ಪುಟ:ಇಂದ್ರವಜ್ರ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಇನ್ನು ನೀನಲ್ಲದೆ ಮತ್ತಾರೂ ಹೋಗಲಾಡಿಸಲಾರರು, ಈಗ ನಾನು ಮಹಾ ವ್ಯಾಧಿಯಲ್ಲಿ ನರಳುತ್ತಿರುವೆನು, ನನ್ನ ದೇಹವು ಯಾವ ಕಾರ್ಯಕ್ಕೂ ಉಪಯೋಗವಿಲ್ಲದೆ ಇದೆ, ನನ್ನ ಕಮ್ಮ ವನ ನೀಗಲು ನೀನೊಬ್ಬನೇ ಶಕ್ತನು ಎಂದು ಮೊರೆಯಿ ಟ್ಯನು, ವಿಕ್ರಮನು ತಾನು ಸಂಪಾದಿಸಿದ್ದ ದಿವ್ಯಫಲವನ್ನು ತಡಮಾಡದೆ ಅವನಿಗೆ ಕೊಟ್ಟುಬಿಟ್ಟನು. ಭೋಜಮಹಾರಾ ಜರು ಹಾಗೇನಾದರೂ ಮಾಡಿರುವರೋ ? 17 ಭೋಜನು ತಲೆಬಾಗಿ ದನು, - ನಾಚಿಕೆಯಿಂದ ಲೋ ಏನೋ! ಹನ್ನೊಂದನೆಯ ಸಂಚಾಲಿಕೆಯ ಹೇಳಿದುದೇನಂದರೆ “ ಪಲಾಶ ನಗರವೆಂಬ ಊರಿನಬಳಿ ಕೈವಾಲಕವೆಂಬ ಬೆಟ್ಟವಿ ರುವುದು, ಅದರಲ್ಲಿ ಒಬ್ಬರಾಕ್ಷಸನು ವಾಸವಾಗಿದ್ದು, ಆಊರಿನ ಲ್ಲಿದ್ದವರನ್ನು ಬೇಕಾದಂತೆ ಭಕ್ಷಿಸುತ್ತಿದ್ದನು. ಆಜನರು ಅವ ನಿಗೆ ಏನುಮಾಡುವುದಕ್ಕೂ ಶಕ್ತಿಯಿಲ್ಲದೆ, ತಮ್ಮನ್ನೆಲ್ಲರನ್ನೂ ರಾಕ್ಷಸನು ಸಿಕ್ಕಿದಂತೆ ಕೊಲ್ಲದಿರಬೇಕೆಂದೂ, ತಾವೇ ದಿನಕ್ಕೂ ನಂತೆ ಸರದಿಯ ಮೇರೆಗೆ ಅವನ ಆಹಾರಕ್ಕಾಗಿ ಹೋಗುವಂ ತೆಯ ಅವನಿಗೆ ಹೇಳಿಕೊಂಡರು. ಅವನು ಹಾಗೆಯೇ ಒಪ್ಪ ಲು, ಕೆಲವ್ರದಿನ ಹಾಗೆಯೇ ನಡೆಯಿತು;-ಒಂದೊಂದು ದಿನ ಒಂದೊಂದು ಮನೆಯವರು ಕಳುಹುತ್ತಿದ್ದರು, ಒಂದುದಿನಬಬ ಮುದುಕನ ಮನೆಯಸರದಿ ಬಂತು, ಆಮನೆಯಲ್ಲಿದ್ದ ವರು ಒಬ್ಬ ಮುದುಕ, ಅವನ ಹೆಂಡತಿ ಮುದುಕಿ, ಅವನ ಮಗ ಹುಡುಗ ಮುದುಕನೇ ರಾಕ್ಷಸನಿಗೆ ಆಹಾರವಾಗಿಹೋದರೆ, ಮುದಕಿಯಾದ ಹೆಂಡತಿಯು ವಿಧವೆಯಾಗುವಳು ಮುದುಕಿಯು ಹೋದರೆ ಮಗನಿಗೆ ರಕ್ಷಕರಿಲ್ಲದೆ ಹೊಗುವರು, ಮಗನು ಹೋದರೆ