ಪುಟ:ಯಶೋಧರ ಚರಿತೆ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಯಶೋಧರ ಚರಿತೆ


ಎನೆ ಕೇಳ್ದು ಮಾರಿದತ್ತಾ
ವನಿಪನವಂಗಭಯರುಚಿ ಬಳಿಕ್ಕಿಂತೆಂದಂ
ಮನಸಿಜನ ಮಾಯೆ ವಿಧಿವಿಳ
ಸನದ ನೆರಂಬಡೆಯೆ ಕೊಂದು ಕೂಗದೆ ನರರಂ೬೧


ಪದವಿಯ ರೂಪಿನ ಸೊಬಗಿನ
ಮದಮಂ ಮಾಡುವರ ಮೂಗಿನೊಳ್‌ ಪಾತ್ರಮನಾ
ಡದೆ ಮಾಣದನಂಗನ ಕೃತಿ
ಸುದತಿಯರ ವಿಕಾರಮೆಂಬ ವಿದ್ಯಾಬಲದಿಂ೬೨


ಆ ರಾಜಕುಮಾರಂ ಬಳಿ
ಕಾ ರೂಪಿನ ಪೆಂಡಿರಿಂತು ಕಳಿಬಾದೊಡೆ ಚಿಃ
ಕೂರಿಸುವ ಕೂರ್ಪ ಮಾತಂ
ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದಂ೬೩



೬೧. ಇದನ್ನು ಕೇಳಿ ಅಭಯರುಚಿ ಕುಮಾರನು ಅವನಿಗೆ ವಿಧಿಯ ಸ್ವಭಾವವನ್ನು
ವಿವರಿಸಿದನು. “ವಿಧಿವಿಲಾಸದ ನೆರವು ದೊರೆತಾಗ ಮನಸಿಜನ ಮಾಯೆ
ಮನುಷ್ಯರನ್ನು ಸರ್ವನಾಶಗೊಳಿಸಿ ಜಯಘೋಷವನ್ನು ಮಾಡುತ್ತದೆ. ೬೨. ಈ
ಆಟಕ್ಕೆ ದೊರೆಯುವ ಸ್ಥಳವೆಂದರೆ ಅಧಿಕಾರ ಮದ, ರೂಪ ಮದ ಮತ್ತು
ಸೌಭಾಗ್ಯ ಮದವುಳ್ಳವರ ಮೂಗು. ಈ ರೀತಿ ದುರಭಿಮಾನಪಡುವವರ ಕಣ್ಣ
ಎದುರಿನಲ್ಲಿಯೇ ಕಾಮನು ಕಾಮಿನಿಯರ ಮುಖಾಂತರ ಬಗೆಬಗೆಯ
ನಾಟಕಗಳನ್ನು ಆಡಿಸುತ್ತಾನೆ”.೩೭ ೬೩. ಮಾರಿದತ್ತನಿಗೆ ಮನಸ್ಸು ತಡೆಯಲಿಲ್ಲ.
“ಅ೦ತಹ ರೂಪವತಿಯಾದ ಪತ್ನಿಯೂ ಹಾಗೆ ತ್ಯಾಜ್ಯಳಾದಳೆಂದರೆ, ಪತ್ನಿಯನ್ನು
ಪೀತಿಸುವ, ಅಥವಾ ಅವರಿಂದ ಪ್ರೀತಿಯನ್ನು ಪಡೆಯುವ ಮಾತು ಮಾರಿಗೇ
ತೃಪ್ತಿ! ಅಂತಹವರ ಐಶ್ವರ್ಯವನ್ನೆಲ್ಲ ರಾಶಿ ಮಾಡಿ ಬೆಂಕಿಗೆ ಹಾಕಬೇಕು! ಚಿಃ!೩೮