ಪುಟ:ಕಥಾಸಂಗ್ರಹ ಸಂಪುಟ ೨.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ಬಲು ಬಿಸಿಗೆಯ ಹೊಯ್ದಿನಿಂದ ಬಳಲಿ ಬಾಯಾರಿ ಕಡೆಗೆ ತನ್ನ ಆರು ಜನ ಪ್ರಧಾ ನರೊಡನೆ ಕೂಡಿ ನರ್ಮದೆಯನ್ನು ಕಂಡು ಅಲ್ಲಿ ಪುಷ್ಪಕವಿಮಾನವನ್ನಿಳಿಸಿ ನದೀತೀರದ ಇರುವ ತರುಗಳ ಸಾಂದ್ರಛಾಯೆಯಿಂದ ಶೀತಲವಾದ ಮಳಲ್ಲಿ ಸ್ಥೆಗಳಲ್ಲಿ ಕುಳಿತು ಆಯಾಸ ವಿಶ್ರಾಂತಿಯನ್ನು ಹೊಂದಿ ಆ ಮೇಲೆ ಮಾರೀಚ ಪ್ರಹಸ್ತಾದಿ ಪ್ರಧಾನರನ್ನು ಕುರಿತು-ಈ ನದೀತೀರ ಪ್ರದೇಶವು ಬಹು ಪರಿಶುದ್ಧತೆಯುಳ್ಳದಾಗಿರುವುದು. ಅದು ಕಾರಣ ಈ ನದಿಯ ನಿರ್ಮಲೋಕದಲ್ಲಿ ಸ್ನಾನಮಾಡಿ ಶಂಕರನನ್ನು ಆರಾಧಿಸು ವೆನು. ನೀವು ಪೂಜೆಗೆ ಯೋಗ್ಯವಾದ ಪತ್ರ ಪುಷ್ಪಾದಿಗಳನ್ನು ಒದಗಿಸಿಕೊಡಿರಿ ಎಂದು ಹೇಳಲು ಆ ಮೇಲೆ ಅವರು ನದೀ ತೀರ ಪ್ರದೇಶದಲ್ಲಿ ಸಂಚರಿಸುತ್ತ ಬೇಕಾದಷ್ಟು ಪತ್ರ ಪುಷ್ಠಾದಿಗಳನ್ನು ಒದಗಿಸಿಕೊಟ್ಟರು. ಅನಂತರದಲ್ಲಿ ನಿಶಾಚರೇಶ್ವರನು ನರ್ಮ ದಾನದಿಯ ನಿರ್ಮಲೋದಕದಲ್ಲಿ ಮಿಂದು ಅದರ ದಡದಲ್ಲಿ ಕುಳಿತು ಭಸ್ಮತಿ ಪುಂಡ್ರಾಂಕಿತನಾಗಿ ಮಧ್ಯಾನ್ನೋಚಿತವಾದ ಕರ್ಮಗಳನ್ನು ನೆರವೇರಿಸಿ ನಿರ್ಮಲ ವಾದ ಮಳಲಿನಿಂದ ಲಿಂಗವನ್ನು ಮಾಡಿ ಮಂತಾ ವಾಹಿತನಾದ ಶಿವನನ್ನು ಅದರಲ್ಲಿ ಪ್ರತಿಷ್ಠಿಸಿ ಅರ್ಭ್ಯಪಾದ್ಯಾದಿ ಷೋಡಶೋಪಚಾರಗಳನ್ನು ಮಾಡಿ ಶಿವಸಹಸ್ರನಾಮಾ ವಳಿಯನ್ನು ಉಚ್ಚರಿಸುತ್ತ ಕ್ರಮವಾಗಿ ಬಿಲ್ವ ಪತ್ರ ಪುಷ್ಪ ಗಳನ್ನ ರ್ಪಿಸುತ್ತ ಇದ್ದನು. ಹೀಗಿರುವಲ್ಲಿ ಅವನು ಪೂಜೆಮಾಡುತ್ತಿರುವ ಸ್ಥಳದ ಮು೦ಗಡೆ ಒಂದಂಬಿನಿಸು ಗೆಯಷ್ಟು ದೂರದಲ್ಲಿ ಆ ನದಿಯೊಳಗೆ ತನ್ನ ಸ್ತ್ರೀಯರೊಡನೆ ಕೂಡಿ ನೀರಾಟವನ್ನಾಡು ತಿದ್ದ ಕಾರ್ತವೀರ್ಯಾರ್ಜುನನು ನೀರಿನೊಳಗೆ ಮುಳುಗಿ ಆಡಬೇಕೆಂಬ ಅಪೇಕ್ಷೆಯು ಳ್ಳವನಾಗಿ ಆ ನದಿಯ ನೀರು ಸ್ವಲ್ಪವಾಗಿದ್ದುದರಿಂದ ಹೆಚ್ಚು ಮಾಡಿಕೊಳ್ಳುವದ ಕ್ಕಾಗಿ ತನ್ನ ಎಡಗಡೆಯ ಐನೂರು ತೋಳುಗಳಿಂದ ಆ ನದಿಯ ಪ್ರವಾಹವನ್ನು ತಡೆದು ನೀರನ್ನು ಹೆಚ್ಚು ಮಾಡಿಕೊಂಡು ಬಲಗಡೆಯ ಐನೂರು ತೋಳುಗಳಿಂದ ಹೆಂಡಿ ರುಗಳೊಡನೆ ಮುಳುಗುತ್ತ ಏಳುತ್ತ ಜಲಕ್ರೀಡೆಯನ್ನು ಆಡುತ್ತಿದ್ದನು. ಆಗ ನರ್ಮ ದಾನದಿಯ ಪ್ರವಾಹವು ಅವನ ತೋಳುಗಳಿ೦ದ ತಡೆಯಲ್ಪಟ್ಟು ದರಿಂದ ಹೆಚ್ಚಿ ಹಿಂದಕ್ಕೆ ಒದೆಯಲು ಆ ನೀರಿನಿಂದ ರಾವಣನು ಪೂಜಿಸುತ್ತಿದ್ದ ಸೈಕತ ಲಿಂಗವೂ ಪೂಜಾಸಾಮ ಗ್ರಿಗಳೂ ನೀರಿನಲ್ಲಿ ಕಲೆತು ನಿಶೇಷವಾಗಿ ಹೋಗಲು ಆಗ ಶಿವಪೂಜೆಯು ನೆರವೇ ರದೆ ಹೋದುದರಿಂದ ಮಹಾ ಕೋಪವುಳ್ಳವನಾದ ರಾವಣನು ಪ್ರವೃತ್ತಿ ಜ್ಞಾನಾರ್ಥ ವಾಗಿ ದೂತರನ್ನು ಕಳುಹಿಸಿ ನೀರು ಹೆಚ್ಚಾಗುವುದಕ್ಕೆ ಕಾರ್ತವೀರ್ಯಾರ್ಜುನನ ದುರುಳತನವೇ ಕಾರಣವೆಂದು ಅವರಿಂದ ತಿಳಿದು ಕೊಪದಿಂದ ಕಣಾ ಣದವನಾಗಿ, ಅವನಿರುವ ಸ್ಥಳಕ್ಕೆ ಹೋಗಿ ಅವನನ್ನು ನೋಡಿ ಜಗದೇಕ ವೀರನಾದ ನಾನು ಜಗ ಳಕ್ಕೆ ಬಂದು ನಿಂತಿದ್ದಾಗ ನೀನು ಹೇಡಿಯ ಹಾಗೆ ಹೆಣ್ಣಳೊಡನೆ ನೀರಾಟವನ್ನಾ ಡುತ್ತಿರುವುದು ಶೂರತ್ವವೋ ? ನಿನಗೆ ಸಹಸ್ರಬಾಹುಗಳಿದ್ದರೂ ವ್ಯರ್ಥವೆಂದು ಹೇಳಲು ಕಾರ್ತವೀರ್ಯಾರ್ಜುನನು ರಾವಣನನ್ನು ನೋಡಿ ಇವನು ಹುಚ್ಚನೆಂದು ನಸುನಕ್ಕು ತಾನು ಕೋಡಗನಾಗಿ ವನವನ್ನಣಕಿಸಿತು ಎಂಬ ಗಾದೆಗೆ ಸರಿಯಾಗಿ ಹೆಂಗಸರೊ ಡನೆ ಕ್ರೀಡಿಸುವಂಥವನ ಬಳಿಗೆ ನಾಚಿಕೆಯಿಲ್ಲದೆ ಬಂದು ಯುದ್ಧಕ್ಕೆ ಕರೆಯುವುದರಿಂದ