ಪುಟ:ಯಶೋಧರ ಚರಿತೆ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ಯಶೋಧರ ಚರಿತೆ

ಅಲ್ಲಿಯೆ ಪೋಂತಪ್ಪುದುಮದು
ಮೆಲ್ಲನೆ ತೆನೆ ತೀವಿ ಸುಳಿಯೆ ಕಂಡೊರ್ಮೆ ಮಹೀ
ವಲ್ಲಭನುಂ ಬೇಂಟೆಯೊಳಡ-
ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ


ಇಸೆ ಪಸುಮಲೆ ಯೋನಿಮುಖ
ಪ್ರಸವಕ್ಕಲಸಿದವೊಲೇರ ಬಾಯಿಂ ತಾಯೊಂ-
ದಸುವೆರಸು ಬಿರ್ದುದಂ ರ
ಕ್ಷಿಸಲಿತ್ತಂ ಮಾದರಂಗೆ ಕರುಣದಿನರಸಂ೫೬


ಒರ್ಮೆ ಯಶೋಮತಿ ಮೃಗಯಾ
ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ-
ದೆರ್ಮೆಯ ಪೋರಿಯನಿಕ್ಕಿದ-
ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ೫೭


ಈ ಆಡು ತಾಯಿಯ ಬಸಿರನ್ನೇ ಸೇರಿಕೊಂಡಿತು. ೫೫. ಅಲ್ಲಿ ಹೋತವಾಗಿ
ಬೆಳೆಯುತ್ತಾ ಇತ್ತು. ಬಸಿರು ಮೆಲ್ಲಮೆಲ್ಲನೆ ತುಂಬಿ ಬೆಳೆಯಿತು. ತಾಯಿ ಆಡು
ಮೆಲ್ಲನೆ ಸಂಚರಿಸುತ್ತಾ ಇತ್ತು. ಯಶೋಮತಿ ಬೇಟೆಗೆ ಹೋಗಿದ್ದನು. ಅವನಿಗೆ
ಅಲ್ಲಿ ಒಂದು ಪ್ರಾಣಿಯೂ ಸಿಕ್ಕಲಿಲ್ಲ. ಮಾಂಸಬೇಕಾಗಿದ್ದುದರಿಂದ ಎದುರು
ಕಾಣಸಿಕ್ಕಿದ ಗರ್ಭಿಣಿಯಾದ ಆಡನ್ನೆ ಬಾಣಬಿಟ್ಟು ಕೊಂದಿಕ್ಕಿದನು. ೫೬. ಯೋನಿಯ
ಮುಖಾಂತರ ಜನ್ಮ ತಾಳುವುದು ಉಚಿತವಲ್ಲವೆಂಬಂತೆ ಆ ಎಳೆಯ ಹೋತವು
ಬಾಣ ತಾಗಿದ ತಾಯಿಯ ಗಾಯದ ಮುಖಾಂತರ ಕೆಳಕ್ಕೆ ಜಗುಳಿತು. ಅದರ
ತಾಯಿಯ ಜೀವವೂ ತೊಲಗಿತು. ರಾಜನಿಗೆ ಆಡಿನ ಮರಿಯ ಮೇಲೆ
ಕರುಣೆಯುಂಟಾಯಿತು. ಅವನು ಅದನ್ನು ರಕ್ಷಿಸುವಂತೆ ಮಾದರನೊಬ್ಬನಿಗೆ
ಒಪ್ಪಿಸಿದನು. ೫೭. ಯಶೋಮತಿಗೆ ಮತ್ತೊಮ್ಮೆ ಬೇಟೆಯಾಡುವ ಅಭಿಲಾಷೆ
ತೀವ್ರವಾಯಿತು. ಅವನು ಮಾರಿಗೆ ಹರಕೆ ಹೇಳಿ ಮುಂಬರಿದನು. ಅಲ್ಲಿ ಅವನಿಗೆ
ಜಿಂಕೆಯೊಂದು ಸಿಕ್ಕಿತು. ಅನಂತರ ಅವನು ಕೋಣವನ್ನು ಕೊಂದು ಊರ