ಪುಟ:ಯಶೋಧರ ಚರಿತೆ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ಯಶೋಧರ ಚರಿತೆ

ಬೆಳತಿಗೆ ವಸದನಮೆಸೆದಿರೆ
ತಳಿರ್ಜೊಂಪದೊಳುಯ್ಯಲಾಡಿ ಮೆಱೆದಳದೊರ್ವಳ್
ಜವಳದ ಮಣಿಮಂಡಪದೊಳ-
ಗೆಳವೆಱೆಯಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್೧೦


ಕೊಳದೊಳಗೋಲಾಡಿ ತಳಿ-
ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ-
ವಳಿಯೊಳ್ ರತಿರಾಗದಿನೋ-
ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ೧೧


ಗಂಟಿಗೆತ್ತಲ್ ತದ್ವನ
ಪರಿಸರದೊಳ್ ಬರುತಮಿರ್ದಕಂಪನರೆಂಬರ್
ತರುಮೂಲದೊಳಿರೆ ನಿಧಿಯಂ
ಕರುಡಂ ಕಾಣ್ಬಂತೆ ಚಂಡಕರ್ಮಂ ಕಂಡಂ೧೨



೧೦. ಇನ್ನೊಬ್ಬಳು ಬಿಳಿಯ ಬಟ್ಟೆಯನ್ನುಟ್ಟುಕೊಂಡು ಚಿಗುರ ಚಪ್ಪರದಲ್ಲಿ
ಉಯ್ಯಾಲೆಯಾಡುತ್ತಾ ಮೆರೆಯುತ್ತಿದ್ದಳು. ಆಗ ತಾವರೆಯ ರತ್ನ ಮಂಟಪದಲ್ಲಿ
ಬಾಲಚಂದ್ರನನ್ನು ತೊಟ್ಟಿಲಲ್ಲಿಟ್ಟು ತೂಗುವಂತೆ ಚೆಲುವು ಚೆಲ್ಲುತ್ತಿತ್ತು. ೧೧.
ಯಶೋಮತಿಯೂ ಕುಸುಮಾವಳಿಯೊಂದಿಗೆ ಸರೋವರದಲ್ಲಿ ಓಲಾಡಿದನು;
ಚಿಗುರಿದ ಎಳೆಯ ಮಾವಿನ ಮರದಲ್ಲಿ ಉಯ್ಯಾಲೆಯಾಡಿದನು.
ಪ್ರೇಮಾನುರಾಗದಿಂದ ಓಕುಳಿಯಾಡಿದನು. ಅನಂತರ ಒಂದು ಕಡೆ
ವಿಲಾಸಗೋಷ್ಠಿಯಲ್ಲಿ ಕುಳಿತುಕೊಂಡನು. ೧೨. ಚಂಡಕರ್ಮನು ಎಂದಿನಂತೆ
ತಿರುಗಾಡುತ್ತಾ ಆ ಉದ್ಯಾನದ ಕಡೆಗೆ ಬಂದನು. ಅವನಿಗೆ ಅಲ್ಲಿ, ಮರವೊಂದರ
ಬುಡದಲ್ಲಿ ಅಕಂಪನರೆಂಬವರು ಕುಳಿರುಕೊಂಡಿದ್ದುದು ಕಾಣಿಸಿತು. ಅವನಿಗೆ
ಆಗ ಕುರುಡನು ಕೊಪ್ಪರಿಗೆಯನ್ನು ಕಂಡಂತಾಯಿತು.೧೩. ಅವರು ಮನಸ್ಸನ್ನು