ಪುಟ:ಯಶೋಧರ ಚರಿತೆ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಯಶೋಧರ ಚರಿತೆ

ಎರಡನೆಯ ಅವತಾರ

ಆ ಕಥೆ ಮತ್ತೆಂತೆಂದೊಡಿ
ಳಾಕಾಂತೆಗವಂತಿ ವಿಷಯಮಾಸ್ಯದವೋಲ್ ಶೋ
ಭಾಕರಮಾಯ್ತದರೊಳ್ ನಾ
ಸಾಕುಟ್ಮಳದಂತೆ ಮೆರೆಪುದುಜ್ಜೇನಿಪುರಂ

ಆ ಪುರದರಸಂ ನತಭೂ
ಮೀಪಾಲರ ಮಕುಟಮಸ್ತಕದೆ ನಿಜತೇಜೋ
ರೂಪಕಮ ಪದ್ಯರಾಗದ
ದೀಪದವೊಲ್ ಮೆರೆವಿನಂ ಯಶೌಘಂ ಮೆರೆವಂ

ದೊರೆವಡೆದ ಯಶೌಘನ ಭೂ
ವರತಿಳಕನ ಕಣ್ಣಳಂಗರಕ್ಕರ್‌ ಮನಮಾ
ಭರಣಂ ರಾಜ್ಯಶ್ರೀ ಸಹ
ಚರಿಯನೆ ಸಂದತ್ತು ಚಂದ್ರಮತಿಗರಸಿತನಂ



೧. ಆ ಕಥೆಯು ಹೀಗಿದೆ : ಭೂದೇವಿಯ ಮುಖದಂತೆ ಅವಂತಿದೇಶವು ಶೋಭಿಸುತ್ತಿದೆ.
ಅದರಲ್ಲಿ ಮುಗುಳುಮೂಗಿನಂತೆ ಮೆರೆಯುತ್ತದೆ ಉಜ್ಜಯಿನಿಪುರ ೨. ನಗರಕ್ಕೆ ಅರಸನಾಗಿ
ಯಶ್‌ಘನು ಮೆರೆಯುತ್ತಿದ್ದನು. ಅನೇಕ ಭೂಪಾಲಕರು ಅವನಿಗೆ ನಮಸ್ಕರಿಸುವಾಗ ಅವರ
ಕಿರೀಟವುಳ್ಳ ತಲೆಗಳಲ್ಲಿ ಯಶೌಘನ ತೇಜಸ್ಸೇ ಪದರಾಗದ ದೀಪದಂತೆ ಬೆಳಗುತ್ತಿತ್ತು. ೩.
ಹೆಸರುಗೊಂಡ ರಾಜರಲ್ಲಿ ತಿಲಕಪ್ರಾಯನಾದ ಯಶೌಘನ ರಾಣಿ ಚಂದ್ರಮತಿ. ಆತನ ಕಣ್ಣುಗಳೇ
ಅಂಗರಕ್ಷಕರಂತೆ ಅವಳನ್ನು ಕಾಪಾಡುತ್ತವೆ. ಆತನ ಮನಸ್ಸು ಆಕೆಗೆ ಆಭರಣವಾಗಿದೆ.
ರಾಜ್ಯಲಕ್ಷ್ಮಿಯೇ ಅವಳ ಒಡನಾಡಿಯಾಗಿದ್ದಾಳೆ ಎಂದಮೇಲೆ ಅವಳಿಗೂ