ಚತುರ್ಥಾಶ್ವಾಸಂ
೭೭
ದರಿ ನಡೆನೋಡೆ ಕಂತು ನಡೆ ಪೂಡಿದ ಪೂಗಣೆಗೆತ್ತು ನಾಡೆ ಕಾ|
ತರತೆಯನಪ್ಪುಕೆಯ್ಯೆ ಬಗೆ ನೋಡಿದನಾಕೆಯನಾ ಕುಮಾರಕಂ|| ೧೦ ||
ಅಂತಾತಂ ಕಣ್ಸೋಲ್ತುನೋಡಿ ದೂದವಿಯನಟ್ಟುವುದುಂ--
ಚ || ಬಗೆಯದೆ ತನ್ನ ಮುನ್ನಿನೊಲವಂ ನೆಲೆಯಿಂದೊಡಗೂಡಿ ಬಂದುದಂ।
ಬಗೆಯದೆ ಪಾಳಿಯಂ ಪಸುಗೆಯಂ ಗುಣಹಾನಿಯನಪ್ರಸಿದ್ದಿಯ೦||
ಬಗೆಯದೆ ಬಂದ ದೂದವಿಗೆ ಚಿತ್ರಮನೊಪ್ಪಿಸಿ ಕೂಟದಾಸೆಯಂ|
ಬಗೆದಳಿದಾವ ವಿಸ್ಮಯವೊ ನಾರಿಗೆ ನಚ್ಚಿನ ಕೆಯ್ದ ಕೈತವಂ || ೧೧ ||
ಅಂತಾಕೆಯನಾ ಕುಮಾರಂ ಬರಿಸಿ ತನಗರಸಿಮಾಡಿ ಕಪಿಳನಂ ಮರುಳ್ಮಾಡಿ
ಕಳೆವುದುಮಾತನದುವೆ ನಿರ್ವೇಗಕಾರಣಮಾಗೆ ಕೆಲವುಕಾಲದಿನಾರ್ಯಗುಪ್ತರೆಂಬಾ
ಚಾರ್ಯರ ಸಮಕ್ಷದೊಳ್ ಬಾಹ್ಯತಪೋರೂಪಮಂ ತಳೆದು--
ಕಂ || ಆ ಸುದತಿ ನೆಲಸೆ ಚಿತ್ರ ನಿ
ವಾಸದೊಳಾ ಕಪಿಳಮುನಿ ತಪಶ್ಯ್ರೀ ತನುವಂ||
ಬಾಸಣಿಸೆ ೧ತೇದು ಪೊನ್ನಂ
ಪೂಸಿದ ಕರ್ಬೊನ್ನ ಪಾಪೆಯಂತೆವೊಲಿರ್ದಂ||೧೨||
ಒಪ್ಪಿಸಿ ಮನಮಂ ಮಾನಿನಿ
ಗೊಪ್ಪಿಸಿ ತನುವಂ ತಪಕ್ಕೆ ಮುನಿ ಮನಸಿಜನಿ೦||
ಸೊಪ್ಪಾಗಿರ್ದೊರ್ಚವಡಿಯ
ಕುಪ್ಪಸಮಂ ಪೋಲ್ತು ಪೊರಗೆ ನೇರಿದನಾದ೦||||೧೩||
ಮುನಿ ನಡೆದಾ ತಪದೊಳ್ ಜೀ
ವನಮಂ ತವೆ ಪೀರ್ದು ದೇ ವಗತಿ ಸಮನಿಸೆ ಮು||
ನ್ನಿನ ಪಗೆಯಂ ಕುಂಡಲನಂ
ನೆನೆದವಧಿಯಿನಳವಿಗಳಿದ ಮುಳಿಸಂ ತಳೆದಂ||೧೪||
ಆತ೦ ನಿಜವಿರೋಧಿಯಪ್ಪ ಕುಂಡಲಮಂಡಿತಂ ಪೆರತೊಂದು ಹೆಣ್ಗೂಸುವೆರಸು ವಿದೇಹಿಯ ಗರ್ಭದೊಳ್ ಬಳೆವುದಂ ತಿಳಿದು---
1.ತೆಗೆದು, ಕ, ಖ, ಗ, ಘ.