ಪುಟ:ಯಶೋಧರ ಚರಿತೆ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೯೯

ಕೊಲೆಯಾಗುದು ಪುಸಿಯಾಗದು
ಕಳಲಾಗದು ಪೆರರಪೆಂಡಿರೊಳ್ ತನ್ನ ಮನಂ
ಸಲಲಾಗದು ತೀರದುದ-
ಕ್ಕಲವರಲಾಗದು ಪರತ್ರೆಯಂ ಬಯಸುವವಂ೩೧


ಇವು ಮೊತ್ತಮೊದಲಣುವ್ರತ
ಮಿವು ಮಸುಳದೆ ನಡೆದೊಡೈಹಿಕಾಮುತ್ರಿಕಮೆಂ-
ಬಿವರೊಳ್ ಸಮಸುಖಿಯಪ್ಪಂ
ಭವಭವದೊಳ್ ದುಃಖಿಯಪ್ಪನಿವು ಮಸುಳ್ದಾತಂ ೩೨


ಮಾಡಿದ ಕೋಳಿಯನಳಿದ-
ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್
ಗೂಡಿನ ಕೋಳಿಗಳಾದರ್
ನೋಡಯ್ ಮತ್ತೊರ್ಮೆ ಬಳಲಿ ತಿರ್ಯಗ್ಗತಿಯೊಳ್೩೩


ಲೋಕವನ್ನು ಬಯಸುವವನು ಕೊಲೆ ಮಾಡಬಾರದು, ಸುಳ್ಳು ಹೇಳಬಾರದು,
ಪರಸ್ತ್ರೀಯರ ಮೇಲೆ ಮನಸ್ಸು ಮಾಡಬಾರದು. ಎಂದೂ ಕಳವು ಮಾಡಬಾರದು,
ಆಗದುದಕ್ಕೆ ಆಸೆಪಡಬಾರದು. ೩೨. ಇವೇ ಮೊತ್ತಮೊದಲಿನ ಅಣುವ್ರತಗಳೆನ್ನಿಸಿವೆ.
ಇವುಗಳಿಗೆ ಮಾಲಿನ್ಯವುಂಟಾಗದಂತೆ ಆಚರಿಸಿದವನು ಇಹಪರ ಲೋಕಗಳ
ಸುಖಗಳನ್ನು ಯಾವ ಏರಿಳಿತವೂ ಇಲ್ಲದೆ ಅನುಭವಿಸುತ್ತಾನೆ. ಇವುಗಳಿಗೆ
ಮಲಿನತೆಯುಂಟಾದಲ್ಲಿ, ಅಂಥವನು ಜನ್ಮಜನ್ಮಾಂತರಗಳಲ್ಲಿಯೂ
ದುಃಖಭಾಜನನಾಗುತ್ತಾನೆ. ೩೩. ಕೃತಕವಾಗಿ ಒಂದು ಕೋಳಿಯನ್ನು ತಯಾರಿಸಿ
ಅದನ್ನು ಕೊಂದ ಯಶೋಧರ ಮತ್ತು ಚಂದ್ರಮತಿ ಎಂಬಿಬ್ಬರೂ ಸತ್ತಮೇಲೆ
ಜನ್ಮಾಂತರಗಳನ್ನೆತ್ತಿ ಈಗ ಮತ್ತೊಮ್ಮೆ ಗೂಡಿನ ಕೋಳಿಗಳಾಗಿ ಹುಟ್ಟಿದ್ದಾರೆ. ಈ
ಮೊದಲು ಅನೇಕ ಪ್ರಾಣಿ ಜನ್ಮವನ್ನು ಪಡೆದು ಬೇಕಾದಷ್ಟು ಬಳಲಿದ್ದಾರೆ.