ್ರಾಣವಿಲ್ಲ. ಉಸಿರು ಹತ್ತಿರಬರು ತಿದೆ. ಈ ಊರು ಸಾಧಾರಣವಾದ್ದಲ್ಲ. ಪಟೇನಾದರೂ ಶುದ್ದ ಹಗಲುಗಳ್ಳ, ಶಾನುಭೋಗನಾದರೂ ಶುದ್ಧ ನ ತಂಗ, ಸರಸ್ವತ್ತನ್ನು ಅಪಹರಿಸುವುದರಲ್ಲಿ ನಿಪುಣರೆನಿಸಿ ಕೊಂಡಿರುವ ತಾಲ್ಲೂಕು ಅಧಿಕಾರಿಗಳೊ ಹೇಳಬೇಕಾದ್ರೆ ಇಲ್ಲ. ಒಂದು ತಂಟೆಗೂ ಹೋಗದೆ ತಕ್ಕನುಟ್ಟಿಗೆ ಬಾಳು ತಾ ಮಹಾಸ್ವಾಮಿಯವರ ದಯಕ್ಕೆ ನಾನು ಪಾತ್ರನಾಗಿ ರುವುದರಲ್ಲಿ ಇವರೆಲ್ಲರಿಗೂ ಕಣ್ಣು ಕೆಂವಾಗಿದೆ. ನಾನು ಸತ್ತಾನೆ ಎಂದು ಕಾದಿದಾರೆ. ಈಶ್ವರನ ಚಿತ್ರದಲ್ಲಿ ಇದ್ದ ಹಾಗಾಗಲಿ, ಆದರೆ ಪುರುಷಪ್ರಯತ್ನವನ್ನು ಮಾಡಬೇಕಾ ಆ ಆ