ಪುಟ:Vimoochane.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

ಸಾಕು, ಗಾವುದ ದೂರ ಓಡುವ ವೀರರು ಇವರು. ಬಯನೆಟ್- ಮಿಲಿಟರಿ ಮುಂದೆ ಇವರು ಒಂದು ನಿಮಿಷವಾದರೂ ನಿಲ್ಲೋದು ಸಾಧ್ಯವೆ ?"

ಆದರೂ ಸತ್ಯಾಗ್ರಹಿಗಳ ಹೋರಾಟ ನೈತಿಕ ವಿಜಯ ಗಳಿಸು ತ್ತಿತ್ತು. ಜನತೆಯ ಮೇಲೆ ಆಗುತ್ತಿದ್ದ ಪರಿಣಾಮವನ್ನು ದುರ್ಲಕ್ಷಿಸು ವುದು ಸಾಧ್ಯವೇ ಇರಲಿಲ್ಲ.

ನಾನು ಮತ್ತೂ ಯೋಚಿಸುತ್ತಿದ್ದೆ. ಈಗ ಇರುವ ಸಮಾಜ ಇಂಥಾದ್ದು. ಇದಕ್ಕೆಲ್ಲಾ ಬ್ರಿಟಿಷರೆ ಕಾರಣ ಎನ್ನೋಣವೆ? ದೊಡ್ಡ ಮನುಷ್ಯ ರಾಮಸ್ವಾಮಿಯವರು ನನಗೆ ಎರಡೇ ರೂಪಾಯಿ ಕೊಟ್ಟುದಕ್ಕೆ, ನನಗೆ ವಿದ್ಯಾಭ್ಯಾಸ ದೊರೆಯದೇ ಹೋದುದಕ್ಕೆ, ನಾನೀಗ ಜೇಬುಗಳ್ಳನಾದುದಕ್ಕೆ, ಬ್ರಿಟಿಷರ ಆಳ್ವಿಕೆ ಕಾರಣವೆ? ಹೌದೆನ್ನಲು ಸಾಕಷ್ಟು ಸಮರ್ಥನೆ ನನ್ನಲ್ಲಿ ಇರಲ್ಲಿಲ್ಲ. ಸ್ವಾತಂತ್ರ್ಯದ ಹೆಸರಲ್ಲಿ ನಡೆದ ಹೋರಾಟವನ್ನು ನಾನು ವಿರೋಧಿಸುವುದು ಸಾಧ್ಯವೇ ಇರಲಿಲ್ಲ. ಆದರೆ ನಾನೂ ಕೂಡ ಅದಕ್ಕೆ ಧುಮುಕುವಷ್ಟರ ಮಟ್ಟಿಗೆ ನನ್ನನ್ನು ಅದು ಆಕರ್ಷಿಸಲಿಲ್ಲ.

ಆ ನಡುವೆ ನಾನೊಮ್ಮೆ ಕಾಹಿಲೆ ಬಿದ್ದು ಹಾಸಿಗೆ ಹಿಡಿದೆ. ನನ್ನ ಜೀವಮಾನದಲ್ಲಿ ನಾನು ಹಾಸಿಗೆ ಹಿಡಿಯುವಂತಾದುದು ಅದೇ ಮೊದಲ ಬಾರಿ ಮತ್ತು ಅದೇ ಕೊನೆಯ ಬಾರಿ. ಅದು ವಿಷನು ಜ್ವರ. ಅಮೀರ್ ಅದೇನು ಏರ್ಪಾಟು ಮಾಡಿದನೋ ನನಗೆ ತಿಳಿಯದು. ನನ್ನನ್ನು ಆತ ಆಸ್ಪತ್ರೆ ಸೇರಿಸಿದ. ಹದಿನಾಲ್ಕನೆಯ ದಿವಸದಿಂದ ನಾನು ಗುಣಮುಖನಾಗುತ್ತ ಬಂದೆ. ಅತ್ತಿಗೆ ಶೀಲ ಪ್ರತಿ ದಿನವೂ ಮಧ್ಯಾಹ್ನ ಬಂದು ಹೋಗುತ್ತಿದ್ದಳು. ಸಂಜೆ ಅಮೀರ್ ಬರುತ್ತಿದ್ದ. ಯಾವುದೇ ಒಂದು ದಿನ ಅತ್ತಿಗೆ ಬರುವುದು ತಡವಾದರೆ, ನನಗೆ ಬಲು ದುಃಖವಾಗುತ್ತಿತ್ತು. ಬಲು ಪ್ರಯಾಸದಿಂದ ನೋವನ್ನು ಹತ್ತಿಕ್ಕುತ್ತಿದ್ದೆ. ನನ್ನೋಡನೆ ಸಲಿಗೆಯಿಂದಿರುತ್ತಿದ್ದ ನರ್ಸ್, ಬಾಡಿದ ನನ್ನ ಮುಖವನ್ನು ನೋಡಿದ ಒಡನೆ,"ಏನು ನಿಮ್ಮತ್ತಿಗೆ ಬರ ಲಿಲ್ಲವಾ?" ಎಂದು ಕೇಳುತ್ತಿದ್ದಳು.