ಪುಟ:Banashankari.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಬನಶಂಕರಿ ವ್ಯಾಕುಲಗೊಂಡು ರಂಗ ಕೇಳಿದ: "ಏನಮ್ಮೀ ಕಣ್ಣಿಗೆ ಕಸ ಬಿತ್ತೆ ?" “ ಹೂಂ ಕಣೋ.” "ಅಜ್ಜಿನಾ ಕೂಗ್ಲಾ ? “ ಬೇಡ ಬೇಡ..” .ಮಾವ ಎದು ಬಂದವರು ಸೊಸೆಯ ಕೆಲಸ ನೋಡಿದರು. ಅವರಿಗೆ ತಿಳಿಯ ದಂತೆಯೇ ನಿಟ್ಟುಸಿರೊಂದು ಹೊರಬಿತ್ತು.ಚಿನ್ನದಂತಹ ಸೊಸೆ, ಮುಖ್ಯ, ತಾವು ಭಾಗ್ಯ ವಂತರಲ್ಲ. ಅವರ ಆ ಯೋಚನೆಗಳನ್ನು ಬದಿಗೊತ್ತಲು ನೆರವಾಗುವಂತೆ ರಂಗ ಕೇಳಿದ : "ಗಾಡಿಯವನು ಎತುಗಳಿಗೆ ಹುರುಳಿ ತಿನ್ಸಿದ್ನಾ ಅಪ್ಪಯ್ಯ ?" “ ಹೂಂ.” ' ಹುಲ್ಲು–ನೀರು ?" "ಅದೂನೂ.. ಯಾಕೆ–ಎತ್ತುಗಳನ್ನು ನೋಡಿಕೊಂಡು ಬರ್ಬೇಕೇನೂ ? ನಡಿ, ಅಂಗಿ ಹಾಕ್ಕೋ. ಹಾಗೆ, ಬೇಗನೇ ಬರುವುದಾಗಿ ಹೇಳಿ ಮಾವ ರಂಗನನ್ನು ಕರೆದುಕೊಂಡು ಹೋದರು. ...ಅವರು ಹೇಳಿದಂತೆಯೇ ಬೇಗನೆ ಬಂದರು. ಆದರೆ ರಾಮಕೃಷ್ಣ ಬರಲಿಲ್ಲ. ಮುಚ್ಚಂಜೆಯಾಯಿತು, ಹೊತ್ತು ಕಂತಿ ಕತ್ತಲಾಯಿತು. ಆದರೂ ರಾಮಕೃಷ್ಣನ ಸುಳಿವಿಲ್ಲ. ಮಾವಯ್ಯ ಅಜ್ಜಿಯನ್ನು ಕೇಳಿದರು. ಅಜ್ಜಿ ಅಮ್ಮಿಯನ್ನು ಕೇಳಿದಳು. ಅಮ್ಮಿ ಮತ್ತೆ ಮತ್ತೆ "ಬೇಗ್ಬರ್ತೀನಿ ಅಂದಿದ್ದ," ಎಂಬ ಮಂತ್ರವನ್ನೇ ಜಪಿಸಿದಳು. ಸ್ನೇಹಿತರ ಜತೇಲಿ ಮಾತಾಡ್ತಾ ನಿಂತನೇನೋ ? " ಎಂದರು ಮಾವ. " ಅವನು ಯಾವಾಗಲೂ ಅಷ್ಟೆ, ಹೇಳಿದ ಹೊತ್ತಿಗೆ ಯಾವತ್ತೂ ಬಂದೋನಲ್ಲ." ಎಂದು ಅಜ್ಜಿ ಸಮಾಧಾನಗೊಳಿಸುವ ಮಾತನಾಡಿದಳು. ತನಗೆ ಬೆಂಬಲ ದೊರೆಯಲೆಂದು ಅಜ್ಜಿ ಮೊಮ್ಮಗಳತ್ತ ತಿರುಗಿ, " ಅಲ್ವೆ ಅಮ್ಮಿ ? " ಎಂದಳು. ಅಮ್ಮಿ ಹೌದಲೆನ್ನಲೂ ಇಲ್ಲ; ಅಲ್ಲವೆನ್ನಲೂ ಇಲ್ಲ.ಅವಳ ನೋಟ ಅಂಗಳದಾಚೆಗೆ ಕತ್ತಲೆಯನ್ನು ಸೀಳಿಕೊಂಡು ದೂರ ದೂರ ಸಂಚರಿಸಲು ಯತ್ನಿಸುತ್ತಿತ್ತು, ಎಲ್ಲಿರಬಹುದು ತನ್ನಣ್ಣ? ಕಾವೇರಿಯ ಮನೆಯಲ್ಲೆ ? ಗೌಡರ ಮನೆಯಲ್ಲೆ ? ಎಲ್ಲಿ? ಎಲ್ಲಿ ? ಆಕೆಯ ಹೃದಯ ಡವಡವನೆ ಹೊಡೆದುಕೊಳ್ಳುತ್ತ ? ಬಹಳ ಹೊತು ಆಕೆಗೆ ಉತ್ತರ ದೊರೆಯಲಿಲ್ಲ. ಕೊನೆಗೆ ಉತ್ತರ ರೂಪವಾಗಿ ಆತನೇ ಬಂದ. s:Յ 2o: Ե Շ:Ֆ-? " అమ్మి ! ఆః ! అమ్మి ! " ಗುರುತಿಸುವುದು ಕಷ್ಟವೆನಿಸುವಷ್ಟು ಮಾರ್ಪಾಟು ಹೊಂದಿದ್ದ ರಾಮಕೃ r" ఆమ్మి ! ఆః ! ಅಮ್ಮಿ!! ಅಯ್ಯೋ!" ... さぶ さ。 ご.