ಪುಟ:Rangammana Vathara.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

36

ಸೇತುವೆ

ಆದರೆ ಮತ್ತೊಮ್ಮೆ ಅಂಥದೇ ಪ್ರಯೋಗ ನಡೆಸಲು ಅವರು ಸಿದ್ದರಿರಲಿಲ್ಲ
ಮುಂದೇನು ಪ್ರಶ್ನೆ ಬರುವುದೋ ಎಂದು ಕಾದು ಕುಳಿತಿದ್ದ ಶಂಕರ ನಾರಾಯಣಯ್ಯ
ನನ್ನು ನೋಡುತ್ತ ರಂಗಮ್ಮ ಕೇಳಿದರು:
"ಎಷ್ಟು ಮಕ್ಕಳು ?"
"ಸದ್ಯಕ್ಕೆ ಒಂದೇನು, ಹೆಣ್ಣು, ಎರಡು ವರ್ಷದ್ದು,"
"ನನಗೂ ಇಬ್ಬರು, ಹೆಣ್ಣು ಮಕ್ಕಳು ದೊಡ್ಡವರೂಂತಿಟ್ಕೊಳ್ಳಿ"
"ಹಾಗೇನು ಸಂತೋಷ."
"ನಿಮ್ಮ ತಾಯಿನೂ ಇದಾರೋ."
"ಯಾರೂ ಇಲ್ಲ ನಾವು ಮೂರೇ ಜನ."
ರಂಗಮ್ಮನಿಗೆ ಸಮಾಧಾನವೆಸಿಸಿತು. ಸಾಮಾನ್ಯವಾಗಿ, ಮನೆ ತುಂಬ ಮಕ್ಕಳಿ
ರಬೇಕು ಎಂದು ಹೇಳುವವರೇ ರಂಗಮ್ಮ. ಆದರೆ ವಠಾರ ತುಂಬ ಮಕ್ಕಳು, ಮಕ್ಕಳ
ತಾಯಂದಿರೇ ಇರಬೇಕೆಂಬ ವಿಷಯದಲ್ಲಿ ಅವರಿಗೆ ಬಿನ್ನಾಭಿಪ್ರಾಯವಿತ್ತು.
ತಮ್ಮ ವಠಾರದಲ್ಲಿ ವಾಸವಾಗಲು ಬೇಕಾದ ಅರ್ಹತೆ ಬಹಳ ಮಟ್ಟಿಗೆ ಆ
ಮನುಷ್ಯನಿಗೆ ಇದ್ದಂತೆ ರಂಗಮ್ಮನಿಗೆ ತೋರಿತು ಆದರೂ ಅವರ ಪ್ರಶ್ನಾವಳಿ ಕೊನೆ
ಮುಟ್ಟಿರಲಿಲ್ಲ.
"ಎಲ್ಲಿ ಕೆಲಸ?"
ಹಿಂದಿನ ಕಾಲದಲ್ಲಿ ಬ್ರಾಹ್ಮಣನನ್ನು ಯಾರೂ ಹಾಗೆ ಕೇಳುತ್ತಿದ್ದರು? ಆದರೆ
ಈಗ ಆ ಪ್ರಶ್ನೆಯನ್ನು ಸ್ಪಷ್ಟವಾಗಿ ಕೇಳುವುದಿಲ್ಲ ಅಗತ್ಯವಿತ್ತು ಗಾದೆಯೇ ಇರಲಿಲ್ಲವೇ?
ಉದ್ಯೋಗಂ...
"ನಾನು ಪೇಂಟರ್."
ರಂಗಮ್ಮನಿಗೆ ಅರ್ಥವಾಗಲಿಲ್ಲ.
"ಆಠಾರಾ ಕಛೇರಿಯಲ್ಲಿದೀರಾ?"
"ಇಲ್ಲ. ನನು ಚಿತ್ರ ಬರೀತೀನಿ ಬಣ್ಣದ್ದು ಬೋರ್ಡು ಬರೀತೀನಿ."
" ಓ.."
ಸ್ವರವನ್ನು ಸ್ಲಲ್ಪ ದೀರ್ಘವಾಗಿಯೇ ರಂಗಮ್ಮ ಎಳೆದರು. ಅವರಿಗೆ ನಿರಾಶೆ
ಯಾಯಿತು ಆದರೂ, ತನ್ನ ಉದ್ಗಾರದೊಡನೆ ನೆಲೆಸಿದ ಮೌನವನ್ನು ಮುರಿದು,
ಅವರು ಮಾತು ಮುಂದುವರಿಸಿದರು.
"ಎಷ್ಟು ಬರುತ್ತೆ ಸಂಬಳ?"
ಯಾರನ್ನೂ 'ಸಂಬಳ' ಎಷ್ಟು ಎಂದು ಕೇಳಕೂಡದೆಂದು ರಂಗಮ್ಮನ ಮಗ
ತಾಯಿಗೆ ಭೋಧನೆ ಮಾಡಿದ್ದ. ಹಾಗೆ ಕೇಳುವುದು ಸರಿಯಲ್ಲವೆಂಬುದನ್ನು ಮನ
ಗಾಣಿಸಿಕೊಡಲು ಬಹಳ ಪ್ರಯಾಸಪಟ್ಟಿದ್ದ ಆದರೆ ಬಾಡಿಗೆಗೆ ಮನೆ ಕೇಳಲು ಬರುವವ
ರನ್ನು ಆ ರೀತಿ ಪ್ರಶ್ನಿಸದೆ ಅನ್ಯಗತಿಯೇ ಇರಲಿಲ್ಲ ಹೀಗಾಗಿ ಪ್ರಶ್ನೆಯ ಜೊತೆಯಲ್ಲೇ